ಸಾಕ್ಷ್ಯಚಿತ್ರದ ವಿರುದ್ಧ ಮುಜಫ್ಫರ್ ಪುರದ ನಿವಾಸಿ, ರೈತ ಬೀರೇಂದ್ರ ಕುಮಾರ್ ಸಿಂಗ್ ಅವರು ಮತ್ತೊಂದು ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸಲ್ಲಿಸಿದ್ದರು. ‘ಈ ಸಾಕ್ಷ್ಯಚಿತ್ರವು ಮೋದಿ ವಿರುದ್ಧ ಪ್ರಚಾರ ಮಾತ್ರವಲ್ಲ, ಅವರ ಚಾರಿತ್ರ್ಯಕ್ಕೆ ಕಳಂಕ ತರುವುದಾಗಿದೆ. ಜೊತೆಗೆ ಹಿಂದೂ ವಿರೋಧಿ ಧೋರಣೆಯ ಸಾಕ್ಷ್ಯಚಿತ್ರವನ್ನು ನಿರ್ಮಿಸಿ ಭಾರತದ ಸೌಹಾರ್ದವನ್ನು ಹದಗೆಡಿಸುವ ಪ್ರಯತ್ನವಾಗಿದೆ’ ಎಂದು ವಾದಿಸಿದ್ದರು.