2021ರ ಮೇ 21ರಂದು ತಕ್ಷಣದಿಂದಲೇ ಜಾರಿಗೆ ಬರುವಂತೆ ಡೈರಿ ಫಾರ್ಮ್ಸ್ಗಳನ್ನು ಮುಚ್ಚಬೇಕು ಎಂದು ಪಶುಸಂಗೋಪನೆ ಇಲಾಖೆ ನಿರ್ದೇಶಕರಿಗೆ ಲಕ್ಷದ್ವೀಪದ ಆಡಳಿತ ಆದೇಶಿಸಿತ್ತು. ಹಸುಗಳು, ಎತ್ತು ಮತ್ತು ಕರುಗಳ ವಧೆಯನ್ನು ರದ್ದುಪಡಿಸುವ ಪ್ರಾಣಿ ಸಂರಕ್ಷಣೆ(ನಿಯಂತ್ರಣ) 2021ರ ಕಾಯ್ದೆ ಜಾರಿಗೆ ಡೈರಿ ಫಾರ್ಮ್ಸ್ಗಳನ್ನು ಮುಚ್ಚಿಸಲಾಗಿದೆ ಎಂದು ಆರೋಪಿಸಿ ಕವರಟ್ಟಿ ನಿವಾಸಿ ಅಜ್ಮಲ್ ಅಹ್ಮದ್ ಅವರು ಕೇರಳ ಹೈಕೋರ್ಟ್ ಮೊರೆ ಹೋಗಿದ್ದರು. ಆದರೆ, ಅಹ್ಮದ್ ಅವರ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಕೇರಳ ಹೈಕೋರ್ಟ್ ತಿರಸ್ಕರಿಸಿತ್ತು. ಈ ಹಿನ್ನೆಲೆಯಲ್ಲಿ ಅವರು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು. ಅಲ್ಲದೆ, ಲಕ್ಷದ್ವೀಪದಲ್ಲಿ ಶಾಲಾ ಮಕ್ಕಳ ಮಧ್ಯಾಹ್ನ ಊಟದ ಮೆನುವಿನಿಂದ ಮಾಂಸಾಹಾರ ಪದಾರ್ಥಗಳನ್ನು ತೆಗೆದು ಹಾಕಿರುವ ಬಗ್ಗೆ ಪ್ರಶ್ನಿಸಿದ್ದರು.