<p><strong>ನವದೆಹಲಿ</strong>: ಬ್ರಿಟನ್ನಲ್ಲಿ ತಾವು ನೀಡಿದ ಹೇಳಿಕೆ ಕುರಿತಂತೆ ಲೋಕಸಭೆಯಲ್ಲಿ ತಮ್ಮ ವಿರುದ್ಧ ಕೇಂದ್ರ ಸಚಿವರು ಮಾಡಿರುವ ಆಧಾರ ರಹಿತ ಮತ್ತು ಅನುಚಿತ ಆರೋಪಗಳ ಬಗ್ಗೆ ಸಂಸತ್ತಿನಲ್ಲಿ ಪ್ರತಿಕ್ರಿಯಿಸುವ ಹಕ್ಕು ನನಗೆ ಇದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ.</p>.<p>ಈ ಕುರಿತಂತೆ ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರಿಗೆ ಪತ್ರ ಬರೆದಿರುವ ಗಾಂಧಿ, ವೈಯಕ್ತಿಕ ವಿವರಣೆಗೆ ಸಂಬಂಧಿಸಿದ ನಿಯಮ 357 ಅನ್ನು ಪ್ರಸ್ತಾಪಿಸಿದ್ದಾರೆ. ಜೋತಿರಾದಿತ್ಯ ಸಿಂಧ್ಯಾ ಹೇಳಿಕೆ ಬಗ್ಗೆ ವಿವರಣೆ ನೀಡಲು ಈ ಹಿಂದೆ ರವಿಶಂಕರ್ ಪ್ರಸಾದ್ ಈ ಹಕ್ಕನ್ನು ಬಳಸಿದ್ದ ಬಗ್ಗೆ ರಾಹುಲ್ ಪ್ರಸ್ತಾಪಿಸಿದ್ದಾರೆ.</p>.<p>'ನಾನು ಮತ್ತೆ ಅಂತಹ ವಿನಂತಿಯನ್ನು ಮಾಡುತ್ತಿದ್ದೇನೆ. ಸಂಸತ್ತಿನ ಸಂಪ್ರದಾಯಗಳು, ಸಂವಿಧಾನಾತ್ಮಕವಾಗಿ ಅಂತರ್ಗತವಾಗಿರುವ ಸಹಜ ನ್ಯಾಯದ ನಿಯಮಗಳು ಮತ್ತು ಲೋಕಸಭೆಯ ಕಾರ್ಯವಿಧಾನ ಹಾಗೂ ಕಾರ್ಯವಿಧಾನದ ನಿಯಮ 357ರ ಅಡಿಯಲ್ಲಿ ನಾನು ಈ ಅನುಮತಿಯನ್ನು ಕೇಳುತ್ತಿದ್ದೇನೆ’ಎಂದು ಸ್ಪೀಕರ್ಗೆ ಬರೆದಿರುವ ಪತ್ರದಲ್ಲಿ ರಾಹುಲ್ ಗಾಂಧಿ ತಿಳಿಸಿದ್ದಾರೆ.</p>.<p>‘ಸದನದ ಮುಂದೆ ಯಾವುದೇ ಪ್ರಶ್ನೆ ಇಲ್ಲದಿದ್ದರೂ ಒಬ್ಬ ಸದಸ್ಯರು ಸ್ಪೀಕರ್ ಅವರ ಅನುಮತಿಯೊಂದಿಗೆ ವೈಯಕ್ತಿಕ ವಿವರಣೆಯನ್ನು ನೀಡಬಹುದು, ಆದರೆ ಈ ಸಂದರ್ಭದಲ್ಲಿ ಯಾವುದೇ ಚರ್ಚಾಸ್ಪದ ವಿಷಯವನ್ನು ಮುಂದಕ್ಕೆ ತರಲಾಗುವುದಿಲ್ಲ ಮತ್ತು ಯಾವುದೇ ಚರ್ಚೆಯು ಉದ್ಭವಿಸುವುದಿಲ್ಲ’ ಎಂದು ನಿಯಮ 357 ಅನ್ನು ಉಲ್ಲೇಖಿಸಿ ಅವರು ಹೇಳಿದ್ದಾರೆ.</p>.<p>ಆಡಳಿತ ಪಕ್ಷದ ಸಂಸತ್ ಸದಸ್ಯರು ಸಂಸತ್ತಿನ ಒಳ ಮತ್ತು ಹೊರಗೆ ನನ್ನ ವಿರುದ್ಧ ಕೀಳುಮಟ್ಟದ ಮತ್ತು ಮಾನಹಾನಿಕರ ಹೇಳಿಕೆಗಳನ್ನು ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ನಿಯಮ 357ರಡಿ ವೈಯಕ್ತಿಕ ವಿವರಣೆ ನೀಡಲು ಅವಕಾಶ ಕೋರಿ ಮನವಿ ಸಲ್ಲಿಸುತ್ತಿದ್ದೇನೆ. ದಯವಿಟ್ಟು ನನಗೆ ಅನುವು ಮಾಡಿಕೊಡಬೇಕು ಎಂದು ರಾಹುಲ್ ಗಾಂಧಿಯವರು, ಸ್ಪೀಕರ್ಗೆ ವಿನಂತಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ</strong>: ಬ್ರಿಟನ್ನಲ್ಲಿ ತಾವು ನೀಡಿದ ಹೇಳಿಕೆ ಕುರಿತಂತೆ ಲೋಕಸಭೆಯಲ್ಲಿ ತಮ್ಮ ವಿರುದ್ಧ ಕೇಂದ್ರ ಸಚಿವರು ಮಾಡಿರುವ ಆಧಾರ ರಹಿತ ಮತ್ತು ಅನುಚಿತ ಆರೋಪಗಳ ಬಗ್ಗೆ ಸಂಸತ್ತಿನಲ್ಲಿ ಪ್ರತಿಕ್ರಿಯಿಸುವ ಹಕ್ಕು ನನಗೆ ಇದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ.</p>.<p>ಈ ಕುರಿತಂತೆ ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರಿಗೆ ಪತ್ರ ಬರೆದಿರುವ ಗಾಂಧಿ, ವೈಯಕ್ತಿಕ ವಿವರಣೆಗೆ ಸಂಬಂಧಿಸಿದ ನಿಯಮ 357 ಅನ್ನು ಪ್ರಸ್ತಾಪಿಸಿದ್ದಾರೆ. ಜೋತಿರಾದಿತ್ಯ ಸಿಂಧ್ಯಾ ಹೇಳಿಕೆ ಬಗ್ಗೆ ವಿವರಣೆ ನೀಡಲು ಈ ಹಿಂದೆ ರವಿಶಂಕರ್ ಪ್ರಸಾದ್ ಈ ಹಕ್ಕನ್ನು ಬಳಸಿದ್ದ ಬಗ್ಗೆ ರಾಹುಲ್ ಪ್ರಸ್ತಾಪಿಸಿದ್ದಾರೆ.</p>.<p>'ನಾನು ಮತ್ತೆ ಅಂತಹ ವಿನಂತಿಯನ್ನು ಮಾಡುತ್ತಿದ್ದೇನೆ. ಸಂಸತ್ತಿನ ಸಂಪ್ರದಾಯಗಳು, ಸಂವಿಧಾನಾತ್ಮಕವಾಗಿ ಅಂತರ್ಗತವಾಗಿರುವ ಸಹಜ ನ್ಯಾಯದ ನಿಯಮಗಳು ಮತ್ತು ಲೋಕಸಭೆಯ ಕಾರ್ಯವಿಧಾನ ಹಾಗೂ ಕಾರ್ಯವಿಧಾನದ ನಿಯಮ 357ರ ಅಡಿಯಲ್ಲಿ ನಾನು ಈ ಅನುಮತಿಯನ್ನು ಕೇಳುತ್ತಿದ್ದೇನೆ’ಎಂದು ಸ್ಪೀಕರ್ಗೆ ಬರೆದಿರುವ ಪತ್ರದಲ್ಲಿ ರಾಹುಲ್ ಗಾಂಧಿ ತಿಳಿಸಿದ್ದಾರೆ.</p>.<p>‘ಸದನದ ಮುಂದೆ ಯಾವುದೇ ಪ್ರಶ್ನೆ ಇಲ್ಲದಿದ್ದರೂ ಒಬ್ಬ ಸದಸ್ಯರು ಸ್ಪೀಕರ್ ಅವರ ಅನುಮತಿಯೊಂದಿಗೆ ವೈಯಕ್ತಿಕ ವಿವರಣೆಯನ್ನು ನೀಡಬಹುದು, ಆದರೆ ಈ ಸಂದರ್ಭದಲ್ಲಿ ಯಾವುದೇ ಚರ್ಚಾಸ್ಪದ ವಿಷಯವನ್ನು ಮುಂದಕ್ಕೆ ತರಲಾಗುವುದಿಲ್ಲ ಮತ್ತು ಯಾವುದೇ ಚರ್ಚೆಯು ಉದ್ಭವಿಸುವುದಿಲ್ಲ’ ಎಂದು ನಿಯಮ 357 ಅನ್ನು ಉಲ್ಲೇಖಿಸಿ ಅವರು ಹೇಳಿದ್ದಾರೆ.</p>.<p>ಆಡಳಿತ ಪಕ್ಷದ ಸಂಸತ್ ಸದಸ್ಯರು ಸಂಸತ್ತಿನ ಒಳ ಮತ್ತು ಹೊರಗೆ ನನ್ನ ವಿರುದ್ಧ ಕೀಳುಮಟ್ಟದ ಮತ್ತು ಮಾನಹಾನಿಕರ ಹೇಳಿಕೆಗಳನ್ನು ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ನಿಯಮ 357ರಡಿ ವೈಯಕ್ತಿಕ ವಿವರಣೆ ನೀಡಲು ಅವಕಾಶ ಕೋರಿ ಮನವಿ ಸಲ್ಲಿಸುತ್ತಿದ್ದೇನೆ. ದಯವಿಟ್ಟು ನನಗೆ ಅನುವು ಮಾಡಿಕೊಡಬೇಕು ಎಂದು ರಾಹುಲ್ ಗಾಂಧಿಯವರು, ಸ್ಪೀಕರ್ಗೆ ವಿನಂತಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>