<p><strong>ನವದೆಹಲಿ: </strong>ಆಗ್ರಾದ ತಾಜ್ಮಹಲ್ ಪ್ರವೇಶಿಸುತ್ತಿದ್ದ ಅಯೋಧ್ಯೆಯ ಜಗದ್ಗುರು ಪರಮಹಂಸ ದಾಸ್ ಸ್ವಾಮೀಜಿ ಅವರನ್ನು ಪೊಲೀಸರು ಮಂಗಳವಾರ ತಡೆದಿದ್ದಾರೆ.</p>.<p>ಅಕ್ಷಯ ತೃತೀಯ ದಿನದಂದು ಮಂತ್ರಗಳೊಂದಿಗೆ ತಾಜ್ ಮಹಲ್ ಅನ್ನು ಶುದ್ಧೀಕರಿಸುವುದಾಗಿ ಅವರು ಕೆಲ ದಿನಗಳ ಹಿಂದೆ ಘೋಷಿಸಿದ್ದರು.</p>.<p>ಈ ಹಿಂದೆ, ಏಪ್ರಿಲ್ 26 ರಂದು 'ಬ್ರಹ್ಮದಂಡ'ದೊಂದಿಗೆ ತಾಜ್ಮಹಲ್ ಆವರಣ ಪ್ರವೇಶಿಸಲು ಪ್ರಯತ್ನಿಸಿದ ಅವರನ್ನು ಪೊಲೀಸರು ತಡೆದಿದ್ದರು.</p>.<p>ತಮ್ಮನ್ನು ತಡೆದ ಪೊಲೀಸರ ಕ್ರಮಕ್ಕೆ ಸ್ವಾಮೀಜಿ ಆಕ್ರೋಶ ವ್ಯಕ್ತಪಡಿಸಿದರು. ಇತರ ಸಮುದಾಯದವರನ್ನು ಒಳಗೆ ಬಿಡುತ್ತಿರುವಾಗ ನನ್ನನ್ನು ಯಾಕೆ ಬಿಡುತ್ತಿಲ್ಲ. ನಾನು ಕೇಸರಿ ಬಟ್ಟೆ ಧರಿಸಿದ್ದರಿಂದ ತಡೆಯಲಾಗಿದೆ. ‘ನನ್ನನ್ನು ಅವಮಾನಿಸಿದ್ದಾರೆ. ಹಾಗಿದ್ದರೆ, ನನ್ನನ್ನು ಆಹ್ವಾನಿಸಿದ್ದು ಏಕೆ? ಎಂದು ಅವರು ಪ್ರಶ್ನೆ ಮಾಡಿದರು.</p>.<p>ಈ ಮಧ್ಯೆ, ತಾಜ್ ಮಹಲ್ ಒಳಗೆ ಪ್ರಾರ್ಥನೆ ಸಲ್ಲಿಸಲು ಅವಕಾಶ ನೀಡುವವರೆಗೆ ಆಹಾರ ಮತ್ತು ನೀರನ್ನು ತ್ಯಜಿಸುವುದಾಗಿ ಸ್ವಾಮೀಜಿ ಘೋಷಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ: </strong>ಆಗ್ರಾದ ತಾಜ್ಮಹಲ್ ಪ್ರವೇಶಿಸುತ್ತಿದ್ದ ಅಯೋಧ್ಯೆಯ ಜಗದ್ಗುರು ಪರಮಹಂಸ ದಾಸ್ ಸ್ವಾಮೀಜಿ ಅವರನ್ನು ಪೊಲೀಸರು ಮಂಗಳವಾರ ತಡೆದಿದ್ದಾರೆ.</p>.<p>ಅಕ್ಷಯ ತೃತೀಯ ದಿನದಂದು ಮಂತ್ರಗಳೊಂದಿಗೆ ತಾಜ್ ಮಹಲ್ ಅನ್ನು ಶುದ್ಧೀಕರಿಸುವುದಾಗಿ ಅವರು ಕೆಲ ದಿನಗಳ ಹಿಂದೆ ಘೋಷಿಸಿದ್ದರು.</p>.<p>ಈ ಹಿಂದೆ, ಏಪ್ರಿಲ್ 26 ರಂದು 'ಬ್ರಹ್ಮದಂಡ'ದೊಂದಿಗೆ ತಾಜ್ಮಹಲ್ ಆವರಣ ಪ್ರವೇಶಿಸಲು ಪ್ರಯತ್ನಿಸಿದ ಅವರನ್ನು ಪೊಲೀಸರು ತಡೆದಿದ್ದರು.</p>.<p>ತಮ್ಮನ್ನು ತಡೆದ ಪೊಲೀಸರ ಕ್ರಮಕ್ಕೆ ಸ್ವಾಮೀಜಿ ಆಕ್ರೋಶ ವ್ಯಕ್ತಪಡಿಸಿದರು. ಇತರ ಸಮುದಾಯದವರನ್ನು ಒಳಗೆ ಬಿಡುತ್ತಿರುವಾಗ ನನ್ನನ್ನು ಯಾಕೆ ಬಿಡುತ್ತಿಲ್ಲ. ನಾನು ಕೇಸರಿ ಬಟ್ಟೆ ಧರಿಸಿದ್ದರಿಂದ ತಡೆಯಲಾಗಿದೆ. ‘ನನ್ನನ್ನು ಅವಮಾನಿಸಿದ್ದಾರೆ. ಹಾಗಿದ್ದರೆ, ನನ್ನನ್ನು ಆಹ್ವಾನಿಸಿದ್ದು ಏಕೆ? ಎಂದು ಅವರು ಪ್ರಶ್ನೆ ಮಾಡಿದರು.</p>.<p>ಈ ಮಧ್ಯೆ, ತಾಜ್ ಮಹಲ್ ಒಳಗೆ ಪ್ರಾರ್ಥನೆ ಸಲ್ಲಿಸಲು ಅವಕಾಶ ನೀಡುವವರೆಗೆ ಆಹಾರ ಮತ್ತು ನೀರನ್ನು ತ್ಯಜಿಸುವುದಾಗಿ ಸ್ವಾಮೀಜಿ ಘೋಷಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>