<p><strong>ಇಡುಕ್ಕಿ</strong>: ಮೋಸ ಮಾಡಿ ದುಡ್ಡು ಮಾಡಲು ಕೆಲವರು ಎಂತಹಉಪಾಯಗಳನ್ನು ಮಾಡುತ್ತಾರೆ ಎನ್ನುವುದಕ್ಕೆ ಇಲ್ಲೊಂದು ತಾಜಾ ನಿದರ್ಶನ ಸಿಕ್ಕಿದೆ.</p>.<p>ಹೌದು, ವ್ಯಕ್ತಿಯೊಬ್ಬ ಬೆಕ್ಕನ್ನು ಹುಲಿ ಮರಿ ಎಂದು ಅದನ್ನು ಮಾರಾಟ ಮಾಡಲು ಹೋಗಿ ಸಿಕ್ಕಿಬಿದ್ದಿರುವ ಘಟನೆ ಕೇರಳದ ಇಡುಕ್ಕಿ ಜಿಲ್ಲೆಯಲ್ಲಿ ನಡೆದಿದೆ.</p>.<p>ಘಟನೆಗೆ ಸಂಬಂಧಿಸಿದಂತೆ ತಮಿಳುನಾಡಿನ ತಿರುವನ್ನಮಲೈ ಮೂಲದ ಪ್ರತಿಭನ್ (24) ಎನ್ನುವನನ್ನು ಚೆನ್ನೈ ಪೊಲೀಸರ ಸಹಕಾರದೊಂದಿಗೆ ಕೇರಳ ಅರಣ್ಯ ಪೊಲೀಸ್ ಬಂಧಿಸಿದ್ದಾರೆ ಎಂದು ಡಿಜಿವರ್ಲ್ಡ್ ಡಾಟ್ಕಾಮ್ ವರದಿ ಮಾಡಿದೆ.</p>.<p>ಪ್ರತಿಭನ್ ಕೆಲ ದಿನಗಳ ಹಿಂದೆ ತನ್ನ ಬಳಿ ಹುಲಿ ಮರಿಯಿದೆ, ಅದನ್ನು ‘₹ 25 ಲಕ್ಷ ರೂಪಾಯಿ ಕೊಟ್ಟರೆ ನಿಮಗೇ ಕೊಡುತ್ತೇನೆ ಎಂದು ವಾಟ್ಸ್ಆ್ಯಪ್ ಸೇರಿದಂತೆ ಸಾಮಾಜಿಕ ಜಾಲತಾಣದಲ್ಲಿ ಹಾಕಿಕೊಂಡಿದ್ದ. ಈ ಸಂದೇಶ ಪೊಲೀಸ್ ಅಧಿಕಾರಿಗಳ ಗಮನಕ್ಕೆ ಬಂದ ತಕ್ಷಣ ಅವರು ಪ್ರತಿಭನ್ಗಾಗಿ ಹುಡುಕಾಟ ನಡೆಸಿದ್ದರು.</p>.<p>ತಿರುವನ್ನಮಲೆಯ ಮನೆಯಲ್ಲಿ ಪ್ರತಿಭನ್ ಸಿಗದಿದ್ದಾಗ ಸ್ಥಳೀಯ ಪೊಲೀಸರ ನೆರವಿನಿಂದ ಊರಿನ ಹೊರವಲಯದಲ್ಲಿ ಆತನನ್ನು ಬಂಧಿಸಿದಾಗ ನಿಜಕ್ಕೂ ಹೌಹಾರಿದ್ದು ಪೊಲೀಸ್ ಅಧಿಕಾರಿಗಳು!</p>.<p>ಏಕೆಂದರೆ ಪ್ರತಿಭನ್. ಬೆಕ್ಕಿಗೆ ಹುಲಿ ಮರಿ ರೀತಿ ಬಣ್ಣ ಬಳಿದು ಅದಕ್ಕೆ ಆಹಾರ ತಿನ್ನಿಸುವ ಫೋಟೊಗಳನ್ನು ತನ್ನ ಬಳಿ ಇಟ್ಟುಕೊಂಡಿದ್ದ. ಬೆಕ್ಕಿನ ಸಮೇತ ಈತನನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.</p>.<p><a href="https://www.prajavani.net/district/bengaluru-city/traffic-jam-in-bengaluru-a-doctor-rushed-to-operation-theater-through-running-971324.html" itemprop="url">ಟ್ರಾಫಿಕ್ ಜಾಮ್ ಆಗಿದ್ದಕ್ಕೆ ರೋಗಿ ಜೀವ ಉಳಿಸಲು 3 ಕಿಮೀ ಓಡಿದ ಬೆಂಗಳೂರು ವೈದ್ಯ! </a></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಇಡುಕ್ಕಿ</strong>: ಮೋಸ ಮಾಡಿ ದುಡ್ಡು ಮಾಡಲು ಕೆಲವರು ಎಂತಹಉಪಾಯಗಳನ್ನು ಮಾಡುತ್ತಾರೆ ಎನ್ನುವುದಕ್ಕೆ ಇಲ್ಲೊಂದು ತಾಜಾ ನಿದರ್ಶನ ಸಿಕ್ಕಿದೆ.</p>.<p>ಹೌದು, ವ್ಯಕ್ತಿಯೊಬ್ಬ ಬೆಕ್ಕನ್ನು ಹುಲಿ ಮರಿ ಎಂದು ಅದನ್ನು ಮಾರಾಟ ಮಾಡಲು ಹೋಗಿ ಸಿಕ್ಕಿಬಿದ್ದಿರುವ ಘಟನೆ ಕೇರಳದ ಇಡುಕ್ಕಿ ಜಿಲ್ಲೆಯಲ್ಲಿ ನಡೆದಿದೆ.</p>.<p>ಘಟನೆಗೆ ಸಂಬಂಧಿಸಿದಂತೆ ತಮಿಳುನಾಡಿನ ತಿರುವನ್ನಮಲೈ ಮೂಲದ ಪ್ರತಿಭನ್ (24) ಎನ್ನುವನನ್ನು ಚೆನ್ನೈ ಪೊಲೀಸರ ಸಹಕಾರದೊಂದಿಗೆ ಕೇರಳ ಅರಣ್ಯ ಪೊಲೀಸ್ ಬಂಧಿಸಿದ್ದಾರೆ ಎಂದು ಡಿಜಿವರ್ಲ್ಡ್ ಡಾಟ್ಕಾಮ್ ವರದಿ ಮಾಡಿದೆ.</p>.<p>ಪ್ರತಿಭನ್ ಕೆಲ ದಿನಗಳ ಹಿಂದೆ ತನ್ನ ಬಳಿ ಹುಲಿ ಮರಿಯಿದೆ, ಅದನ್ನು ‘₹ 25 ಲಕ್ಷ ರೂಪಾಯಿ ಕೊಟ್ಟರೆ ನಿಮಗೇ ಕೊಡುತ್ತೇನೆ ಎಂದು ವಾಟ್ಸ್ಆ್ಯಪ್ ಸೇರಿದಂತೆ ಸಾಮಾಜಿಕ ಜಾಲತಾಣದಲ್ಲಿ ಹಾಕಿಕೊಂಡಿದ್ದ. ಈ ಸಂದೇಶ ಪೊಲೀಸ್ ಅಧಿಕಾರಿಗಳ ಗಮನಕ್ಕೆ ಬಂದ ತಕ್ಷಣ ಅವರು ಪ್ರತಿಭನ್ಗಾಗಿ ಹುಡುಕಾಟ ನಡೆಸಿದ್ದರು.</p>.<p>ತಿರುವನ್ನಮಲೆಯ ಮನೆಯಲ್ಲಿ ಪ್ರತಿಭನ್ ಸಿಗದಿದ್ದಾಗ ಸ್ಥಳೀಯ ಪೊಲೀಸರ ನೆರವಿನಿಂದ ಊರಿನ ಹೊರವಲಯದಲ್ಲಿ ಆತನನ್ನು ಬಂಧಿಸಿದಾಗ ನಿಜಕ್ಕೂ ಹೌಹಾರಿದ್ದು ಪೊಲೀಸ್ ಅಧಿಕಾರಿಗಳು!</p>.<p>ಏಕೆಂದರೆ ಪ್ರತಿಭನ್. ಬೆಕ್ಕಿಗೆ ಹುಲಿ ಮರಿ ರೀತಿ ಬಣ್ಣ ಬಳಿದು ಅದಕ್ಕೆ ಆಹಾರ ತಿನ್ನಿಸುವ ಫೋಟೊಗಳನ್ನು ತನ್ನ ಬಳಿ ಇಟ್ಟುಕೊಂಡಿದ್ದ. ಬೆಕ್ಕಿನ ಸಮೇತ ಈತನನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.</p>.<p><a href="https://www.prajavani.net/district/bengaluru-city/traffic-jam-in-bengaluru-a-doctor-rushed-to-operation-theater-through-running-971324.html" itemprop="url">ಟ್ರಾಫಿಕ್ ಜಾಮ್ ಆಗಿದ್ದಕ್ಕೆ ರೋಗಿ ಜೀವ ಉಳಿಸಲು 3 ಕಿಮೀ ಓಡಿದ ಬೆಂಗಳೂರು ವೈದ್ಯ! </a></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>