<p><strong>ಮುಂಬೈ: </strong>'ಇಂಡಿಯಾ' ಮೈತ್ರಿಕೂಟದ ಸ್ಥಿತಿಗತಿ ಕುರಿತು ಕಾಂಗ್ರೆಸ್ ಮಾತನಾಡಬೇಕು ಎಂದು ಶಿವಸೇನಾ (ಯುಬಿಟಿ) ಒತ್ತಾಯಿಸಿದೆ.</p><p>ಶಿವಸೇನಾ (ಯುಬಿಟಿ) ಮುಖವಾಣಿ 'ಸಾಮ್ನಾ'ದ ಸಂಪಾದಕೀಯದಲ್ಲಿ, ಕಾಂಗ್ರೆಸ್ ಪಕ್ಷವು ಅಹಮದಾಬಾದ್ನಲ್ಲಿ ನಡೆಸಿದ ಸಭೆಯಲ್ಲಿ ತನ್ನ ಬಗ್ಗೆಯಷ್ಟೇ ಮಾತನಾಡಿದೆ. ಇಂಡಿಯಾ ಕುರಿತು ಎಲ್ಲಿಯೂ ಚರ್ಚೆಯಾಗಿಲ್ಲ ಎಂದು ಹೇಳಿದೆ.</p><p>'ಲೋಕಸಭಾ ಚುನಾವಣೆ ನಂತರ ಇಂಡಿಯಾ ಬಣ ಎಲ್ಲಿದೆ ಎಂಬ ಪ್ರಶ್ನೆಗಳು ಎದ್ದಿವೆ. ಕಾಂಗ್ರೆಸ್ ಪಕ್ಷವು, ಅಹಮದಾಬಾದ್ ಸಭೆಯಲ್ಲಿ ಉತ್ತರಿಸಬೇಕಿತ್ತು' ಎಂದು ಉಲ್ಲೇಖಿಸಲಾಗಿದೆ.</p><p>'ಮೈತ್ರಿಕೂಟಕ್ಕೆ ಏನಾಯಿತು? ಅದು ಹೂತು ಹೋಯಿತೇ ಅಥವಾ ಗಾಳಿಯಲ್ಲಿ ಲೀನವಾಯಿತೇ? ಎಂಬ ಪ್ರಶ್ನೆಗಳಿಗೆ ಉತ್ತರಿಸುವ ಜವಾಬ್ದಾರಿ ಕಾಂಗ್ರೆಸ್ ಅಧ್ಯಕ್ಷರ ಮೇಲಿದೆ' ಎಂದೂ ಹೇಳಲಾಗಿದೆ.</p><p>ಬಿಹಾರ, ಗುಜರಾತ್ ಹಾಗೂ ಪಶ್ಚಿಮ ಬಂಗಾಳ ರಾಜ್ಯಗಳಲ್ಲಿ ನಡೆಯಲಿರುವ ವಿಧಾನಸಭೆ ಚುನಾವಣೆಗೆ ಸಂಬಂಧಿಸಿದಂತೆ ಕಾಂಗ್ರೆಸ್ನ ನಿಲುವು ಏನು ಎಂಬುದನ್ನೂ ಕಾಂಗ್ರೆಸ್ ಸ್ಪಷ್ಟಪಡಿಸಬೇಕು ಎಂದು ಒತ್ತಾಯಿಸಿರುವ ಸೇನಾ, 'ಇಲ್ಲವಾದರೆ, ಮತ್ತೊಮ್ಮೆ ಸೋಲನ್ನು ಸ್ವಾಗತಿಸಲು ಪಕ್ಷ ಸಿದ್ಧವಿದೆಯೇ' ಎಂದೂ ಕೇಳಿದೆ.</p><p>ಕಾಂಗ್ರೆಸ್ ಪಕ್ಷವು ಗುಜರಾತ್ನಲ್ಲಿ ಏಪ್ರಿಲ್ 8–9ರಂದು ಸಭೆ ನಡೆಸಿದೆ. ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಸೇರಿದಂತೆ ಹಿರಿಯ ಕಾಂಗ್ರೆಸ್ ನಾಯಕರು ಪಕ್ಷದ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದ್ದಾರೆ.</p>.ಪ್ರತಿ ಹಂತದಲ್ಲೂ ದಲಿತ–ಬಹುಜನರ ಇತಿಹಾಸ ಅಳಿಸಲು BJP-RSS ಯತ್ನ: ರಾಹುಲ್ ಗಾಂಧಿ.ಆಂಧ್ರ: ಟ್ರೋಲರ್ಗಳಿಗೆ, ಮಹಿಳಾ ಪೀಡಕರಿಗೆ ಸಿಎಂ ನಾಯ್ಡುರಿಂದ ರಾಜಾಶ್ರಯ– YSRCP.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮುಂಬೈ: </strong>'ಇಂಡಿಯಾ' ಮೈತ್ರಿಕೂಟದ ಸ್ಥಿತಿಗತಿ ಕುರಿತು ಕಾಂಗ್ರೆಸ್ ಮಾತನಾಡಬೇಕು ಎಂದು ಶಿವಸೇನಾ (ಯುಬಿಟಿ) ಒತ್ತಾಯಿಸಿದೆ.</p><p>ಶಿವಸೇನಾ (ಯುಬಿಟಿ) ಮುಖವಾಣಿ 'ಸಾಮ್ನಾ'ದ ಸಂಪಾದಕೀಯದಲ್ಲಿ, ಕಾಂಗ್ರೆಸ್ ಪಕ್ಷವು ಅಹಮದಾಬಾದ್ನಲ್ಲಿ ನಡೆಸಿದ ಸಭೆಯಲ್ಲಿ ತನ್ನ ಬಗ್ಗೆಯಷ್ಟೇ ಮಾತನಾಡಿದೆ. ಇಂಡಿಯಾ ಕುರಿತು ಎಲ್ಲಿಯೂ ಚರ್ಚೆಯಾಗಿಲ್ಲ ಎಂದು ಹೇಳಿದೆ.</p><p>'ಲೋಕಸಭಾ ಚುನಾವಣೆ ನಂತರ ಇಂಡಿಯಾ ಬಣ ಎಲ್ಲಿದೆ ಎಂಬ ಪ್ರಶ್ನೆಗಳು ಎದ್ದಿವೆ. ಕಾಂಗ್ರೆಸ್ ಪಕ್ಷವು, ಅಹಮದಾಬಾದ್ ಸಭೆಯಲ್ಲಿ ಉತ್ತರಿಸಬೇಕಿತ್ತು' ಎಂದು ಉಲ್ಲೇಖಿಸಲಾಗಿದೆ.</p><p>'ಮೈತ್ರಿಕೂಟಕ್ಕೆ ಏನಾಯಿತು? ಅದು ಹೂತು ಹೋಯಿತೇ ಅಥವಾ ಗಾಳಿಯಲ್ಲಿ ಲೀನವಾಯಿತೇ? ಎಂಬ ಪ್ರಶ್ನೆಗಳಿಗೆ ಉತ್ತರಿಸುವ ಜವಾಬ್ದಾರಿ ಕಾಂಗ್ರೆಸ್ ಅಧ್ಯಕ್ಷರ ಮೇಲಿದೆ' ಎಂದೂ ಹೇಳಲಾಗಿದೆ.</p><p>ಬಿಹಾರ, ಗುಜರಾತ್ ಹಾಗೂ ಪಶ್ಚಿಮ ಬಂಗಾಳ ರಾಜ್ಯಗಳಲ್ಲಿ ನಡೆಯಲಿರುವ ವಿಧಾನಸಭೆ ಚುನಾವಣೆಗೆ ಸಂಬಂಧಿಸಿದಂತೆ ಕಾಂಗ್ರೆಸ್ನ ನಿಲುವು ಏನು ಎಂಬುದನ್ನೂ ಕಾಂಗ್ರೆಸ್ ಸ್ಪಷ್ಟಪಡಿಸಬೇಕು ಎಂದು ಒತ್ತಾಯಿಸಿರುವ ಸೇನಾ, 'ಇಲ್ಲವಾದರೆ, ಮತ್ತೊಮ್ಮೆ ಸೋಲನ್ನು ಸ್ವಾಗತಿಸಲು ಪಕ್ಷ ಸಿದ್ಧವಿದೆಯೇ' ಎಂದೂ ಕೇಳಿದೆ.</p><p>ಕಾಂಗ್ರೆಸ್ ಪಕ್ಷವು ಗುಜರಾತ್ನಲ್ಲಿ ಏಪ್ರಿಲ್ 8–9ರಂದು ಸಭೆ ನಡೆಸಿದೆ. ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಸೇರಿದಂತೆ ಹಿರಿಯ ಕಾಂಗ್ರೆಸ್ ನಾಯಕರು ಪಕ್ಷದ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದ್ದಾರೆ.</p>.ಪ್ರತಿ ಹಂತದಲ್ಲೂ ದಲಿತ–ಬಹುಜನರ ಇತಿಹಾಸ ಅಳಿಸಲು BJP-RSS ಯತ್ನ: ರಾಹುಲ್ ಗಾಂಧಿ.ಆಂಧ್ರ: ಟ್ರೋಲರ್ಗಳಿಗೆ, ಮಹಿಳಾ ಪೀಡಕರಿಗೆ ಸಿಎಂ ನಾಯ್ಡುರಿಂದ ರಾಜಾಶ್ರಯ– YSRCP.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>