‘ಪಶ್ಚಿಮ ಬಂಗಾಳದಲ್ಲಿ ಶಿವಸೇನಾ ಸ್ಪರ್ಧಿಸುತ್ತದೆಯೇ ಇಲ್ಲವೇ ಎಂದು ಹಲವರು ಕೇಳಿದ್ದಾರೆ. ಪಕ್ಷದ ಅಧ್ಯಕ್ಷ ಉದ್ಧವ್ ಠಾಕ್ರೆ ಅವರ ಜತೆಗಿನ ಚರ್ಚೆಯ ನಂತರ ಈ ನಿರ್ಧಾರಕ್ಕೆ ಬರಲಾಗಿದೆ. ಬಂಗಾಳದಲ್ಲಿ ಶಿವಸೇನಾವು, ಮಮತಾ ದೀದಿ ಅವರಿಗೆ ತನ್ನ ಸಂಪೂರ್ಣ ಬೆಂಬಲ ನೀಡಲಿದೆ’ ಎಂದು ರಾವುತ್ ಘೋಷಿಸಿದ್ದಾರೆ. ಮನಿ, ಮಸಲ್ ಮತ್ತು ಮೀಡಿಯಾ ಎಂಬ ಎಲ್ಲಾ ‘ಎಂ’ಗಳನ್ನು ‘ಮ’ಮತಾ ದೀದಿ ವಿರುದ್ಧ ಬಳಸಲಾಗುತ್ತಿದೆ. ಹೀಗಾಗಿ ಪಶ್ಚಿಮ ಬಂಗಾಳ ಚುನಾವಣೆಯಲ್ಲಿ ಸ್ಪರ್ಧಿಸದೆ ಇರಲು ಶಿವಸೇನಾ ನಿರ್ಧರಿಸಿದೆ’ ಎಂದು ಅವರು ಹೇಳಿದ್ದಾರೆ.