<p><strong>ಮುಜಫ್ಫರ್ನಗರ (ಉತ್ತರ ಪ್ರದೇಶ):</strong> ಉತ್ತರ ಪ್ರದೇಶದಲ್ಲಿ ಮುಸ್ಲಿಂ ಪ್ರಾಬಲ್ಯವಿರುವ ಲೂಧಾವಾಲದಲ್ಲಿನ ಶಿವನ ದೇಗುಲವನ್ನು ಸುಮಾರು 31 ವರ್ಷಗಳ ಬಳಿಕ ಸೋಮವಾರ ತೆರೆಯಲಾಗಿದೆ. </p>.<p>ಈ ಶಿವ ದೇಗುಲವನ್ನು 1971ರಲ್ಲಿ ನಿರ್ಮಿಸಲಾಗಿತ್ತು. 1992ಲ್ಲಿ ನಡೆದ ಅಯೋಧ್ಯೆ ಗಲಭೆಯ ವೇಳೆ ಸ್ಥಳೀಯ ಹಿಂದೂಗಳು ದೇಗುಲದ ಮೂರ್ತಿ ಮತ್ತು ಶಿವಲಿಂಗವನ್ನು ತೆಗೆದುಕೊಂಡು ವಲಸೆ ಹೋಗಿದ್ದರು. ಆ ಬಳಿಕ ದೇಗುಲ ಮುಚ್ಚಿತ್ತು.</p>.<p>‘ಯಾವುದೇ ವಿಘ್ನಗಳಿಲ್ಲದೇ ಎಲ್ಲ ಕಾರ್ಯಕ್ರಮಗಳು ನಡೆದವು. ಸ್ವಾಮಿ ಯಶ್ವೀರ್ ಮಹಾರಾಜರ ನೇತೃತ್ವದಲ್ಲಿ ಹಿಂದೂಗಳು ಶಾಂತಿಯುತವಾಗಿ ಈ ಪ್ರದೇಶಕ್ಕೆ ಮರಳಿದರು’ ಎಂದು ನಗರ ಮ್ಯಾಜಿಸ್ಟ್ರೇಟ್ ವಿಕಾಸ್ ಕಶ್ಯಪ್ ಅವರು ತಿಳಿಸಿದ್ದಾರೆ.</p>.<p>ದೇಗುಲಕ್ಕೆ ಆಗಮಿಸಿದ ಹಿಂದೂಗಳ ಮೆರವಣಿಗೆಗೆ ಪುಷ್ಪವೃಷ್ಟಿ ಮಾಡುವ ಮೂಲಕ ಮುಸ್ಲಿಮರು ಸ್ವಾಗತಿಸಿದರು.</p>.<p>‘ಹಲವು ವರ್ಷಗಳಿಂದ ಮುಚ್ಚಿದ್ದ ದೇಗುಲವನ್ನು ಹವನದ ಮೂಲಕ ಶುದ್ಧೀಕರಣ ಮಾಡಿ ತೆರೆಯಲಾಯಿತು’ ಎಂದು ಸ್ವಾಮಿ ಯಶ್ವೀರ್ ಮಹಾರಾಜರು ಹರ್ಷ ವ್ಯಕ್ತಪಡಿಸಿದರು.</p>.<p>ಸಂಭಲ್ನಲ್ಲಿ 46 ವರ್ಷಗಳಿಂದ ಮುಚ್ಚಿದ್ದ ಹಿಂದೂ ದೇಗುಲವನ್ನು ಡಿ.13ರಂದು ತೆರೆಯಲಾಗಿದ್ದು, ಆ ಪ್ರದೇಶದಲ್ಲಿ ಉತ್ಖನನ ನಡೆಯುತ್ತಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮುಜಫ್ಫರ್ನಗರ (ಉತ್ತರ ಪ್ರದೇಶ):</strong> ಉತ್ತರ ಪ್ರದೇಶದಲ್ಲಿ ಮುಸ್ಲಿಂ ಪ್ರಾಬಲ್ಯವಿರುವ ಲೂಧಾವಾಲದಲ್ಲಿನ ಶಿವನ ದೇಗುಲವನ್ನು ಸುಮಾರು 31 ವರ್ಷಗಳ ಬಳಿಕ ಸೋಮವಾರ ತೆರೆಯಲಾಗಿದೆ. </p>.<p>ಈ ಶಿವ ದೇಗುಲವನ್ನು 1971ರಲ್ಲಿ ನಿರ್ಮಿಸಲಾಗಿತ್ತು. 1992ಲ್ಲಿ ನಡೆದ ಅಯೋಧ್ಯೆ ಗಲಭೆಯ ವೇಳೆ ಸ್ಥಳೀಯ ಹಿಂದೂಗಳು ದೇಗುಲದ ಮೂರ್ತಿ ಮತ್ತು ಶಿವಲಿಂಗವನ್ನು ತೆಗೆದುಕೊಂಡು ವಲಸೆ ಹೋಗಿದ್ದರು. ಆ ಬಳಿಕ ದೇಗುಲ ಮುಚ್ಚಿತ್ತು.</p>.<p>‘ಯಾವುದೇ ವಿಘ್ನಗಳಿಲ್ಲದೇ ಎಲ್ಲ ಕಾರ್ಯಕ್ರಮಗಳು ನಡೆದವು. ಸ್ವಾಮಿ ಯಶ್ವೀರ್ ಮಹಾರಾಜರ ನೇತೃತ್ವದಲ್ಲಿ ಹಿಂದೂಗಳು ಶಾಂತಿಯುತವಾಗಿ ಈ ಪ್ರದೇಶಕ್ಕೆ ಮರಳಿದರು’ ಎಂದು ನಗರ ಮ್ಯಾಜಿಸ್ಟ್ರೇಟ್ ವಿಕಾಸ್ ಕಶ್ಯಪ್ ಅವರು ತಿಳಿಸಿದ್ದಾರೆ.</p>.<p>ದೇಗುಲಕ್ಕೆ ಆಗಮಿಸಿದ ಹಿಂದೂಗಳ ಮೆರವಣಿಗೆಗೆ ಪುಷ್ಪವೃಷ್ಟಿ ಮಾಡುವ ಮೂಲಕ ಮುಸ್ಲಿಮರು ಸ್ವಾಗತಿಸಿದರು.</p>.<p>‘ಹಲವು ವರ್ಷಗಳಿಂದ ಮುಚ್ಚಿದ್ದ ದೇಗುಲವನ್ನು ಹವನದ ಮೂಲಕ ಶುದ್ಧೀಕರಣ ಮಾಡಿ ತೆರೆಯಲಾಯಿತು’ ಎಂದು ಸ್ವಾಮಿ ಯಶ್ವೀರ್ ಮಹಾರಾಜರು ಹರ್ಷ ವ್ಯಕ್ತಪಡಿಸಿದರು.</p>.<p>ಸಂಭಲ್ನಲ್ಲಿ 46 ವರ್ಷಗಳಿಂದ ಮುಚ್ಚಿದ್ದ ಹಿಂದೂ ದೇಗುಲವನ್ನು ಡಿ.13ರಂದು ತೆರೆಯಲಾಗಿದ್ದು, ಆ ಪ್ರದೇಶದಲ್ಲಿ ಉತ್ಖನನ ನಡೆಯುತ್ತಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>