ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಗೋಡ್ಸೆ ಭಾರತದ ಸುಪುತ್ರ’: ಗಿರಿರಾಜ್‌ ಸಿಂಗ್‌ ಹೇಳಿಕೆಗೆ ಸಿಬಲ್‌ ಟೀಕೆ

Published 10 ಜೂನ್ 2023, 14:44 IST
Last Updated 10 ಜೂನ್ 2023, 14:44 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಕೇಂದ್ರ ಸಚಿವ ಗಿರಿರಾಜ್‌ ಸಿಂಗ್‌ ಅವರು ‘ನಾಥುರಾಂ ಗೋಡ್ಸೆ ಭಾರತದ ಸುಪುತ್ರ’ ಎಂದು ನೀಡಿರುವ ಹೇಳಿಕೆಯನ್ನು ರಾಜ್ಯಸಭಾ ಸದಸ್ಯ ಕಪಿಲ್‌ ಸಿಬಲ್ ಶನಿವಾರ ಟೀಕಿಸಿದ್ದಾರೆ. ‘ಈ ಹೇಳಿಕೆ ನೀಡಿದ್ದಾರೆ ಎಂಬ ಕಾರಣಕ್ಕೆ ಹಲವರು ಈ ಬಿಜೆಪಿ ನಾಯಕನನ್ನು ದೇಶದ ಸುಪುತ್ರ ಎಂದು ಕರೆಯಲಾರರು’ ಎಂದಿದ್ದಾರೆ.

ಛತ್ತೀಸಗಢದ ದಾಂತೇವಾಡದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ್ದ ಗಿರಿರಾಜ್‌ ಸಿಂಗ್‌, ‘ಗೋಡ್ಸೆ, ಮಹಾತ್ಮ ಗಾಂಧಿ ಅವರನ್ನು ಹತ್ಯೆ ಮಾಡಿದ್ದರೂ ಆತ ಮೊಘಲ್‌ ದೊರೆಗಳಾದ ಬಾಬರ್‌ ಮತ್ತು ಔರಂಗಜೇಬರಂತೆ ಹೊರಗಿನಿಂದ ಬಂದ ವ್ಯಕ್ತಿಯಲ್ಲ. ಈ ದೇಶದ ಸುಪುತ್ರ’ ಎಂದಿದ್ದರು.

ಇದಕ್ಕೆ ಪ್ರತಿಕ್ರಿಯಿಸಿರುವ ಸಿಬಲ್‌, ‘ಹಂತಕರನ್ನು ಅವರ ಹುಟ್ಟಿನಿಂದ ಗುರುತಿಸಲಾಗದು. ಗಿರಿರಾಜ್‌ ಅವರ ಈ ಹೇಳಿಕೆಯನ್ನು ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹಸಚಿವ ಅಮಿತ್‌ ಶಾ ಅವರು ಖಂಡಿಸುವ ವಿಶ್ವಾಸ ಇದೆ’ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT