ತಮ್ಮ ‘ದಿ ಇಂಡಿಯ ವೇ’ ಪುಸ್ತಕದ ಮರಾಠಿ ಅನುವಾದ ‘ಭಾರತ್ ಮಾರ್ಗ್’ದ ಬಿಡುಗಡೆ ಸಮಾರಂಭದಲ್ಲಿ ಜನರ ಜೊತೆ ಜೈಶಂಕರ್ ಸಂವಾದ ನಡೆಸಿದರು. ಆ ವೇಳೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅವರು, ‘ಚೀನಾ ವಿಷಯದಲ್ಲಿ ಭಾರತದ ಸಾಮರ್ಥ್ಯದ ಕುರಿತು ವಿರೋಧ ಪಕ್ಷಗಳಿಗೆ ವಿಶ್ವಾಸ ಏಕೆ ಇಲ್ಲ ಎಂದರೆ, ಅವರು ರಾಜಕೀಯ ಉದ್ದೇಶಕ್ಕಾಗಿ ಅಪಪ್ರಚಾರ ಮಾಡುತ್ತಿದ್ದಾರೆ. ಹಾಗಾಗಿ ಬೇಕೆಂದೇ ಸುಳ್ಳು ಸುದ್ದಿ ಹರಡುತ್ತಿದ್ದಾರೆ’ ಎಂದರು.