<p><strong>ರಾಮಗಢ(ಜಾರ್ಖಂಡ್):</strong> ಅನಾರೋಗ್ಯದಿಂದ ಬಳಲುತ್ತಿರುವ ತಾಯಿಯನ್ನು ಕೋಣೆಯೊಂದರಲ್ಲಿ ಕೂಡಿ ಹಾಕಿರುವ ಒಬ್ಬ ವ್ಯಕ್ತಿ, ಪುಣ್ಯ ಸ್ನಾನಕ್ಕಾಗಿ ಪತ್ನಿ, ಮಕ್ಕಳು ಹಾಗೂ ಅತ್ತೆ–ಮಾವನ ಜೊತೆ ಮಹಾ ಕುಂಭಕ್ಕೆ ತೆರಳಿರುವ ಘಟನೆ ನಡೆದಿದೆ.</p>.<p>‘ಸೆಂಟ್ರಲ್ ಕೋಲ್ಫೀಲ್ಡ್ಸ್ ಲಿಮಿಟೆಡ್ (ಸಿಸಿಎಲ್) ನೌಕರ ಅಖಿಲೇಶಕುಮಾರ್, ತಾಯಿಯನ್ನು ಮನೆಯಲ್ಲಿ ಕೂಡಿ ಹಾಕಿ ಪ್ರಯಾಗರಾಜ್ಗೆ ತೆರಳಿದ್ದಾನೆ’ ಎಂದು ಪೊಲೀಸರು ಗುರುವಾರ ತಿಳಿಸಿದ್ದಾರೆ.</p>.<p>ರಾಮಗಢ ಪೊಲೀಸ್ ಠಾಣೆ ವ್ಯಾಪ್ತಿಯ ಸುಭಾಷ್ನಗರ ಕಾಲೊನಿಯಲ್ಲಿರುವ ಸಿಸಿಎಲ್ನ ಕ್ವಾರ್ಟರ್ಸ್ವೊಂದರಿಂದ, ಅಖಿಲೇಶಕುಮಾರ್ ತಾಯಿ, 65 ವರ್ಷದ ಸಂಜುದೇವಿ ಅವರನ್ನು ಬುಧವಾರ ರಕ್ಷಿಸಲಾಗಿದೆ ಎಂದು ರಾಮಗಢ ಪೊಲೀಸ್ ಅಧಿಕಾರಿ ಪರಮೇಶ್ವರ ಪ್ರಸಾದ್ ತಿಳಿಸಿದ್ಧಾರೆ.</p>.<p>‘ತಾಯಿಯನ್ನು ಮನೆಯಲ್ಲಿ ಸೋಮವಾರದಿಂದ ಕೂಡಿ ಹಾಕಿರುವ ಕುರಿತು ಮಗಳು ಚಾಂದಿನಿದೇವಿ ನೀಡಿದ ಮಾಹಿತಿ ಆಧರಿಸಿ, ಸಂಜು ದೇವಿ ಅವರನ್ನು ರಕ್ಷಿಸಲಾಗಿದೆ’ ಎಂದು ಪರಮೇಶ್ವರ ಪ್ರಸಾದ್ ತಿಳಿಸಿದ್ಧಾರೆ.</p>.<p>ಚಾಂದಿನಿದೇವಿ ಅವರು ಸಿಸಿಎಲ್ ವಸತಿಗೃಹಗಳಿಂದ ಐದು ಕಿ.ಮೀ. ದೂರದಲ್ಲಿರುವ ಊರಿನಲ್ಲಿ ವಾಸಿಸುತ್ತಿದ್ದಾರೆ. ತಾಯಿಯನ್ನು ಮನೆಯಲ್ಲಿ ಕೂಡಿ ಹಾಕಿ, ಎಲ್ಲರೂ ಪ್ರಯಾಗರಾಜ್ಗೆ ತೆರಳಿದ್ದರ ಕುರಿತು ನೆರೆಹೊರೆಯವರು ಅವರಿಗೆ ಮಾಹಿತಿ ನೀಡಿದ್ದರು. </p>.<p>‘ಮನೆ ಬೀಗ ಒಡೆದು ರಕ್ಷಿಸಿದ ಕೂಡಲೇ, ತಾಯಿಗೆ ನೆರೆಹೊರೆಯವರು ಊಟ ನೀಡಿದರು. ನಂತರ ಅವರನ್ನು ಸಿಸಿಎಲ್ ಆಸ್ಪತ್ರೆಗೆ ದಾಖಲಿಸಲಾಯಿತು’ ಎಂದು ಚಾಂದಿನಿದೇವಿ, ಸುದ್ದಿಗಾರರಿಗೆ ತಿಳಿಸಿದ್ದಾರೆ.</p>.<p>‘ಸಹೋದರ ಅಖಿಲೇಶಕುಮಾರ್ಗೆ ಅನುಕಂಪದ ಆಧಾರದ ಮೇಲೆ ಸಿಸಿಎಲ್ನಲ್ಲಿ ನೌಕರಿ ದೊರತಿದೆ’ ಎಂದೂ ಚಾಂದಿನಿ ದೇವಿ ತಿಳಿಸಿದ್ದಾರೆ.</p>.<p>‘ನನ್ನ ತಾಯಿ ಅನಾರೋಗ್ಯದಿಂದ ಬಳಲುತ್ತಿರುವ ಕಾರಣ, ಆಹಾರ, ಕುಡಿಯುವ ನೀರು, ಔಷಧ ಸೇರಿದಂತೆ ಎಲ್ಲ ವ್ಯವಸ್ಥೆ ಮಾಡಿಯೇ ಪ್ರಯಾಗರಾಜ್ಗೆ ತೆರಳಿದ್ದೇವೆ ಎಂದು ಅಖಿಲೇಶಕುಮಾರ್ ತಿಳಿಸಿದ್ದಾರೆ’ ಎಂದು ಮತ್ತೊಬ್ಬ ಪೊಲೀಸ್ ಅಧಿಕಾರಿ ಹೇಳಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ರಾಮಗಢ(ಜಾರ್ಖಂಡ್):</strong> ಅನಾರೋಗ್ಯದಿಂದ ಬಳಲುತ್ತಿರುವ ತಾಯಿಯನ್ನು ಕೋಣೆಯೊಂದರಲ್ಲಿ ಕೂಡಿ ಹಾಕಿರುವ ಒಬ್ಬ ವ್ಯಕ್ತಿ, ಪುಣ್ಯ ಸ್ನಾನಕ್ಕಾಗಿ ಪತ್ನಿ, ಮಕ್ಕಳು ಹಾಗೂ ಅತ್ತೆ–ಮಾವನ ಜೊತೆ ಮಹಾ ಕುಂಭಕ್ಕೆ ತೆರಳಿರುವ ಘಟನೆ ನಡೆದಿದೆ.</p>.<p>‘ಸೆಂಟ್ರಲ್ ಕೋಲ್ಫೀಲ್ಡ್ಸ್ ಲಿಮಿಟೆಡ್ (ಸಿಸಿಎಲ್) ನೌಕರ ಅಖಿಲೇಶಕುಮಾರ್, ತಾಯಿಯನ್ನು ಮನೆಯಲ್ಲಿ ಕೂಡಿ ಹಾಕಿ ಪ್ರಯಾಗರಾಜ್ಗೆ ತೆರಳಿದ್ದಾನೆ’ ಎಂದು ಪೊಲೀಸರು ಗುರುವಾರ ತಿಳಿಸಿದ್ದಾರೆ.</p>.<p>ರಾಮಗಢ ಪೊಲೀಸ್ ಠಾಣೆ ವ್ಯಾಪ್ತಿಯ ಸುಭಾಷ್ನಗರ ಕಾಲೊನಿಯಲ್ಲಿರುವ ಸಿಸಿಎಲ್ನ ಕ್ವಾರ್ಟರ್ಸ್ವೊಂದರಿಂದ, ಅಖಿಲೇಶಕುಮಾರ್ ತಾಯಿ, 65 ವರ್ಷದ ಸಂಜುದೇವಿ ಅವರನ್ನು ಬುಧವಾರ ರಕ್ಷಿಸಲಾಗಿದೆ ಎಂದು ರಾಮಗಢ ಪೊಲೀಸ್ ಅಧಿಕಾರಿ ಪರಮೇಶ್ವರ ಪ್ರಸಾದ್ ತಿಳಿಸಿದ್ಧಾರೆ.</p>.<p>‘ತಾಯಿಯನ್ನು ಮನೆಯಲ್ಲಿ ಸೋಮವಾರದಿಂದ ಕೂಡಿ ಹಾಕಿರುವ ಕುರಿತು ಮಗಳು ಚಾಂದಿನಿದೇವಿ ನೀಡಿದ ಮಾಹಿತಿ ಆಧರಿಸಿ, ಸಂಜು ದೇವಿ ಅವರನ್ನು ರಕ್ಷಿಸಲಾಗಿದೆ’ ಎಂದು ಪರಮೇಶ್ವರ ಪ್ರಸಾದ್ ತಿಳಿಸಿದ್ಧಾರೆ.</p>.<p>ಚಾಂದಿನಿದೇವಿ ಅವರು ಸಿಸಿಎಲ್ ವಸತಿಗೃಹಗಳಿಂದ ಐದು ಕಿ.ಮೀ. ದೂರದಲ್ಲಿರುವ ಊರಿನಲ್ಲಿ ವಾಸಿಸುತ್ತಿದ್ದಾರೆ. ತಾಯಿಯನ್ನು ಮನೆಯಲ್ಲಿ ಕೂಡಿ ಹಾಕಿ, ಎಲ್ಲರೂ ಪ್ರಯಾಗರಾಜ್ಗೆ ತೆರಳಿದ್ದರ ಕುರಿತು ನೆರೆಹೊರೆಯವರು ಅವರಿಗೆ ಮಾಹಿತಿ ನೀಡಿದ್ದರು. </p>.<p>‘ಮನೆ ಬೀಗ ಒಡೆದು ರಕ್ಷಿಸಿದ ಕೂಡಲೇ, ತಾಯಿಗೆ ನೆರೆಹೊರೆಯವರು ಊಟ ನೀಡಿದರು. ನಂತರ ಅವರನ್ನು ಸಿಸಿಎಲ್ ಆಸ್ಪತ್ರೆಗೆ ದಾಖಲಿಸಲಾಯಿತು’ ಎಂದು ಚಾಂದಿನಿದೇವಿ, ಸುದ್ದಿಗಾರರಿಗೆ ತಿಳಿಸಿದ್ದಾರೆ.</p>.<p>‘ಸಹೋದರ ಅಖಿಲೇಶಕುಮಾರ್ಗೆ ಅನುಕಂಪದ ಆಧಾರದ ಮೇಲೆ ಸಿಸಿಎಲ್ನಲ್ಲಿ ನೌಕರಿ ದೊರತಿದೆ’ ಎಂದೂ ಚಾಂದಿನಿ ದೇವಿ ತಿಳಿಸಿದ್ದಾರೆ.</p>.<p>‘ನನ್ನ ತಾಯಿ ಅನಾರೋಗ್ಯದಿಂದ ಬಳಲುತ್ತಿರುವ ಕಾರಣ, ಆಹಾರ, ಕುಡಿಯುವ ನೀರು, ಔಷಧ ಸೇರಿದಂತೆ ಎಲ್ಲ ವ್ಯವಸ್ಥೆ ಮಾಡಿಯೇ ಪ್ರಯಾಗರಾಜ್ಗೆ ತೆರಳಿದ್ದೇವೆ ಎಂದು ಅಖಿಲೇಶಕುಮಾರ್ ತಿಳಿಸಿದ್ದಾರೆ’ ಎಂದು ಮತ್ತೊಬ್ಬ ಪೊಲೀಸ್ ಅಧಿಕಾರಿ ಹೇಳಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>