<p><strong>ಗಯಾ(ಬಿಹಾರ):</strong> ಭಾರತಕ್ಕೆ ಭೇಟಿ ನೀಡಿರುವ ಶ್ರೀಲಂಕಾ ಅಧ್ಯಕ್ಷ ಅನುರಾ ಕುಮಾರ ದಿಸ್ಸನಾಯಕೆ ಅವರು ಮಂಗಳವಾರ ಬಿಹಾರದ ಪ್ರಸಿದ್ಧ ಬೌದ್ಧ ಯಾತ್ರಾ ಸ್ಥಳವಾದ ಬೋಧ ಗಯಾದ ಮಹಾಬೋಧಿ ದೇವಾಲಯಕ್ಕೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದ್ದಾರೆ.</p><p>ಗಯಾ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತಲುಪಿದ ದಿಸ್ಸನಾಯಕೆ ಅವರು ನೇರವಾಗಿ 1,500 ವರ್ಷಗಳ ಇತಿಹಾಸವಿರುವ ಮಹಾಬೋಧಿ ದೇಗುಲಕ್ಕೆ ಭೇಟಿ ನೀಡಿದ್ದಾರೆ. ಬುದ್ಧನ ಜೀವನಕ್ಕೆ ಸಂಬಂಧಪಟ್ಟ ನಾಲ್ಕು ಪವಿತ್ರ ತಾಣಗಳಲ್ಲಿ ಇದು ಒಂದಾಗಿದೆ.</p><p>ಗಯಾ ಜಿಲ್ಲಾಧಿಕಾರಿ ತ್ಯಾಗರಾಜನ್ ಎಸ್.ಎಂ., ಬೋಧಗಯಾ ದೇವಸ್ಥಾನ ನಿರ್ವಹಣಾ ಸಮಿತಿ(ಬಿಟಿಎಂಸಿ) ಕಾರ್ಯದರ್ಶಿ ಮಹಾಶ್ವೇತ ಮಹಾರತಿ ಮತ್ತು ಇತರರು ದಿಸ್ಸನಾಯಕೆ ಅವರೊಂದಿಗೆ ಇದ್ದರು.</p>.<p>ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಬಿಟಿಎಂಸಿ ಕಾರ್ಯದರ್ಶಿ ಮಹಾರತಿ, ‘ದೇಗುಲದ ಗರ್ಭಗುಡಿಗೆ ಶ್ರೀಲಂಕಾ ಅಧ್ಯಕ್ಷರು ಪ್ರಾರ್ಥನೆ ಸಲ್ಲಿಸಿದ್ದಾರೆ. ಪವಿತ್ರ ಬೋಧಿ ವೃಕ್ಷ ಸೇರಿದಂತೆ ಬುದ್ಧನಿಗೆ ಸಂಬಂಧಪಟ್ಟ ಪ್ರಮುಖ ಸ್ಥಳಗಳಿಗೆ ಅವರು ಭೇಟಿ ನೀಡಿದರು’ ಎಂದು ಹೇಳಿದರು.</p><p>ಬೋಧ ಗಯಾಕ್ಕೆ ಭೇಟಿ ನೀಡಿರುವ ಕುರಿತು ಶ್ರೀಲಂಕಾ ಅಧ್ಯಕ್ಷರ ಮಾಧ್ಯಮ ವಿಭಾಗ ಎಕ್ಸ್ನಲ್ಲಿ ಪೋಸ್ಟ್ ಹಂಚಿಕೊಂಡಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಗಯಾ(ಬಿಹಾರ):</strong> ಭಾರತಕ್ಕೆ ಭೇಟಿ ನೀಡಿರುವ ಶ್ರೀಲಂಕಾ ಅಧ್ಯಕ್ಷ ಅನುರಾ ಕುಮಾರ ದಿಸ್ಸನಾಯಕೆ ಅವರು ಮಂಗಳವಾರ ಬಿಹಾರದ ಪ್ರಸಿದ್ಧ ಬೌದ್ಧ ಯಾತ್ರಾ ಸ್ಥಳವಾದ ಬೋಧ ಗಯಾದ ಮಹಾಬೋಧಿ ದೇವಾಲಯಕ್ಕೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದ್ದಾರೆ.</p><p>ಗಯಾ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತಲುಪಿದ ದಿಸ್ಸನಾಯಕೆ ಅವರು ನೇರವಾಗಿ 1,500 ವರ್ಷಗಳ ಇತಿಹಾಸವಿರುವ ಮಹಾಬೋಧಿ ದೇಗುಲಕ್ಕೆ ಭೇಟಿ ನೀಡಿದ್ದಾರೆ. ಬುದ್ಧನ ಜೀವನಕ್ಕೆ ಸಂಬಂಧಪಟ್ಟ ನಾಲ್ಕು ಪವಿತ್ರ ತಾಣಗಳಲ್ಲಿ ಇದು ಒಂದಾಗಿದೆ.</p><p>ಗಯಾ ಜಿಲ್ಲಾಧಿಕಾರಿ ತ್ಯಾಗರಾಜನ್ ಎಸ್.ಎಂ., ಬೋಧಗಯಾ ದೇವಸ್ಥಾನ ನಿರ್ವಹಣಾ ಸಮಿತಿ(ಬಿಟಿಎಂಸಿ) ಕಾರ್ಯದರ್ಶಿ ಮಹಾಶ್ವೇತ ಮಹಾರತಿ ಮತ್ತು ಇತರರು ದಿಸ್ಸನಾಯಕೆ ಅವರೊಂದಿಗೆ ಇದ್ದರು.</p>.<p>ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಬಿಟಿಎಂಸಿ ಕಾರ್ಯದರ್ಶಿ ಮಹಾರತಿ, ‘ದೇಗುಲದ ಗರ್ಭಗುಡಿಗೆ ಶ್ರೀಲಂಕಾ ಅಧ್ಯಕ್ಷರು ಪ್ರಾರ್ಥನೆ ಸಲ್ಲಿಸಿದ್ದಾರೆ. ಪವಿತ್ರ ಬೋಧಿ ವೃಕ್ಷ ಸೇರಿದಂತೆ ಬುದ್ಧನಿಗೆ ಸಂಬಂಧಪಟ್ಟ ಪ್ರಮುಖ ಸ್ಥಳಗಳಿಗೆ ಅವರು ಭೇಟಿ ನೀಡಿದರು’ ಎಂದು ಹೇಳಿದರು.</p><p>ಬೋಧ ಗಯಾಕ್ಕೆ ಭೇಟಿ ನೀಡಿರುವ ಕುರಿತು ಶ್ರೀಲಂಕಾ ಅಧ್ಯಕ್ಷರ ಮಾಧ್ಯಮ ವಿಭಾಗ ಎಕ್ಸ್ನಲ್ಲಿ ಪೋಸ್ಟ್ ಹಂಚಿಕೊಂಡಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>