<p><strong>ಚೆನ್ನೈ/ನವದೆಹಲಿ (ಪಿಟಿಐ)</strong>: ಮೇ 24ರಂದು ನಡೆಯುವ ನೀತಿ ಆಯೋಗದ ಸಭೆಯಲ್ಲಿ ಭಾಗವಹಿಸಲು ದೆಹಲಿಗೆ ಬಂದಿರುವ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಶುಕ್ರವಾರ ಕಾಂಗ್ರೆಸ್ನ ಹಿರಿಯ ನಾಯಕರಾದ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಅವರನ್ನು ಭೇಟಿಯಾಗಿ ಚರ್ಚೆ ನಡೆಸಿದರು.</p>.<p>ದೆಹಲಿಗೆ ಬಂದಿಳಿದ ಸ್ಟಾಲಿನ್ ಅವರನ್ನು ಡಿಎಂಕೆಯ ಹಿರಿಯ ನಾಯಕ ಟಿ.ಆರ್.ಬಾಲು ನೇತೃತ್ವದಲ್ಲಿ ನಾಯಕರು ಬರಮಾಡಿಕೊಂಡರು. ಈ ಹಿಂದೆ ಕೊನೆಯದಾಗಿ 2021ರಲ್ಲಿ ನಡೆದ ನೀತಿ ಆಯೋಗದ ಸಭೆಯಲ್ಲಿ ಸ್ಟಾಲಿನ್ ಭಾಗವಹಿಸಿದ್ದರು.</p>.<p class="title">‘ಸೋನಿಯಾ ಗಾಂಧಿ ಹಾಗೂ ಸಹೋದರ ರಾಹುಲ್ ಗಾಂಧಿ ಅವರನ್ನು ದೆಹಲಿಯ ಅವರ ನಿವಾಸದಲ್ಲಿ ಭೇಟಿಯಾಗುವ ಪ್ರತಿ ಸಭೆಯಲ್ಲಿ ವಿಶೇಷತೆ ಇರುತ್ತದೆ. ನಿಜಕ್ಕೂ ಕುಟುಂಬದ ಸದಸ್ಯರನ್ನು ಭೇಟಿಯಾದಂತೆ ಭಾಸವಾಯಿತು’ ಎಂದು ಎಂ.ಕೆ.ಸ್ಟಾಲಿನ್ ಅವರು ‘ಎಕ್ಸ್’ನಲ್ಲಿ ಬರೆದುಕೊಂಡಿದ್ದಾರೆ.</p>.<p class="title">‘ನನ್ನ ಸಿದ್ಧಾಂತಕ್ಕೆ ನಾನು ಬದ್ಧನಾಗಿದ್ದೇನೆ. ನಿರಂತರ ಹೋರಾಟದ ಮೂಲಕ ತಮಿಳುನಾಡಿಗೆ ಬರಬೇಕಿರುವ ಅನುದಾನ ಪಡೆಯುತ್ತೇನೆ. ಕೇಂದ್ರದ ಅನುದಾನ ಪಡೆಯುವುದು ರಾಜ್ಯದ ಹಕ್ಕಾಗಿದ್ದು, ಈ ಕುರಿತು ಸಭೆಯಲ್ಲಿ ಧ್ವನಿಯೆತ್ತುತ್ತೇನೆ’ ಎಂದು ಸ್ಟಾಲಿನ್ ಅವರು ಭೇಟಿಗೂ ಮುನ್ನ ತಿಳಿಸಿದ್ದರು.</p>.<p class="title">ನಾಲ್ಕು ವರ್ಷಗಳ ಬಳಿಕ ನೀತಿ ಆಯೋಗದ ಸಭೆಗೆ ಸ್ಟಾಲಿನ್ ಹಾಜರಾಗುತ್ತಿರುವ ಕುರಿತು ಎಐಎಡಿಎಂಕೆ ಪಕ್ಷ ಟೀಕಿಸಿದೆ.</p>.<p class="title">‘ಕೇವಲ ಕುಟುಂಬದ ಹಿತ ಕಾಪಾಡುವುದಕ್ಕಾಗಿಯೇ ಸ್ಟಾಲಿನ್ ಅವರು ದೆಹಲಿ ಪ್ರವಾಸ ಕೈಗೊಂಡಿದ್ದಾರೆ’ ಎಂದು ಎಐಎಡಿಎಂಕೆ ನಾಯಕ ಎಡಪ್ಪಾಡಿ ಕೆ. ಪಳನಿಸ್ವಾಮಿ ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಚೆನ್ನೈ/ನವದೆಹಲಿ (ಪಿಟಿಐ)</strong>: ಮೇ 24ರಂದು ನಡೆಯುವ ನೀತಿ ಆಯೋಗದ ಸಭೆಯಲ್ಲಿ ಭಾಗವಹಿಸಲು ದೆಹಲಿಗೆ ಬಂದಿರುವ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಶುಕ್ರವಾರ ಕಾಂಗ್ರೆಸ್ನ ಹಿರಿಯ ನಾಯಕರಾದ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಅವರನ್ನು ಭೇಟಿಯಾಗಿ ಚರ್ಚೆ ನಡೆಸಿದರು.</p>.<p>ದೆಹಲಿಗೆ ಬಂದಿಳಿದ ಸ್ಟಾಲಿನ್ ಅವರನ್ನು ಡಿಎಂಕೆಯ ಹಿರಿಯ ನಾಯಕ ಟಿ.ಆರ್.ಬಾಲು ನೇತೃತ್ವದಲ್ಲಿ ನಾಯಕರು ಬರಮಾಡಿಕೊಂಡರು. ಈ ಹಿಂದೆ ಕೊನೆಯದಾಗಿ 2021ರಲ್ಲಿ ನಡೆದ ನೀತಿ ಆಯೋಗದ ಸಭೆಯಲ್ಲಿ ಸ್ಟಾಲಿನ್ ಭಾಗವಹಿಸಿದ್ದರು.</p>.<p class="title">‘ಸೋನಿಯಾ ಗಾಂಧಿ ಹಾಗೂ ಸಹೋದರ ರಾಹುಲ್ ಗಾಂಧಿ ಅವರನ್ನು ದೆಹಲಿಯ ಅವರ ನಿವಾಸದಲ್ಲಿ ಭೇಟಿಯಾಗುವ ಪ್ರತಿ ಸಭೆಯಲ್ಲಿ ವಿಶೇಷತೆ ಇರುತ್ತದೆ. ನಿಜಕ್ಕೂ ಕುಟುಂಬದ ಸದಸ್ಯರನ್ನು ಭೇಟಿಯಾದಂತೆ ಭಾಸವಾಯಿತು’ ಎಂದು ಎಂ.ಕೆ.ಸ್ಟಾಲಿನ್ ಅವರು ‘ಎಕ್ಸ್’ನಲ್ಲಿ ಬರೆದುಕೊಂಡಿದ್ದಾರೆ.</p>.<p class="title">‘ನನ್ನ ಸಿದ್ಧಾಂತಕ್ಕೆ ನಾನು ಬದ್ಧನಾಗಿದ್ದೇನೆ. ನಿರಂತರ ಹೋರಾಟದ ಮೂಲಕ ತಮಿಳುನಾಡಿಗೆ ಬರಬೇಕಿರುವ ಅನುದಾನ ಪಡೆಯುತ್ತೇನೆ. ಕೇಂದ್ರದ ಅನುದಾನ ಪಡೆಯುವುದು ರಾಜ್ಯದ ಹಕ್ಕಾಗಿದ್ದು, ಈ ಕುರಿತು ಸಭೆಯಲ್ಲಿ ಧ್ವನಿಯೆತ್ತುತ್ತೇನೆ’ ಎಂದು ಸ್ಟಾಲಿನ್ ಅವರು ಭೇಟಿಗೂ ಮುನ್ನ ತಿಳಿಸಿದ್ದರು.</p>.<p class="title">ನಾಲ್ಕು ವರ್ಷಗಳ ಬಳಿಕ ನೀತಿ ಆಯೋಗದ ಸಭೆಗೆ ಸ್ಟಾಲಿನ್ ಹಾಜರಾಗುತ್ತಿರುವ ಕುರಿತು ಎಐಎಡಿಎಂಕೆ ಪಕ್ಷ ಟೀಕಿಸಿದೆ.</p>.<p class="title">‘ಕೇವಲ ಕುಟುಂಬದ ಹಿತ ಕಾಪಾಡುವುದಕ್ಕಾಗಿಯೇ ಸ್ಟಾಲಿನ್ ಅವರು ದೆಹಲಿ ಪ್ರವಾಸ ಕೈಗೊಂಡಿದ್ದಾರೆ’ ಎಂದು ಎಐಎಡಿಎಂಕೆ ನಾಯಕ ಎಡಪ್ಪಾಡಿ ಕೆ. ಪಳನಿಸ್ವಾಮಿ ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>