ಕನ್ನಡಿಗರ ಸಹಾಯಕ್ಕೆ ದೂರವಾಣಿ
ಪ್ರಯಾಗ್ರಾಜ್ನಲ್ಲಿ ಕಾಲ್ತುಳಿತದಲ್ಲಿ ಮೃತಪಟ್ಟ, ಗಾಯಗೊಂಡ ಕನ್ನಡಿಗರ ವಿವರ ಪಡೆಯಲು ಹಾಗೂ ಉತ್ತರ ಪ್ರದೇಶ ಸರ್ಕಾರದ ಜತೆ ಸಂವಹನ ನಡೆಸಲು ಐಎಎಸ್ ಅಧಿಕಾರಿ ಬೋಯರ್ ಹರ್ಷಲ್ ನಾರಾಯಣ್ರಾವ್ ಅವರನ್ನು ಕರ್ನಾಟಕ ಸರ್ಕಾರ ನೇಮಿಸಿದೆ. ಬೆಳಗಾವಿ ಜಿಲ್ಲಾಡಳಿತವು ಹೆಚ್ಚುವರಿ ಎಸ್ಪಿ ಶ್ರುತಿ, ವಿಶೇಷ ಜಿಲ್ಲಾಧಿಕಾರಿ ಹರ್ಷ ಶೆಟ್ಟಿ ಅವರನ್ನು ಪ್ರಯಾಗ್ರಾಜ್ಗೆ ಕಳುಹಿಸಿಕೊಟ್ಟಿದೆ.