ನಾವು 60 ಜನ ಇಲ್ಲಿಗೆ ಬಂದಿದ್ದೇವೆ. ನಾನಿದ್ದ ಗುಂಪಿನಲ್ಲಿ 9 ಜನರಿದ್ದಾರೆ. ಹಠಾತ್ತನೇ ನಮ್ಮ ಗುಂಪಿನಲ್ಲಿ ನೂಕುನುಗ್ಗಲು ಶುರುವಾಯಿತು. ಇದರಿಂದ ನಾವು ಸಿಕ್ಕಿ ಹಾಕಿಕೊಂಡೆವು. ಎಲ್ಲ ದಿಕ್ಕುಗಳಿಂದಲೂ ನೂಕುತ್ತಿದ್ದರಿಂದ ನಮಗೆ ಆ ಜಾಗದಿಂದ ಪಾರಾಗಲು ಅವಕಾಶ ಇರಲಿಲ್ಲ. ನಮ್ಮಲ್ಲಿ ಅನೇಕರು ಕೆಳಗೆ ಬಿದ್ದರು. ಒಂದು ಹಂತದಲ್ಲಿ ಗುಂಪನ್ನು ನಿಯಂತ್ರಣ ಮಾಡುವುದು ಸಾಧ್ಯವಾಗಲಿಲ್ಲ.–ಸರೋಜಿನಿ, ಕರ್ನಾಟಕದಿಂದ ತೆರಳಿರುವ ಭಕ್ತೆ
ವಿಪರೀತ ಭಕ್ತರು ಸೇರಿರುವ ಕಾರಣ ಸಂಗಮ ಘಾಟ್ನಲ್ಲಿ ನಡೆಯಬೇಕಿದ್ದ ಎಲ್ಲ ಅಖಾಡಗಳ ಸಾಂಪ್ರದಾಯಿಕ ಸ್ನಾನವನ್ನು ಮುಂದೂಡಲಾಗಿದೆ. ಕುಂಭ ಮೇಳ ಆಡಳಿತದೊಂದಿಗೆ ಸಂಪರ್ಕದಲ್ಲಿದ್ದೇವೆ. ಜನದಟ್ಟಣೆ ಕಡಿಮೆಯಾದ ನಂತರ ನಾವು ಪುಣ್ಯಸ್ನಾನ ಮಾಡುತ್ತೇವೆ–ಮಹಂತ ರವೀಂದ್ರ ಪುರಿ, ಅಖಿಲ ಭಾರತೀಯ ಅಖಾಡ ಪರಿಷದ್ ಅಧ್ಯಕ್ಷ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.