<p><strong>ನವದೆಹಲಿ (ಪಿಟಿಐ):</strong> ದೇಶದ ಜೈಲುಗಳಲ್ಲಿ 2017ರಿಂದ 2021ರ ನಡುವೆ 817 ಅಸ್ವಾಭಾವಿಕ ಸಾವುಗಳು ವರದಿಯಾಗಿದ್ದು, ಆತ್ಮಹತ್ಯೆಯೇ ಪ್ರಮುಖ ಕಾರಣ ಎಂದು ಸುಪ್ರೀಂಕೋರ್ಟ್ ರಚಿಸಿರುವ ‘ಜೈಲುಗಳ ಸುಧಾರಣೆ ಕುರಿತ ಸಮಿತಿ’ಯ ವರದಿಯಲ್ಲಿ ಹೇಳಲಾಗಿದೆ.</p>.<p>ಸೆರೆವಾಸದಲ್ಲಿರುವವರು ಆತ್ಮಹತ್ಯೆ ಮಾಡಿಕೊಳ್ಳುವುದನ್ನು ತಡೆಗಟ್ಟುವಂತಹ ಜೈಲುಗಳನ್ನು ನಿರ್ಮಿಸುವ ಅಗತ್ಯ ಇದೆ ಎಂದು ಸುಪ್ರೀಂಕೋರ್ಟ್ಗೆ ಸಲ್ಲಿಸಿರುವ ವರದಿಯಲ್ಲಿ ಸಮಿತಿಯು ಪ್ರತಿಪಾದಿಸಿದೆ.</p>.<p>‘817 ಅಸ್ವಾಭಾವಿಕ ಸಾವುಗಳ ಪೈಕಿ 660 ಜೈಲುವಾಸಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಉತ್ತರ ಪ್ರದೇಶದಲ್ಲಿ ಗರಿಷ್ಠ 101 ಮಂದಿ ಆತ್ಮಹತ್ಯೆಗೆ ಶರಣಾಗಿದ್ದಾರೆ’ ಎಂದು ಸುಪ್ರೀಂಕೋರ್ಟ್ ನಿವೃತ್ತ ನ್ಯಾಯಮೂರ್ತಿ ಅಮಿತವ್ ರಾಯ್ ನೇತೃತ್ವದ ಸಮಿತಿ ಹೇಳಿದೆ.</p>.<p><strong>ಸಮಿತಿ ವರದಿಯಲ್ಲಿನ ಪ್ರಮುಖ ಅಂಶಗಳು</strong></p>.<p>* ಜೈಲುಗಳ ಯಾವ ಸ್ಥಳಗಳಲ್ಲಿ ನೇಣು ಹಾಕಿಕೊಳ್ಳುವ ಪ್ರಕರಣಗಳು ಹೆಚ್ಚಿಗೆ ವರದಿಯಾಗುತ್ತಿವೆ ಎಂಬುದನ್ನು ಗುರುತಿಸಬೇಕು</p>.<p>* ಕೈದಿಗಳು ನೇಣು ಬಿಗಿದುಕೊಳ್ಳಲು ಯತ್ನಿಸಿದ ಸಂದರ್ಭದಲ್ಲಿ ಚಾವಣಿ ಕುಸಿಯುವಂತಿರಬೇಕು. ಅಂತಹ ಸಾಮಗ್ರಿಗಳನ್ನು ಬಳಸಿ ಜೈಲುಗಳನ್ನು ನಿರ್ಮಿಸಬೇಕು</p>.<p>* ಕಸ್ಟಡಿಯಲ್ಲಿದ್ದಾಗ ನೀಡುವ ಚಿತ್ರಹಿಂಸೆ, ಸಂಭವಿಸುವ ಸಾವುಗಳಿಂದ ನಾಗರಿಕರ ಮೂಲಭೂತ ಹಕ್ಕುಗಳ ಉಲ್ಲಂಘನೆಯಾಗುತ್ತದೆ. ಇದು ಮಾನವನ ಘನತೆಯನ್ನು ಅವಮಾನಿಸಿದಂತೆ</p>.<p>* 2019ರಿಂದ ಕಸ್ಟಡಿಯಲ್ಲಿನ ಸಾವುಗಳ ಸಂಖ್ಯೆಯಲ್ಲಿ ಹೆಚ್ಚಳ ಕಂಡುಬಂದಿದೆ</p>.<p>* 2021ರಲ್ಲಿ ಗರಿಷ್ಠ ಸಂಖ್ಯೆ ಕಸ್ಟಡಿ ಸಾವುಗಳು ಸಂಭವಿಸಿವೆ</p>.<p>* 2017ರಿಂದ 2021ರ ವರೆಗಿನ ಅವಧಿಯಲ್ಲಿ 462 ಕೈದಿಗಳು ಮುಪ್ಪಿನ ಕಾರಣದಿಂದ ಮೃತಪಟ್ಟಿದ್ದರೆ, 7,736 ಕೈದಿಗಳು ಅನಾರೋಗ್ಯದಿಂದಾಗಿ ಸತ್ತಿದ್ದಾರೆ. ಇದೇ ಅವಧಿಯಲ್ಲಿ 41 ಕೈದಿಗಳನ್ನು ಕೊಲೆ ಮಾಡಲಾಗಿದೆ</p>.<p><strong>ಸಮಿತಿ ಮಾಡಿರುವ ಶಿಫಾರಸುಗಳು</strong></p>.<p>* ವಯಸ್ಸಾದ ಹಾಗೂ ಅನಾರೋಗ್ಯದಿಂದ ಬಳಲುವ ಕೈದಿಗಳನ್ನು ಸಾಧ್ಯವಾದಷ್ಟು ನ್ಯಾಯಾಲಯಗಳಿಗೆ ಹಾಜರುಪಡಿಸದೇ, ಅವರ ವಿಚಾರಣೆಯನ್ನು ವಿಡಿಯೊ ಕಾನ್ಫರೆನ್ಸ್ ಮೂಲಕ ನಡೆಸಬೇಕು</p>.<p>* ಕೈದಿಗಳಲ್ಲಿ ಆತ್ಮಹತ್ಯೆ ಮಾಡಿಕೊಳ್ಳುವ ಆಲೋಚನೆ ಮೂಡುವುದನ್ನು ಮುಂಚಿತವಾಗಿ ಗ್ರಹಿಸುವ ಹಾಗೂ ಅವರನ್ನು ಅಂತಹ ಪ್ರಯತ್ನಗಳಿಂದ ಕಾಪಾಡುವ ಕುರಿತು ಜೈಲು ಸಿಬ್ಬಂದಿಗೆ ತರಬೇತಿ ನೀಡಬೇಕು</p>.<p>* ಕೈದಿಗಳಲ್ಲಿ ಕಂಡುಬರುವ ಖಿನ್ನತೆ ಹಾಗೂ ಅತಿರೇಕ/ಅಸಹಜ ನಡವಳಿಕೆಗಳನ್ನು ಗುರುತಿಸಿ, ಸಕಾಲಕ್ಕೆ ಚಿಕಿತ್ಸೆ ಒದಗಿಸುವ ಕುರಿತು ಸಿಬ್ಬಂದಿಗೆ ತರಬೇತಿ ನೀಡಬೇಕು</p>.<p>* ಪ್ರತಿ ಜೈಲಿನಲ್ಲಿ ‘ಆತ್ಮಹತ್ಯೆ ತಡೆಗಟ್ಟುವ ಕಾರ್ಯಕ್ರಮ’ವನ್ನು ಅನುಷ್ಠಾನಗೊಳಿಸಬೇಕು</p>.<p>* ಜೈಲುಗಳಲ್ಲಿ ಹಿಂಸಾಕೃತ್ಯಗಳನ್ನು ತಡೆಗಟ್ಟುವ ಸಲುವಾಗಿ ಮೊದಲ ಬಾರಿಗೆ ಅಪರಾಧ ಎಸಗಿ ಜೈಲು ಸೇರಿದವರು, ಪದೇಪದೇ ಅಪರಾಧ ಎಸಗುವವರನ್ನು ಗುರುತಿಸಿ, ಪ್ರತ್ಯೇಕಿಸುವ ವ್ಯವಸ್ಥೆ ಜಾರಿಗೊಳಿಸಬೇಕು</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ (ಪಿಟಿಐ):</strong> ದೇಶದ ಜೈಲುಗಳಲ್ಲಿ 2017ರಿಂದ 2021ರ ನಡುವೆ 817 ಅಸ್ವಾಭಾವಿಕ ಸಾವುಗಳು ವರದಿಯಾಗಿದ್ದು, ಆತ್ಮಹತ್ಯೆಯೇ ಪ್ರಮುಖ ಕಾರಣ ಎಂದು ಸುಪ್ರೀಂಕೋರ್ಟ್ ರಚಿಸಿರುವ ‘ಜೈಲುಗಳ ಸುಧಾರಣೆ ಕುರಿತ ಸಮಿತಿ’ಯ ವರದಿಯಲ್ಲಿ ಹೇಳಲಾಗಿದೆ.</p>.<p>ಸೆರೆವಾಸದಲ್ಲಿರುವವರು ಆತ್ಮಹತ್ಯೆ ಮಾಡಿಕೊಳ್ಳುವುದನ್ನು ತಡೆಗಟ್ಟುವಂತಹ ಜೈಲುಗಳನ್ನು ನಿರ್ಮಿಸುವ ಅಗತ್ಯ ಇದೆ ಎಂದು ಸುಪ್ರೀಂಕೋರ್ಟ್ಗೆ ಸಲ್ಲಿಸಿರುವ ವರದಿಯಲ್ಲಿ ಸಮಿತಿಯು ಪ್ರತಿಪಾದಿಸಿದೆ.</p>.<p>‘817 ಅಸ್ವಾಭಾವಿಕ ಸಾವುಗಳ ಪೈಕಿ 660 ಜೈಲುವಾಸಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಉತ್ತರ ಪ್ರದೇಶದಲ್ಲಿ ಗರಿಷ್ಠ 101 ಮಂದಿ ಆತ್ಮಹತ್ಯೆಗೆ ಶರಣಾಗಿದ್ದಾರೆ’ ಎಂದು ಸುಪ್ರೀಂಕೋರ್ಟ್ ನಿವೃತ್ತ ನ್ಯಾಯಮೂರ್ತಿ ಅಮಿತವ್ ರಾಯ್ ನೇತೃತ್ವದ ಸಮಿತಿ ಹೇಳಿದೆ.</p>.<p><strong>ಸಮಿತಿ ವರದಿಯಲ್ಲಿನ ಪ್ರಮುಖ ಅಂಶಗಳು</strong></p>.<p>* ಜೈಲುಗಳ ಯಾವ ಸ್ಥಳಗಳಲ್ಲಿ ನೇಣು ಹಾಕಿಕೊಳ್ಳುವ ಪ್ರಕರಣಗಳು ಹೆಚ್ಚಿಗೆ ವರದಿಯಾಗುತ್ತಿವೆ ಎಂಬುದನ್ನು ಗುರುತಿಸಬೇಕು</p>.<p>* ಕೈದಿಗಳು ನೇಣು ಬಿಗಿದುಕೊಳ್ಳಲು ಯತ್ನಿಸಿದ ಸಂದರ್ಭದಲ್ಲಿ ಚಾವಣಿ ಕುಸಿಯುವಂತಿರಬೇಕು. ಅಂತಹ ಸಾಮಗ್ರಿಗಳನ್ನು ಬಳಸಿ ಜೈಲುಗಳನ್ನು ನಿರ್ಮಿಸಬೇಕು</p>.<p>* ಕಸ್ಟಡಿಯಲ್ಲಿದ್ದಾಗ ನೀಡುವ ಚಿತ್ರಹಿಂಸೆ, ಸಂಭವಿಸುವ ಸಾವುಗಳಿಂದ ನಾಗರಿಕರ ಮೂಲಭೂತ ಹಕ್ಕುಗಳ ಉಲ್ಲಂಘನೆಯಾಗುತ್ತದೆ. ಇದು ಮಾನವನ ಘನತೆಯನ್ನು ಅವಮಾನಿಸಿದಂತೆ</p>.<p>* 2019ರಿಂದ ಕಸ್ಟಡಿಯಲ್ಲಿನ ಸಾವುಗಳ ಸಂಖ್ಯೆಯಲ್ಲಿ ಹೆಚ್ಚಳ ಕಂಡುಬಂದಿದೆ</p>.<p>* 2021ರಲ್ಲಿ ಗರಿಷ್ಠ ಸಂಖ್ಯೆ ಕಸ್ಟಡಿ ಸಾವುಗಳು ಸಂಭವಿಸಿವೆ</p>.<p>* 2017ರಿಂದ 2021ರ ವರೆಗಿನ ಅವಧಿಯಲ್ಲಿ 462 ಕೈದಿಗಳು ಮುಪ್ಪಿನ ಕಾರಣದಿಂದ ಮೃತಪಟ್ಟಿದ್ದರೆ, 7,736 ಕೈದಿಗಳು ಅನಾರೋಗ್ಯದಿಂದಾಗಿ ಸತ್ತಿದ್ದಾರೆ. ಇದೇ ಅವಧಿಯಲ್ಲಿ 41 ಕೈದಿಗಳನ್ನು ಕೊಲೆ ಮಾಡಲಾಗಿದೆ</p>.<p><strong>ಸಮಿತಿ ಮಾಡಿರುವ ಶಿಫಾರಸುಗಳು</strong></p>.<p>* ವಯಸ್ಸಾದ ಹಾಗೂ ಅನಾರೋಗ್ಯದಿಂದ ಬಳಲುವ ಕೈದಿಗಳನ್ನು ಸಾಧ್ಯವಾದಷ್ಟು ನ್ಯಾಯಾಲಯಗಳಿಗೆ ಹಾಜರುಪಡಿಸದೇ, ಅವರ ವಿಚಾರಣೆಯನ್ನು ವಿಡಿಯೊ ಕಾನ್ಫರೆನ್ಸ್ ಮೂಲಕ ನಡೆಸಬೇಕು</p>.<p>* ಕೈದಿಗಳಲ್ಲಿ ಆತ್ಮಹತ್ಯೆ ಮಾಡಿಕೊಳ್ಳುವ ಆಲೋಚನೆ ಮೂಡುವುದನ್ನು ಮುಂಚಿತವಾಗಿ ಗ್ರಹಿಸುವ ಹಾಗೂ ಅವರನ್ನು ಅಂತಹ ಪ್ರಯತ್ನಗಳಿಂದ ಕಾಪಾಡುವ ಕುರಿತು ಜೈಲು ಸಿಬ್ಬಂದಿಗೆ ತರಬೇತಿ ನೀಡಬೇಕು</p>.<p>* ಕೈದಿಗಳಲ್ಲಿ ಕಂಡುಬರುವ ಖಿನ್ನತೆ ಹಾಗೂ ಅತಿರೇಕ/ಅಸಹಜ ನಡವಳಿಕೆಗಳನ್ನು ಗುರುತಿಸಿ, ಸಕಾಲಕ್ಕೆ ಚಿಕಿತ್ಸೆ ಒದಗಿಸುವ ಕುರಿತು ಸಿಬ್ಬಂದಿಗೆ ತರಬೇತಿ ನೀಡಬೇಕು</p>.<p>* ಪ್ರತಿ ಜೈಲಿನಲ್ಲಿ ‘ಆತ್ಮಹತ್ಯೆ ತಡೆಗಟ್ಟುವ ಕಾರ್ಯಕ್ರಮ’ವನ್ನು ಅನುಷ್ಠಾನಗೊಳಿಸಬೇಕು</p>.<p>* ಜೈಲುಗಳಲ್ಲಿ ಹಿಂಸಾಕೃತ್ಯಗಳನ್ನು ತಡೆಗಟ್ಟುವ ಸಲುವಾಗಿ ಮೊದಲ ಬಾರಿಗೆ ಅಪರಾಧ ಎಸಗಿ ಜೈಲು ಸೇರಿದವರು, ಪದೇಪದೇ ಅಪರಾಧ ಎಸಗುವವರನ್ನು ಗುರುತಿಸಿ, ಪ್ರತ್ಯೇಕಿಸುವ ವ್ಯವಸ್ಥೆ ಜಾರಿಗೊಳಿಸಬೇಕು</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>