ಸುನೀಲ್ ಅವರು ಕರ್ನಾಟಕದವರು. ಕರ್ನಾಟಕದಲ್ಲಿ, ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿ ಆಗಿದ್ದಾಗ ಕಾಂಗ್ರೆಸ್ ಪಕ್ಷ ನಡೆಸಿದ ‘ಪೇಸಿಎಂ’ ಅಭಿಯಾನದ ಹಿಂದೆ ಸುನೀಲ್ ಅವರ ಆಲೋಚನೆಗಳು ಕೆಲಸ ಮಾಡಿದ್ದವು ಎನ್ನಲಾಗಿದೆ. ಕರ್ನಾಟಕ ಮತ್ತು ತೆಲಂಗಾಣದಲ್ಲಿ ಕಾಂಗ್ರೆಸ್ ನಡೆಸಿದ ಚುನಾವಣಾ ಪ್ರಚಾರ ಅಭಿಯಾನದಲ್ಲಿ ಸಾಮ್ಯತೆಗಳು ಹಲವು ಇದ್ದವು.