ಚಾಲನಾ ಪರವಾನಗಿಗಳನ್ನು ನಕಲಿ ಮಾಡಬಹುದು, ಪಡಿತರ ಚೀಟಿಗಳನ್ನು ನಕಲಿ ಮಾಡಬಹುದು. ಹಲವಾರು ದಾಖಲೆಗಳನ್ನು ನಕಲಿ ಮಾಡಬಹುದು. ಕಾನೂನು ಅನುಮತಿಸುವ ಮಟ್ಟಿಗೆ ಆಧಾರ್ ಅನ್ನು ಬಳಸಿಕೊಳ್ಳಬೇಕು.
– ನ್ಯಾಯಪೀಠ
ವಕೀಲರ ವಾದವೇನು?
ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆಯ ಸಂಪೂರ್ಣ ಪ್ರಕ್ರಿಯೆ ನಡೆಸಲು ಚುನಾವಣಾ ಆಯೋಗಕ್ಕೆ ಅವಕಾಶ ನೀಡಬೇಕು. ಪ್ರಕ್ರಿಯೆ ಪೂರ್ಣಗೊಂಡ ಬಳಿಕ ನ್ಯಾಯಾಲಯವು ಅದನ್ನು ಉತ್ತಮವಾಗಿ ಮೌಲ್ಯಮಾಪನ ಮಾಡಲು ಸಾಧ್ಯವಾಗುತ್ತದೆ.
– ರಾಕೇಶ್ ದ್ವಿವೇದಿ, ಚುನಾವಣಾ ಆಯೋಗದ ಪರ ವಕೀಲ
ಇತರ ರಾಜ್ಯಗಳಲ್ಲಿ ಎಸ್ಐಆರ್ ನಡೆಸಲು ಆಯೋಗವು ಪೂರ್ವಸಿದ್ಧತೆ ಆರಂಭಿಸಿದೆ. ಈ ಸಂಬಂಧ ಸೆಪ್ಟೆಂಬರ್ 10ರಂದು ಎಲ್ಲ ರಾಜ್ಯಗಳ ಅಧಿಕಾರಿಗಳೊಂದಿಗೆ ಸಭೆ ನಡೆಸಿದೆ. ಇದಕ್ಕೆ ಅವಕಾಶ ನೀಡಬಾರದು.
– ಗೋಪಾಲ್ ಶಂಕರ ನಾರಾಯಣನ್, ಅರ್ಜಿದಾರರ ಪರ ವಕೀಲ
ಬಿಹಾರದಲ್ಲಿ ನವೆಂಬರ್ 22ಕ್ಕೆ ಮೊದಲು ಹೊಸ ಸರ್ಕಾರ ರಚನೆಯಾಗಬೇಕು. ಹೀಗಾಗಿ, ಅಕ್ಟೋಬರ್ ಮಧ್ಯಭಾಗದಲ್ಲಿ ಚುನಾವಣಾ ವೇಳಾಪಟ್ಟಿ ಘೋಷಣೆಯಾಗುವ ಸಾಧ್ಯತೆ ಇದೆ. ಆಯೋಗ ಕಾನೂನುಬಾಹಿರ ವಿಧಾನ ಅಳವಡಿಸಿಕೊಂಡು ಎಸ್ಐಆರ್ ನಡೆಸುತ್ತಿದೆ. ಅಕ್ಟೋಬರ್ 1ರಂದು ಮತದಾರರ ಪಟ್ಟಿ ಪ್ರಕಟವಾಗಲಿದೆ. ಅದಕ್ಕೂ ಮುನ್ನವೇ ಅರ್ಜಿಯ ವಿಚಾರಣೆ ನಡೆಸಬೇಕು.
– ವೃಂದಾ ಗ್ರೋವರ್, ಅರ್ಜಿದಾರರ ಪರ ವಕೀಲೆ
ಎಸ್ಐಆರ್ ಸಂದರ್ಭದಲ್ಲಿ ಆಯೋಗವು ನಿಯಮಗಳನ್ನು ಉಲ್ಲಂಘಿಸಿದೆ. ವಾಸ್ತವಿಕವಾಗಿ ಈ ಪ್ರಕ್ರಿಯೆಯಲ್ಲಿ ಯಾವುದೇ ಪಾರದರ್ಶಕತೆ ಇಲ್ಲ.
– ಪ್ರಶಾಂತ್ ಭೂಷಣ್, ಹಿರಿಯ ವಕೀಲ
ವಿದೇಶಿಯರಿಗೂ ಆಧಾರ್ ಕಾರ್ಡ್ ನೀಡಲಾಗುತ್ತದೆ. ದಯವಿಟ್ಟು ಸೆಪ್ಟೆಂಬರ್ 8ರ ಆದೇಶ ಮಾರ್ಪಡಿಸಿ. ಇಲ್ಲದಿದ್ದರೆ ಹಾನಿಕಾರಕವಾಗುತ್ತದೆ.