<p><strong>ಶ್ರೀನಗರ</strong>: ಜಮ್ಮುವಿನಲ್ಲಿ ಒಂದು ತಿಂಗಳಿನಿಂದ ಭಯೋತ್ಪಾದನಾ ಚಟುವಟಿಕೆಗಳು ತೀವ್ರಗೊಂಡಿರುವುದರಿಂದ, ಶಾಂತಿ ಸ್ಥಾಪಿಸುವುದಕ್ಕಾಗಿ ಹೆಚ್ಚುವರಿ ಸೇನಾ ತುಕಡಿಗಳನ್ನು ನಿಯೋಜಿಸಿ ಭದ್ರತೆಯನ್ನು ಬಲಪಡಿಸಲಾಗುತ್ತಿದೆ. </p>.<p>ಜಮ್ಮು ವಲಯದ ದಟ್ಟ ಕಾಡಿನಲ್ಲಿ ನೆಲೆಯೂರಿರುವ ಭಯೋತ್ಟಾದಕರನ್ನು ಹತ್ತಿಕ್ಕಲು ಹಾಗೂ ಅವರ ಕೃತ್ಯಗಳಿಗೆ ಕಡಿವಾಣ ಹಾಕಲು ಹೆಚ್ಚುವರಿಯಾಗಿ 3,500 ಯೋಧರು, 500 ಅರೆ ಸೇನಾಪಡೆ ಯೋಧರನ್ನು ನಿಯೋಜಿಸಲಾಗಿದೆ.</p>.<p>ಜಮ್ಮು ವಲಯದ ರಾಜೌರಿ, ಪೂಂಛ್, ರಿಯಾಸಿ, ಡೋಡಾ, ಕಠುವಾ ಜಿಲ್ಲೆಗಳಲ್ಲಿ ಕಳೆದ ಕೆಲವು ತಿಂಗಳಲ್ಲಿ ಸೇನೆ ಮತ್ತು ನಾಗರಿಕರನ್ನು ಗುರಿಯಾಗಿಸಿ ನಡೆದ ಭಯೋತ್ಪಾದಕ ಕೃತ್ಯಗಳು ನಾಗರಿಕರಲ್ಲಿ ಭೀತಿ ಮೂಡಿಸಿದೆ.</p>.<p>ಗುಪ್ತದಳದ ಮಾಹಿತಿ ಅನುಸಾರ, ನೆಲೆಯೂರಿರುವ ಭಯೋತ್ಪಾದಕರು ಹೆಚ್ಚು ತರಬೇತಿ ಪಡೆದವರಲ್ಲ, ಆದರೆ, ಅವರ ಬಳಿ ಅತ್ಯಾಧುನಿಕ ಶಸ್ತ್ರಾಸ್ತ್ರಗಳಿವೆ. ಹೀಗಾಗಿ, ಅವರು ಪ್ರತಿರೋಧ ಒಡ್ಡಲು ಸಾಧ್ಯವಾಗಿದೆ. ಅವರ ದಾಳಿಯನ್ನು ಪರಿಣಾಮಕಾರಿಯಾಗಿ ಎದುರಿಸಲು ಸೇನೆ ಕೂಡಾ ಈಗ ಹೆಚ್ಚುವರಿ ಸಿಬ್ಬಂದಿ ನಿಯೋಜಿಸಿ, ಭದ್ರತೆ ಬಿಗಿಗೊಳಿಸಿದೆ.</p>.<p>‘ಜಮ್ಮುವಿನ ಕಾಡುಗಳಲ್ಲಿ ಅಡಗಿರುವ ಉಗ್ರರ ಚಟುವಟಿಕೆ ನಿರ್ಮೂಲನೆಗೆ 4,000 ಯೋಧರನ್ನು ನಿಯೋಜಿಸಿದ್ದು, ಗುಂಡುನಿರೋಧಕ ವಾಹನಗಳನ್ನು ಹೆಚ್ಚುವರಿಯಾಗಿ ಒದಗಿಸಲಾಗಿದೆ. ಭಯೋತ್ಪಾದಕರು ಅರಣ್ಯದಲ್ಲಿ ಪ್ರಕೃತಿ ಸಹಜ ಗುಹೆಗಳನ್ನೇ ನೆಲೆ ಮಾಡಿಕೊಂಡಿದ್ದಾರೆ. ಉಗ್ರರು ನೆಲೆಯೂರಿರುವ ಈ ವಲಯಗಳಲ್ಗಿ ಕಾರ್ಯಾಚರಣೆಗೆ ಕ್ಷಿಪ್ರ ಪ್ರತಿರೋಧಪಡೆಯ (ಕ್ಯುಆರ್ಟಿ) 37 ತುಕಡಿಗಳು ತೆರಳಿವೆ’ ಎಂದು ಮೂಲಗಳು ವಿವರಿಸಿವೆ.</p>.<p>‘ಯೋಧರ ಹೊರತಾಗಿ 500 ಮಂದಿ ಉನ್ನತ ತರಬೇತಿ ಪಡೆದ ಕಮಾಂಡೊಗಳನ್ನೂ ಈ ವಿಶೇಷ ಕಾರ್ಯಾಚರಣೆಗಾಗಿ ನಿಯೋಜಿಸಲಾಗಿದೆ. ಈ ಕಮಾಂಡೊಗಳಿಗೆ ವಿಶೇಷ ಕೌಶಲವಿದೆ. ದಟ್ಟ ಕಾಡುಗಳಲ್ಲಿ ಸಂಕೀರ್ಣ ಕಾರ್ಯಾಚರಣೆಯನ್ನು ನಡೆಸಿರುವ ಅನುಭವವಿದೆ’ ಎಂದು ಮೂಲಗಳು ವಿವರಿಸಿವೆ.</p>.<p>ಉಗ್ರರು ಗುಹೆಗಳನ್ನೇ ಅಡಗುದಾಣವಾಗಿ ಮಾಡಿಕೊಂಡಿರುವುದೇ ಈಗ ಸೇನೆಗೆ ತನ್ನ ಕಾರ್ಯಾಚರಣೆಯಲ್ಲಿ ಎದುರಾಗಿರುವ ದೊಡ್ಡ ಸವಾಲು ಎಂಬುದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರ ಅಭಿಪ್ರಾಯ.</p>.<p>‘ಈ ಗುಹೆಗಳು ಪ್ರಕೃತಿ ಸಹಜವಾದ ರಕ್ಷಣೆ ಹೊಂದಿದ್ದು, ಎದ್ದು ಕಾಣುವುದಿಲ್ಲ. ಇಂತಹ ಅಡಗುತಾಣಗಳನ್ನು ಗುರುತಿಸಿ, ಉಗ್ರರ ನೆಲೆಯನ್ನು ನಿಷ್ಕ್ರಿಯಗೊಳಿಸುವುದೇ ಈಗಿರುವ ಸವಾಲಾಗಿದೆ’ ಎಂದು ಅವರು ವಿವರಿಸಿದರು.</p>.<p> * ಸೇನಾ ಮುಖ್ಯಸ್ಥ ಉಪೇಂದ್ರ ದ್ವಿವೇದಿ ಅವರು ಜಮ್ಮುವಿಗೆ ಶನಿವಾರ ಭೇಟಿ ಕೊಟ್ಟಿದ್ದಾರೆ * ಈ ತಿಂಗಳಲ್ಲಿ ಅವರ ಎರಡನೇ ಭೇಟಿ ಇದಾಗಿದೆ * ಸೇನೆಯ ಸನ್ನದ್ಧತೆಯ ಪರಿಶೀಲನೆ ನಡೆಸಿದ್ದಾರೆ</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಶ್ರೀನಗರ</strong>: ಜಮ್ಮುವಿನಲ್ಲಿ ಒಂದು ತಿಂಗಳಿನಿಂದ ಭಯೋತ್ಪಾದನಾ ಚಟುವಟಿಕೆಗಳು ತೀವ್ರಗೊಂಡಿರುವುದರಿಂದ, ಶಾಂತಿ ಸ್ಥಾಪಿಸುವುದಕ್ಕಾಗಿ ಹೆಚ್ಚುವರಿ ಸೇನಾ ತುಕಡಿಗಳನ್ನು ನಿಯೋಜಿಸಿ ಭದ್ರತೆಯನ್ನು ಬಲಪಡಿಸಲಾಗುತ್ತಿದೆ. </p>.<p>ಜಮ್ಮು ವಲಯದ ದಟ್ಟ ಕಾಡಿನಲ್ಲಿ ನೆಲೆಯೂರಿರುವ ಭಯೋತ್ಟಾದಕರನ್ನು ಹತ್ತಿಕ್ಕಲು ಹಾಗೂ ಅವರ ಕೃತ್ಯಗಳಿಗೆ ಕಡಿವಾಣ ಹಾಕಲು ಹೆಚ್ಚುವರಿಯಾಗಿ 3,500 ಯೋಧರು, 500 ಅರೆ ಸೇನಾಪಡೆ ಯೋಧರನ್ನು ನಿಯೋಜಿಸಲಾಗಿದೆ.</p>.<p>ಜಮ್ಮು ವಲಯದ ರಾಜೌರಿ, ಪೂಂಛ್, ರಿಯಾಸಿ, ಡೋಡಾ, ಕಠುವಾ ಜಿಲ್ಲೆಗಳಲ್ಲಿ ಕಳೆದ ಕೆಲವು ತಿಂಗಳಲ್ಲಿ ಸೇನೆ ಮತ್ತು ನಾಗರಿಕರನ್ನು ಗುರಿಯಾಗಿಸಿ ನಡೆದ ಭಯೋತ್ಪಾದಕ ಕೃತ್ಯಗಳು ನಾಗರಿಕರಲ್ಲಿ ಭೀತಿ ಮೂಡಿಸಿದೆ.</p>.<p>ಗುಪ್ತದಳದ ಮಾಹಿತಿ ಅನುಸಾರ, ನೆಲೆಯೂರಿರುವ ಭಯೋತ್ಪಾದಕರು ಹೆಚ್ಚು ತರಬೇತಿ ಪಡೆದವರಲ್ಲ, ಆದರೆ, ಅವರ ಬಳಿ ಅತ್ಯಾಧುನಿಕ ಶಸ್ತ್ರಾಸ್ತ್ರಗಳಿವೆ. ಹೀಗಾಗಿ, ಅವರು ಪ್ರತಿರೋಧ ಒಡ್ಡಲು ಸಾಧ್ಯವಾಗಿದೆ. ಅವರ ದಾಳಿಯನ್ನು ಪರಿಣಾಮಕಾರಿಯಾಗಿ ಎದುರಿಸಲು ಸೇನೆ ಕೂಡಾ ಈಗ ಹೆಚ್ಚುವರಿ ಸಿಬ್ಬಂದಿ ನಿಯೋಜಿಸಿ, ಭದ್ರತೆ ಬಿಗಿಗೊಳಿಸಿದೆ.</p>.<p>‘ಜಮ್ಮುವಿನ ಕಾಡುಗಳಲ್ಲಿ ಅಡಗಿರುವ ಉಗ್ರರ ಚಟುವಟಿಕೆ ನಿರ್ಮೂಲನೆಗೆ 4,000 ಯೋಧರನ್ನು ನಿಯೋಜಿಸಿದ್ದು, ಗುಂಡುನಿರೋಧಕ ವಾಹನಗಳನ್ನು ಹೆಚ್ಚುವರಿಯಾಗಿ ಒದಗಿಸಲಾಗಿದೆ. ಭಯೋತ್ಪಾದಕರು ಅರಣ್ಯದಲ್ಲಿ ಪ್ರಕೃತಿ ಸಹಜ ಗುಹೆಗಳನ್ನೇ ನೆಲೆ ಮಾಡಿಕೊಂಡಿದ್ದಾರೆ. ಉಗ್ರರು ನೆಲೆಯೂರಿರುವ ಈ ವಲಯಗಳಲ್ಗಿ ಕಾರ್ಯಾಚರಣೆಗೆ ಕ್ಷಿಪ್ರ ಪ್ರತಿರೋಧಪಡೆಯ (ಕ್ಯುಆರ್ಟಿ) 37 ತುಕಡಿಗಳು ತೆರಳಿವೆ’ ಎಂದು ಮೂಲಗಳು ವಿವರಿಸಿವೆ.</p>.<p>‘ಯೋಧರ ಹೊರತಾಗಿ 500 ಮಂದಿ ಉನ್ನತ ತರಬೇತಿ ಪಡೆದ ಕಮಾಂಡೊಗಳನ್ನೂ ಈ ವಿಶೇಷ ಕಾರ್ಯಾಚರಣೆಗಾಗಿ ನಿಯೋಜಿಸಲಾಗಿದೆ. ಈ ಕಮಾಂಡೊಗಳಿಗೆ ವಿಶೇಷ ಕೌಶಲವಿದೆ. ದಟ್ಟ ಕಾಡುಗಳಲ್ಲಿ ಸಂಕೀರ್ಣ ಕಾರ್ಯಾಚರಣೆಯನ್ನು ನಡೆಸಿರುವ ಅನುಭವವಿದೆ’ ಎಂದು ಮೂಲಗಳು ವಿವರಿಸಿವೆ.</p>.<p>ಉಗ್ರರು ಗುಹೆಗಳನ್ನೇ ಅಡಗುದಾಣವಾಗಿ ಮಾಡಿಕೊಂಡಿರುವುದೇ ಈಗ ಸೇನೆಗೆ ತನ್ನ ಕಾರ್ಯಾಚರಣೆಯಲ್ಲಿ ಎದುರಾಗಿರುವ ದೊಡ್ಡ ಸವಾಲು ಎಂಬುದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರ ಅಭಿಪ್ರಾಯ.</p>.<p>‘ಈ ಗುಹೆಗಳು ಪ್ರಕೃತಿ ಸಹಜವಾದ ರಕ್ಷಣೆ ಹೊಂದಿದ್ದು, ಎದ್ದು ಕಾಣುವುದಿಲ್ಲ. ಇಂತಹ ಅಡಗುತಾಣಗಳನ್ನು ಗುರುತಿಸಿ, ಉಗ್ರರ ನೆಲೆಯನ್ನು ನಿಷ್ಕ್ರಿಯಗೊಳಿಸುವುದೇ ಈಗಿರುವ ಸವಾಲಾಗಿದೆ’ ಎಂದು ಅವರು ವಿವರಿಸಿದರು.</p>.<p> * ಸೇನಾ ಮುಖ್ಯಸ್ಥ ಉಪೇಂದ್ರ ದ್ವಿವೇದಿ ಅವರು ಜಮ್ಮುವಿಗೆ ಶನಿವಾರ ಭೇಟಿ ಕೊಟ್ಟಿದ್ದಾರೆ * ಈ ತಿಂಗಳಲ್ಲಿ ಅವರ ಎರಡನೇ ಭೇಟಿ ಇದಾಗಿದೆ * ಸೇನೆಯ ಸನ್ನದ್ಧತೆಯ ಪರಿಶೀಲನೆ ನಡೆಸಿದ್ದಾರೆ</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>