ಈ ವಿಶೇಷ ಸಂದರ್ಭವನ್ನು ಸಂಭ್ರಮಿಸೋಣ. ಮರೀನ್ ಡ್ರೈವ್ ಮತ್ತು ವಾಂಖೆಡೆ ಕ್ರೀಡಾಂಗಣದಲ್ಲಿ ಸಂಭ್ರಮದ ಪೆರೇಡ್ ಮೂಲಕ ವಿಜಯೋತ್ಸವ ಆಚರಿಸೋಣ. ಜುಲೈ 4ರ ಸಂಜೆ 5ರಿಂದ ತವರಿಗೆ ಬರುತ್ತೇವೆ ಎಂದು ಭಾರತ ತಂಡದ ನಾಯಕ ರೋಹಿತ್ ಶರ್ಮಾ ಎಕ್ಸ್ನಲ್ಲಿ ಸಂದೇಶ ಹಾಕಿದ್ದಾರೆ. ‘ದಿನಾಂಕ ನೆನಪಿಟ್ಟುಕೊಳ್ಳಿ. ಭಾರತ ತಂಡದ ವಿಜಯದ ಮೆರವಣಿಗೆಯು ಮರೀನ್ ಡ್ರೈವ್ ಹಾಗೂ ವಾಂಖೆಡೆಯಲ್ಲಿ ನಡೆಯಲಿದೆ. ನಮ್ಮೊಂದಿಗೆ ಸೇರಿ ಸಂಭ್ರಮಿಸಿ’ ಎಂದು ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಕೂಡ ಸಂದೇಶ ಹಾಕಿದ್ದಾರೆ.