<p><strong>ಚಂಡೀಗಢ</strong>: ಬಿಹಾರದ ತಖ್ತ್ ಶ್ರೀ ಪಾಟ್ನಾ ಸಾಹಿಬ್ನ ನಿರ್ದೇಶನವನ್ನು ನಿರ್ಲಕ್ಷಿಸಿದ ಹಾಗೂ ತನ್ನ ಮುಂದೆ ಹಾಜರಾಗದ ಕಾರಣಕ್ಕೆ ಶಿರೋಮಣಿ ಅಕಾಲಿ ದಳದ ಮುಖ್ಯಸ್ಥ ಸುಖಬೀರ್ ಸಿಂಗ್ ಬಾದಲ್ ಅವರನ್ನು ‘ಧಾರ್ಮಿಕ ಅಪರಾಧದ ತಪ್ಪಿತಸ್ಥ (ತನ್ಖೈಯಾ)’ ಎಂದು ಶನಿವಾರ ಘೋಷಿಸಲಾಗಿದೆ.</p>.<p>ಪಂಜಾಬ್ನಲ್ಲಿ 2007ರಿಂದ 2017ರವರೆಗೆ ಶಿರೋಮಣಿ ಅಕಾಲಿ ದಳ ಸರ್ಕಾರವು ಮಾಡಿದ ತಪ್ಪುಗಳಿಗೆ ಕಳೆದ ವರ್ಷ ಆಗಸ್ಟ್ನಲ್ಲಿ ಅಕಾಲ್ ತಖ್ತ್ ‘ತನ್ಖೈಯಾ’ ಎಂದು ಉಚ್ಚರಿಸಿತ್ತು. ಡಿಸೆಂಬರ್ನಲ್ಲಿ ‘ಧಾರ್ಮಿಕ ಶಿಕ್ಷೆ’ ಪ್ರಕಟಿಸಿತ್ತು.</p>.<p>‘ಬಾದಲ್ ಅವರನ್ನು ಧಾರ್ಮಿಕ ಅಪರಾಧದ ತಪ್ಪಿತಸ್ಥ’ ಎಂದು ಘೋಷಿಸಲು ಬಿಹಾರದ ಪಾಟ್ನಾದಲ್ಲಿ ತಖ್ತ್ ಶ್ರೀ ಪಾಟ್ನಾ ಸಾಹಿಬ್ ಜಥೇದಾರ್ ಮತ್ತು ‘ಗ್ರಂಥಿ’ ಮುಖ್ಯಸ್ಥ ಗಿಯಾನಿ ಬಲದೇವ್ ಸಿಂಗ್ ಅವರು ಶುಕ್ರವಾರ ನಿರ್ಧರಿಸಿದ್ದರು.</p>.<p>ತಖ್ತ್ ಶ್ರೀ ಪಾಟ್ನಾ ಸಾಹಿಬ್ ಸಿಖ್ ಧರ್ಮದ ಐದು ಪವಿತ್ರ ಸ್ಥಳಗಳಲ್ಲಿ ಒಂದಾಗಿದೆ. ಅಮೃತಸರದ ಅಕಾಲ್ ತಖ್ತ್ ಅತ್ಯುನ್ನತ ಕೇಂದ್ರವಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಚಂಡೀಗಢ</strong>: ಬಿಹಾರದ ತಖ್ತ್ ಶ್ರೀ ಪಾಟ್ನಾ ಸಾಹಿಬ್ನ ನಿರ್ದೇಶನವನ್ನು ನಿರ್ಲಕ್ಷಿಸಿದ ಹಾಗೂ ತನ್ನ ಮುಂದೆ ಹಾಜರಾಗದ ಕಾರಣಕ್ಕೆ ಶಿರೋಮಣಿ ಅಕಾಲಿ ದಳದ ಮುಖ್ಯಸ್ಥ ಸುಖಬೀರ್ ಸಿಂಗ್ ಬಾದಲ್ ಅವರನ್ನು ‘ಧಾರ್ಮಿಕ ಅಪರಾಧದ ತಪ್ಪಿತಸ್ಥ (ತನ್ಖೈಯಾ)’ ಎಂದು ಶನಿವಾರ ಘೋಷಿಸಲಾಗಿದೆ.</p>.<p>ಪಂಜಾಬ್ನಲ್ಲಿ 2007ರಿಂದ 2017ರವರೆಗೆ ಶಿರೋಮಣಿ ಅಕಾಲಿ ದಳ ಸರ್ಕಾರವು ಮಾಡಿದ ತಪ್ಪುಗಳಿಗೆ ಕಳೆದ ವರ್ಷ ಆಗಸ್ಟ್ನಲ್ಲಿ ಅಕಾಲ್ ತಖ್ತ್ ‘ತನ್ಖೈಯಾ’ ಎಂದು ಉಚ್ಚರಿಸಿತ್ತು. ಡಿಸೆಂಬರ್ನಲ್ಲಿ ‘ಧಾರ್ಮಿಕ ಶಿಕ್ಷೆ’ ಪ್ರಕಟಿಸಿತ್ತು.</p>.<p>‘ಬಾದಲ್ ಅವರನ್ನು ಧಾರ್ಮಿಕ ಅಪರಾಧದ ತಪ್ಪಿತಸ್ಥ’ ಎಂದು ಘೋಷಿಸಲು ಬಿಹಾರದ ಪಾಟ್ನಾದಲ್ಲಿ ತಖ್ತ್ ಶ್ರೀ ಪಾಟ್ನಾ ಸಾಹಿಬ್ ಜಥೇದಾರ್ ಮತ್ತು ‘ಗ್ರಂಥಿ’ ಮುಖ್ಯಸ್ಥ ಗಿಯಾನಿ ಬಲದೇವ್ ಸಿಂಗ್ ಅವರು ಶುಕ್ರವಾರ ನಿರ್ಧರಿಸಿದ್ದರು.</p>.<p>ತಖ್ತ್ ಶ್ರೀ ಪಾಟ್ನಾ ಸಾಹಿಬ್ ಸಿಖ್ ಧರ್ಮದ ಐದು ಪವಿತ್ರ ಸ್ಥಳಗಳಲ್ಲಿ ಒಂದಾಗಿದೆ. ಅಮೃತಸರದ ಅಕಾಲ್ ತಖ್ತ್ ಅತ್ಯುನ್ನತ ಕೇಂದ್ರವಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>