<p><strong>ವೆಲ್ಲೂರು(ತಮಿಳುನಾಡು):</strong> ನಮ್ಮ ಭೂಮಿಗಳು ವಕ್ಫ್ ಮಂಡಳಿಗೆ ಸೇರಿವೆ ಎಂದು ಇದ್ದಕ್ಕಿದ್ದಂತೆ ನೋಟಿಸ್ ನೀಡಲಾಗಿದೆ ಎಂದು ಇಲ್ಲಿನ ಹಳ್ಳಿಗಳ ಜನರು ಹೇಳಿದ್ದಾರೆ. </p><p>ಇಲ್ಲಿನ ದರ್ಗಾ ನೋಡಿಕೊಳ್ಳುವ ಆಡಳಿತ ಮಂಡಳಿಯಿಂದ ನಮ್ಮ ಭೂಮಿಗಳನ್ನು ವಕ್ಫ್ ಆಸ್ತಿ ಎಂದು ಘೋಷಿಸಿ ನೋಟಿಸ್ ನೀಡಿದೆ ಎಂದು ತಿಳಿಸಿದ್ದಾರೆ.</p><p>ಭೂಮಿಗೆ ಬಾಡಿಗೆ ನೀಡಿ ಇಲ್ಲವೆ ಜಾಗ ಖಾಲಿ ಮಾಡಿ ಎಂದು ನೋಟಿಸ್ನಲ್ಲಿ ತಿಳಿಸಲಾಗಿದೆ. </p><p>ಈ ಸಂಬಂಧ ವೆಲ್ಲೂ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ್ದು, ಈ ಸಂಬಂಧ ಪರಿಶೀಲನೆ ನಡೆಸಿ, ನ್ಯಾಯ ಒದಗಿಸುವಂತೆ ಕೋರಿರುವುದಾಗಿ ಹಳ್ಳಿಗರು ಹೆಳಿದ್ದಾರೆ.</p><p>ಸುಮಾರು 3-4 ತಲೆಮಾರುಗಳಿಂದ ಗ್ರಾಮದಲ್ಲಿ ವಾಸಿಸುತ್ತಿದ್ದೇವೆ ಮತ್ತು ಈಗ ಇದ್ದಕ್ಕಿದ್ದಂತೆ ನಮಗೆ ನೋಟಿಸ್ ಬಂದಿದೆ ಎಂದು ವಿರಿನಿಚಿಪುರಂ ಬಳಿಯ ಅನೈಕಟ್ಟು ವ್ಯಾಪ್ತಿಯ ಕಾಟುಕೊಳ್ಳೈ ಗ್ರಾಮದ ನಿವಾಸಿಗಳು ಹೇಳಿದ್ದಾರೆ..</p><p>ಸುಮಾರು 150 ಕುಟುಂಬಗಳು ಗ್ರಾಮದಲ್ಲಿ ವಾಸಿಸುತ್ತಿದ್ದು, ಎಷ್ಟು ಜನರಿಗೆ ನೋಟಿಸ್ ಬಂದಿದೆ ಎಂಬ ಬಗ್ಗೆ ತಕ್ಷಣಕ್ಕೆ ನಿಖರ ಮಾಹಿತಿ ಸಿಕ್ಕಿಲ್ಲ.</p> .<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ವೆಲ್ಲೂರು(ತಮಿಳುನಾಡು):</strong> ನಮ್ಮ ಭೂಮಿಗಳು ವಕ್ಫ್ ಮಂಡಳಿಗೆ ಸೇರಿವೆ ಎಂದು ಇದ್ದಕ್ಕಿದ್ದಂತೆ ನೋಟಿಸ್ ನೀಡಲಾಗಿದೆ ಎಂದು ಇಲ್ಲಿನ ಹಳ್ಳಿಗಳ ಜನರು ಹೇಳಿದ್ದಾರೆ. </p><p>ಇಲ್ಲಿನ ದರ್ಗಾ ನೋಡಿಕೊಳ್ಳುವ ಆಡಳಿತ ಮಂಡಳಿಯಿಂದ ನಮ್ಮ ಭೂಮಿಗಳನ್ನು ವಕ್ಫ್ ಆಸ್ತಿ ಎಂದು ಘೋಷಿಸಿ ನೋಟಿಸ್ ನೀಡಿದೆ ಎಂದು ತಿಳಿಸಿದ್ದಾರೆ.</p><p>ಭೂಮಿಗೆ ಬಾಡಿಗೆ ನೀಡಿ ಇಲ್ಲವೆ ಜಾಗ ಖಾಲಿ ಮಾಡಿ ಎಂದು ನೋಟಿಸ್ನಲ್ಲಿ ತಿಳಿಸಲಾಗಿದೆ. </p><p>ಈ ಸಂಬಂಧ ವೆಲ್ಲೂ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ್ದು, ಈ ಸಂಬಂಧ ಪರಿಶೀಲನೆ ನಡೆಸಿ, ನ್ಯಾಯ ಒದಗಿಸುವಂತೆ ಕೋರಿರುವುದಾಗಿ ಹಳ್ಳಿಗರು ಹೆಳಿದ್ದಾರೆ.</p><p>ಸುಮಾರು 3-4 ತಲೆಮಾರುಗಳಿಂದ ಗ್ರಾಮದಲ್ಲಿ ವಾಸಿಸುತ್ತಿದ್ದೇವೆ ಮತ್ತು ಈಗ ಇದ್ದಕ್ಕಿದ್ದಂತೆ ನಮಗೆ ನೋಟಿಸ್ ಬಂದಿದೆ ಎಂದು ವಿರಿನಿಚಿಪುರಂ ಬಳಿಯ ಅನೈಕಟ್ಟು ವ್ಯಾಪ್ತಿಯ ಕಾಟುಕೊಳ್ಳೈ ಗ್ರಾಮದ ನಿವಾಸಿಗಳು ಹೇಳಿದ್ದಾರೆ..</p><p>ಸುಮಾರು 150 ಕುಟುಂಬಗಳು ಗ್ರಾಮದಲ್ಲಿ ವಾಸಿಸುತ್ತಿದ್ದು, ಎಷ್ಟು ಜನರಿಗೆ ನೋಟಿಸ್ ಬಂದಿದೆ ಎಂಬ ಬಗ್ಗೆ ತಕ್ಷಣಕ್ಕೆ ನಿಖರ ಮಾಹಿತಿ ಸಿಕ್ಕಿಲ್ಲ.</p> .<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>