<p><strong>ಮೇದಿನಿನಗರ (ಜಾರ್ಖಂಡ್):</strong> ಬಿಸಿಯೂಟ ಸಿಬ್ಬಂದಿ ಪತಿಯ ಕೊಲೆಯತ್ನ ನಡೆಸಿದ ಆರೋಪದಲ್ಲಿ ಸರ್ಕಾರಿ ಶಾಲೆಯ ಶಿಕ್ಷಕ ಹಾಗೂ ಮೂವರು ಬಾಡಿಗೆ ಕೊಲೆಗಾರರನ್ನು ಜಾರ್ಖಂಡ್ನ ಪಲಾಮು ಜಿಲ್ಲೆಯಲ್ಲಿ ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.</p>.ಜಾರ್ಖಂಡ್: ₹5 ಲಕ್ಷ ಇನಾಮು ಘೋಷಣೆಯಾಗಿದ್ದ ಇಬ್ಬರು ನಕ್ಸಲರ ಶರಣಾಗತಿ.<p>ಆರೋಪಿ ಶಿಕ್ಷಕ ಸತ್ಯದೇವ ವಿಶ್ವಕರ್ಮ (50) ಎಂಬಾತನಿಗೆ ಅಡುಗೆ ಸಿಬ್ಬಂದಿ ಜೊತೆ ಸಂಬಂಧ ಹೊಂದುವ ಇರಾದೆ ಇತ್ತು. ಇದಕ್ಕೆ ಆಕೆಯ ಪತಿ ತಡೆಯಾಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.</p><p>ಶಿಕ್ಷಕನ ನಡವಳಿಕೆ ಬಗ್ಗೆ ಸಿಬ್ಬಂದಿ ತನ್ನ ಪತಿಗೆ ಹೇಳಿದ್ದಳು. ಈ ಬಗ್ಗೆ ಶಿಕ್ಷಕ ಹಾಗೂ ಆಕೆಯ ಪತಿ ನಡುವೆ ಜಗಳ ನಡೆದಿತ್ತು. ಹೀಗಾಗಿ ಆಕೆಯ ಪತಿಯನ್ನು ಕೊಲೆ ಮಾಡುವ ಯೋಜನೆ ಹಾಕಿದ್ದ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರೀಷ್ಮಾ ರಮೇಶನ್ ಹೇಳಿದ್ದಾರೆ.</p>.ಜಾರ್ಖಂಡ್: ಭದ್ರತಾ ಪಡೆ ಜೊತೆಗಿನ ಗುಂಡಿನ ಚಕಮಕಿಯಲ್ಲಿ 3 ನಕ್ಸಲರು ಹತ.<p>ಆತನನ್ನು ಕೊಲೆ ಮಾಡಲು ₹ 40 ಸಾವಿರ ನೀಡಿ ಬಾಡಿಗೆ ಕೊಲೆಗಾರರಿಗೆ ಸುಪಾರಿ ನೀಡಿದ್ದ. ಈ ಯೋಜನೆ ತಿಳಿದ ಪೊಲೀಸರು, ಕೊಲೆಗಾರರು ಅಡುಗೆ ಸಿಬ್ಬಂದಿ ಮನೆಗೆ ತೆರಳುವಾಗ ಬಂಧಿಸಿದ್ದಾರೆ ಎಂದು ಅವರು ತಿಳಿಸಿದ್ದಾರೆ.</p><p>ಅವರಿಂದ ಪಿಸ್ತೂಲು ಹಾಗೂ ಎರಡು ಚಾಕುಗಳನ್ನು ವಶಪಡಿಸಿಕೊಳ್ಳಲಾಗಿದೆ.</p><p>ರಾಜವಂಶ ಪರ್ಹಿಯಾ (52), ರಾಜು ಸಾವು (35) ಹಾಗೂ ಮಂತು ಕುಮಾರ್ ಪರ್ಹಿಯಾ (33) ಎಂಬವರನ್ನು ಬಂಧಿಸಲಾಗಿದೆ.</p>.ಬಡತನ| ₹50 ಸಾವಿರಕ್ಕೆ ಮಗು ಮಾರಾಟ: ಜಾರ್ಖಂಡ್ CM ಸೂಚನೆಯ ಮೇರೆಗೆ ಮಗುವಿನ ರಕ್ಷಣೆ.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮೇದಿನಿನಗರ (ಜಾರ್ಖಂಡ್):</strong> ಬಿಸಿಯೂಟ ಸಿಬ್ಬಂದಿ ಪತಿಯ ಕೊಲೆಯತ್ನ ನಡೆಸಿದ ಆರೋಪದಲ್ಲಿ ಸರ್ಕಾರಿ ಶಾಲೆಯ ಶಿಕ್ಷಕ ಹಾಗೂ ಮೂವರು ಬಾಡಿಗೆ ಕೊಲೆಗಾರರನ್ನು ಜಾರ್ಖಂಡ್ನ ಪಲಾಮು ಜಿಲ್ಲೆಯಲ್ಲಿ ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.</p>.ಜಾರ್ಖಂಡ್: ₹5 ಲಕ್ಷ ಇನಾಮು ಘೋಷಣೆಯಾಗಿದ್ದ ಇಬ್ಬರು ನಕ್ಸಲರ ಶರಣಾಗತಿ.<p>ಆರೋಪಿ ಶಿಕ್ಷಕ ಸತ್ಯದೇವ ವಿಶ್ವಕರ್ಮ (50) ಎಂಬಾತನಿಗೆ ಅಡುಗೆ ಸಿಬ್ಬಂದಿ ಜೊತೆ ಸಂಬಂಧ ಹೊಂದುವ ಇರಾದೆ ಇತ್ತು. ಇದಕ್ಕೆ ಆಕೆಯ ಪತಿ ತಡೆಯಾಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.</p><p>ಶಿಕ್ಷಕನ ನಡವಳಿಕೆ ಬಗ್ಗೆ ಸಿಬ್ಬಂದಿ ತನ್ನ ಪತಿಗೆ ಹೇಳಿದ್ದಳು. ಈ ಬಗ್ಗೆ ಶಿಕ್ಷಕ ಹಾಗೂ ಆಕೆಯ ಪತಿ ನಡುವೆ ಜಗಳ ನಡೆದಿತ್ತು. ಹೀಗಾಗಿ ಆಕೆಯ ಪತಿಯನ್ನು ಕೊಲೆ ಮಾಡುವ ಯೋಜನೆ ಹಾಕಿದ್ದ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರೀಷ್ಮಾ ರಮೇಶನ್ ಹೇಳಿದ್ದಾರೆ.</p>.ಜಾರ್ಖಂಡ್: ಭದ್ರತಾ ಪಡೆ ಜೊತೆಗಿನ ಗುಂಡಿನ ಚಕಮಕಿಯಲ್ಲಿ 3 ನಕ್ಸಲರು ಹತ.<p>ಆತನನ್ನು ಕೊಲೆ ಮಾಡಲು ₹ 40 ಸಾವಿರ ನೀಡಿ ಬಾಡಿಗೆ ಕೊಲೆಗಾರರಿಗೆ ಸುಪಾರಿ ನೀಡಿದ್ದ. ಈ ಯೋಜನೆ ತಿಳಿದ ಪೊಲೀಸರು, ಕೊಲೆಗಾರರು ಅಡುಗೆ ಸಿಬ್ಬಂದಿ ಮನೆಗೆ ತೆರಳುವಾಗ ಬಂಧಿಸಿದ್ದಾರೆ ಎಂದು ಅವರು ತಿಳಿಸಿದ್ದಾರೆ.</p><p>ಅವರಿಂದ ಪಿಸ್ತೂಲು ಹಾಗೂ ಎರಡು ಚಾಕುಗಳನ್ನು ವಶಪಡಿಸಿಕೊಳ್ಳಲಾಗಿದೆ.</p><p>ರಾಜವಂಶ ಪರ್ಹಿಯಾ (52), ರಾಜು ಸಾವು (35) ಹಾಗೂ ಮಂತು ಕುಮಾರ್ ಪರ್ಹಿಯಾ (33) ಎಂಬವರನ್ನು ಬಂಧಿಸಲಾಗಿದೆ.</p>.ಬಡತನ| ₹50 ಸಾವಿರಕ್ಕೆ ಮಗು ಮಾರಾಟ: ಜಾರ್ಖಂಡ್ CM ಸೂಚನೆಯ ಮೇರೆಗೆ ಮಗುವಿನ ರಕ್ಷಣೆ.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>