<p><strong>ಹೈದರಾಬಾದ್:</strong>ಕೋವಿಡ್–19 ನಿಂದ ಬಳಲುತ್ತಿದ್ದ ವ್ಯಕ್ತಿಗೆ ಯಶಸ್ವಿಯಾಗಿ ಶ್ವಾಸಕೋಶ ಕಸಿ ಶಸ್ತ್ರಚಿಕಿತ್ಸೆ ನೆರವೇರಿಸಲಾಗಿದೆ ಎಂದು ಹೈದರಾಬಾದ್ನ ಕೃಷ್ಣ ಇನ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ನ ವೈದ್ಯರು ಹೇಳಿದ್ದಾರೆ. ಇಂಥ ಶಸ್ತ್ರಚಿಕಿತ್ಸೆ ನೆರವೇರಿಸಿರುವುದು ದೇಶದಲ್ಲಿಯೇ ಮೊದಲು ಎಂದೂ ಹೇಳಿಕೊಂಡಿದ್ದಾರೆ.</p>.<p>ಡಾ.ಸಂದೀಪ್ ಅತ್ತಾವರ ನೇತೃತ್ವದ ವೈದ್ಯರ ತಂಡ ಚಂಡೀಗಡ ಮೂಲದ 32 ವರ್ಷದ ವ್ಯಕ್ತಿಗೆ ಈ ಶಸ್ತ್ರಚಿಕಿತ್ಸೆ ನೆರವೇರಿಸಿದೆ ಎಂದು ಆಸ್ಪತ್ರೆಯ ಪ್ರಕಟಣೆ ತಿಳಿಸಿದೆ.</p>.<p>‘ಶ್ವಾಸಕೋಶ ಸಂಬಂಧಿ ಕಾಯಿಲೆ ‘ಸರ್ಕೋಯ್ಡೊಸಿಸ್’ ನಿಂದ ಬಳಲುತ್ತಿದ್ದ ಈ ವ್ಯಕ್ತಿಗೆ ಕೋವಿಡ್–19 ತಗುಲಿದ್ದರಿಂದ ಅವರ ಆರೋಗ್ಯ ಸ್ಥಿತಿ ಗಂಭೀರವಾಯಿತು. ಹೀಗಾವಿ ಅವರಿಗೆ ತುರ್ತಾಗಿ ಶ್ವಾಸಕೋಶ ಕಸಿ ಮಾಡುವುದು ಅನಿವಾರ್ಯವಾಗಿತ್ತು’ ಎಂದು ಡಾ.ಅತ್ತಾವರ ತಿಳಿಸಿದರು.</p>.<p><strong>ಇದನ್ನೂ ಓದಿ:</strong><a href="https://www.prajavani.net/world-news/india-votes-in-favour-of-unga-resolution-calling-for-multilateral-cooperation-to-combat-covid-761096.html" itemprop="url">ಕೋವಿಡ್–19: ವಿಶ್ವಸಂಸ್ಥೆ ನಿರ್ಣಯ ಪರ ಮತ ಚಲಾಯಿಸಿದ ಭಾರತ</a></p>.<p>‘ಮಿದುಳು ನಿಷ್ಕ್ರಿಯಗೊಂಡಿದ್ದ ಕೋಲ್ಕತ್ತ ಮೂಲದ ವ್ಯಕ್ತಿಯ ಶ್ವಾಸಕೋಶಗಳು ಲಭ್ಯ ಇರುವ ಮಾಹಿತಿ ಲಭಿಸಿತು. ಏರ್ಲಿಫ್ಟ್ ನೆರವಿನಿಂದ ತರಿಸಿಕೊಳ್ಳಲಾದ ಶ್ವಾಸಕೋಶಗಳನ್ನು ಶಸ್ತ್ರಚಿಕಿತ್ಸೆ ಮೂಲಕ ಚಂಡೀಗಡ ಮೂಲದ ರೋಗಿಗೆ ಕಸಿ ಮಾಡಲಾಯಿತು’ ಎಂದು ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹೈದರಾಬಾದ್:</strong>ಕೋವಿಡ್–19 ನಿಂದ ಬಳಲುತ್ತಿದ್ದ ವ್ಯಕ್ತಿಗೆ ಯಶಸ್ವಿಯಾಗಿ ಶ್ವಾಸಕೋಶ ಕಸಿ ಶಸ್ತ್ರಚಿಕಿತ್ಸೆ ನೆರವೇರಿಸಲಾಗಿದೆ ಎಂದು ಹೈದರಾಬಾದ್ನ ಕೃಷ್ಣ ಇನ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ನ ವೈದ್ಯರು ಹೇಳಿದ್ದಾರೆ. ಇಂಥ ಶಸ್ತ್ರಚಿಕಿತ್ಸೆ ನೆರವೇರಿಸಿರುವುದು ದೇಶದಲ್ಲಿಯೇ ಮೊದಲು ಎಂದೂ ಹೇಳಿಕೊಂಡಿದ್ದಾರೆ.</p>.<p>ಡಾ.ಸಂದೀಪ್ ಅತ್ತಾವರ ನೇತೃತ್ವದ ವೈದ್ಯರ ತಂಡ ಚಂಡೀಗಡ ಮೂಲದ 32 ವರ್ಷದ ವ್ಯಕ್ತಿಗೆ ಈ ಶಸ್ತ್ರಚಿಕಿತ್ಸೆ ನೆರವೇರಿಸಿದೆ ಎಂದು ಆಸ್ಪತ್ರೆಯ ಪ್ರಕಟಣೆ ತಿಳಿಸಿದೆ.</p>.<p>‘ಶ್ವಾಸಕೋಶ ಸಂಬಂಧಿ ಕಾಯಿಲೆ ‘ಸರ್ಕೋಯ್ಡೊಸಿಸ್’ ನಿಂದ ಬಳಲುತ್ತಿದ್ದ ಈ ವ್ಯಕ್ತಿಗೆ ಕೋವಿಡ್–19 ತಗುಲಿದ್ದರಿಂದ ಅವರ ಆರೋಗ್ಯ ಸ್ಥಿತಿ ಗಂಭೀರವಾಯಿತು. ಹೀಗಾವಿ ಅವರಿಗೆ ತುರ್ತಾಗಿ ಶ್ವಾಸಕೋಶ ಕಸಿ ಮಾಡುವುದು ಅನಿವಾರ್ಯವಾಗಿತ್ತು’ ಎಂದು ಡಾ.ಅತ್ತಾವರ ತಿಳಿಸಿದರು.</p>.<p><strong>ಇದನ್ನೂ ಓದಿ:</strong><a href="https://www.prajavani.net/world-news/india-votes-in-favour-of-unga-resolution-calling-for-multilateral-cooperation-to-combat-covid-761096.html" itemprop="url">ಕೋವಿಡ್–19: ವಿಶ್ವಸಂಸ್ಥೆ ನಿರ್ಣಯ ಪರ ಮತ ಚಲಾಯಿಸಿದ ಭಾರತ</a></p>.<p>‘ಮಿದುಳು ನಿಷ್ಕ್ರಿಯಗೊಂಡಿದ್ದ ಕೋಲ್ಕತ್ತ ಮೂಲದ ವ್ಯಕ್ತಿಯ ಶ್ವಾಸಕೋಶಗಳು ಲಭ್ಯ ಇರುವ ಮಾಹಿತಿ ಲಭಿಸಿತು. ಏರ್ಲಿಫ್ಟ್ ನೆರವಿನಿಂದ ತರಿಸಿಕೊಳ್ಳಲಾದ ಶ್ವಾಸಕೋಶಗಳನ್ನು ಶಸ್ತ್ರಚಿಕಿತ್ಸೆ ಮೂಲಕ ಚಂಡೀಗಡ ಮೂಲದ ರೋಗಿಗೆ ಕಸಿ ಮಾಡಲಾಯಿತು’ ಎಂದು ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>