‘ತೆಲಂಗಾಣದ ಪ್ರಗತಿಗೆ ಹೊಸ ಪ್ರಾರಂಭ ನೀಡಿದ 2023ನೇ ಇಸವಿಯು ಇತಿಹಾಸದಲ್ಲಿ ಉಳಿಯಲಿದೆ. ಜನ ಈಗಾಗಲೇ ಬದಲಾವಣೆಯನ್ನು ಅನುಭವಿಸುತ್ತಿದ್ದಾರೆ. ತೆಲಂಗಾಣ ಈಗ ಸ್ವಾತಂತ್ರ್ಯದ ತಾಜಾ ಗಾಳಿಯನ್ನು ಉಸಿರಾಡುತ್ತಿದೆ. ತೆಲಂಗಾಣವು ನಿರಂಕುಶ ಆಡಳಿತ ಮತ್ತು ಸರ್ವಾಧಿಕಾರಿ ಧೋರಣೆಗಳಿಂದ ವಿಮೋಚನೆಗೊಂಡಿದೆ’ ಎಂದು ಹೇಳಿದ್ದಾರೆ.
‘ಸದ್ಯ ಆಯ್ಕೆಯಾಗಿರುವ ಸರ್ಕಾರವು ಎಲ್ಲಾ ಜನರಿಗೆ, ಪಕ್ಷಗಳಿಗೆ, 2014ರಲ್ಲಿ ಪ್ರತ್ಯೇಕ ತೆಲಂಗಾಣ ರಚಿಸಿದ್ದಕ್ಕಾಗಿ ಆಗಿನ ಯುಪಿಎ ಸರ್ಕಾರಕ್ಕೆ ಹಾಗೂ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರಿಗೆ ಧನ್ಯವಾದ ಸಲ್ಲಿಸುತ್ತದೆ’ ಎಂದು ಹೇಳಿದ್ದಾರೆ.
ನಾಲ್ಕು ಕೋಟಿ ತೆಲಂಗಾಣ ಜನರ ಪರವಾಗಿ, ತೆಲಂಗಾಣ ರಾಜ್ಯ ರಚಿಸುವ ಪ್ರಕ್ರಿಯೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೂ ಸರ್ಕಾರ ಧನ್ಯವಾದ ಅರ್ಪಿಸುತ್ತದೆ’ ಎಂದು ನುಡಿದಿದ್ದಾರೆ.