<p><strong>ಹೈದರಾಬಾದ್:</strong> ಗರಿಷ್ಠ ಎರಡು ಮಕ್ಕಳನ್ನು ಹೊಂದಿರುವವರು ಮಾತ್ರ ಸ್ಥಳೀಯ ಸಂಸ್ಥೆ ಚುನಾವಣೆಗೆ ಸ್ಪರ್ಧಿಸಬಹುದು ಎಂಬ ‘ಎರಡು ಮಕ್ಕಳ ನೀತಿ’ ಯನ್ದು ರದ್ದುಪಡಿಸುವ ಮಸೂದೆಯನ್ನು ತೆಲಂಗಾಣ ವಿಧಾನಸಭೆ ಶನಿವಾರ ಅಂಗೀಕರಿಸಿದೆ.</p>.<p>ಪಂಚಾಯತ್ ರಾಜ್ ಸಚಿವೆ ದಾನಶ್ರೀ ಅನಸೂಯ ಸೀತಕ್ಕ ಅವರು ಸದನದಲ್ಲಿ ‘ತೆಲಂಗಾಣ ಪಂಚಾಯತ್ ರಾಜ್ (ತಿದ್ದುಪಡಿ) ಮಸೂದೆ 2026’ ಅನ್ನು ಮಂಡಿಸಿದರು.</p>.<p>‘1980 ಮತ್ತು 90 ರ ದಶಕದಲ್ಲಿ ಜನಸಂಖ್ಯೆ ಸ್ಫೋಟ, ಆಹಾರ ಭದ್ರತೆ, ನಿರುದ್ಯೋಗ ಮತ್ತು ಬಡತನದ ಸವಾಲುಗಳನ್ನು ನಿವಾರಿಸಲು ಜನಸಂಖ್ಯಾ ನಿಯಂತ್ರಣ ಕ್ರಮವಾಗಿ 1994 ರಲ್ಲಿ ‘ಎರಡು ಮಕ್ಕಳ ನೀತಿ’ಯನ್ನು ಪರಿಚಯಿಸಲಾಗಿತ್ತು. ಇದು ಜಾರಿಗೆ ಬಂದು 30 ವರ್ಷಗಳ ನಂತರ ಜನಸಂಖ್ಯೆ ನೀತಿಯನ್ನು ಸರ್ಕಾರ ಪರಿಶೀಲಿಸಿದೆ. ಆ ಪ್ರಕಾರ ತೆಲಂಗಾಣದ ಗ್ರಾಮೀಣ ಪ್ರದೇಶಗಳಲ್ಲಿ ಫಲವಂತಿಕೆ ದರ 1.7 ರಷ್ಟಿದ್ದು, ಇದೇ ರೀತಿ ಫಲವಂತಿಕೆ ಮುಂದುವರಿದರೆ, ತೆಲಂಗಾಣದ ಜನಸಂಖ್ಯೆಯ ಮೇಲೆ ಪ್ರತಿಕೂಲ ಪರಿಣಾಬೀರುತ್ತದೆ’ ಎಂದು ಸೀತಕ್ಕ ಹೇಳಿದರು.</p>.<p>ಕ್ಷೀಣಿಸುತ್ತಿರುವ ಫಲವತ್ತತೆ ದರವನ್ನು ಸುಧಾರಿಸಲು ಮತ್ತು ಸ್ಥಳೀಯ ಸಂಸ್ಥೆಗಳ ಚುನಾವಣೆಗಳನ್ನು ನಡೆಸಲು ಸರ್ಕಾರವು ‘2018 ರ ತೆಲಂಗಾಣ ಪಂಚಾಯತ್ ರಾಜ್ ಕಾಯ್ದೆಗೆ ತಿದ್ದುಪಡಿ ತರಲು ಪ್ರಸ್ತಾಪಿಸುತ್ತಿದೆ ಎಂದು ಅವರು ಹೇಳಿದರು. ಮಸೂದೆಯನ್ನು ನಂತರ ಸದನವು ಅಂಗೀಕರಿಸಿತು. ಈ ಉದ್ದೇಶಕ್ಕಾಗಿ ಹಿಂದೆ ಹೊರಡಿಸಿದ್ದ ಸುಗ್ರೀವಾಜ್ಞೆಯನ್ನು ರದ್ದುಗೊಳಿಸಲಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹೈದರಾಬಾದ್:</strong> ಗರಿಷ್ಠ ಎರಡು ಮಕ್ಕಳನ್ನು ಹೊಂದಿರುವವರು ಮಾತ್ರ ಸ್ಥಳೀಯ ಸಂಸ್ಥೆ ಚುನಾವಣೆಗೆ ಸ್ಪರ್ಧಿಸಬಹುದು ಎಂಬ ‘ಎರಡು ಮಕ್ಕಳ ನೀತಿ’ ಯನ್ದು ರದ್ದುಪಡಿಸುವ ಮಸೂದೆಯನ್ನು ತೆಲಂಗಾಣ ವಿಧಾನಸಭೆ ಶನಿವಾರ ಅಂಗೀಕರಿಸಿದೆ.</p>.<p>ಪಂಚಾಯತ್ ರಾಜ್ ಸಚಿವೆ ದಾನಶ್ರೀ ಅನಸೂಯ ಸೀತಕ್ಕ ಅವರು ಸದನದಲ್ಲಿ ‘ತೆಲಂಗಾಣ ಪಂಚಾಯತ್ ರಾಜ್ (ತಿದ್ದುಪಡಿ) ಮಸೂದೆ 2026’ ಅನ್ನು ಮಂಡಿಸಿದರು.</p>.<p>‘1980 ಮತ್ತು 90 ರ ದಶಕದಲ್ಲಿ ಜನಸಂಖ್ಯೆ ಸ್ಫೋಟ, ಆಹಾರ ಭದ್ರತೆ, ನಿರುದ್ಯೋಗ ಮತ್ತು ಬಡತನದ ಸವಾಲುಗಳನ್ನು ನಿವಾರಿಸಲು ಜನಸಂಖ್ಯಾ ನಿಯಂತ್ರಣ ಕ್ರಮವಾಗಿ 1994 ರಲ್ಲಿ ‘ಎರಡು ಮಕ್ಕಳ ನೀತಿ’ಯನ್ನು ಪರಿಚಯಿಸಲಾಗಿತ್ತು. ಇದು ಜಾರಿಗೆ ಬಂದು 30 ವರ್ಷಗಳ ನಂತರ ಜನಸಂಖ್ಯೆ ನೀತಿಯನ್ನು ಸರ್ಕಾರ ಪರಿಶೀಲಿಸಿದೆ. ಆ ಪ್ರಕಾರ ತೆಲಂಗಾಣದ ಗ್ರಾಮೀಣ ಪ್ರದೇಶಗಳಲ್ಲಿ ಫಲವಂತಿಕೆ ದರ 1.7 ರಷ್ಟಿದ್ದು, ಇದೇ ರೀತಿ ಫಲವಂತಿಕೆ ಮುಂದುವರಿದರೆ, ತೆಲಂಗಾಣದ ಜನಸಂಖ್ಯೆಯ ಮೇಲೆ ಪ್ರತಿಕೂಲ ಪರಿಣಾಬೀರುತ್ತದೆ’ ಎಂದು ಸೀತಕ್ಕ ಹೇಳಿದರು.</p>.<p>ಕ್ಷೀಣಿಸುತ್ತಿರುವ ಫಲವತ್ತತೆ ದರವನ್ನು ಸುಧಾರಿಸಲು ಮತ್ತು ಸ್ಥಳೀಯ ಸಂಸ್ಥೆಗಳ ಚುನಾವಣೆಗಳನ್ನು ನಡೆಸಲು ಸರ್ಕಾರವು ‘2018 ರ ತೆಲಂಗಾಣ ಪಂಚಾಯತ್ ರಾಜ್ ಕಾಯ್ದೆಗೆ ತಿದ್ದುಪಡಿ ತರಲು ಪ್ರಸ್ತಾಪಿಸುತ್ತಿದೆ ಎಂದು ಅವರು ಹೇಳಿದರು. ಮಸೂದೆಯನ್ನು ನಂತರ ಸದನವು ಅಂಗೀಕರಿಸಿತು. ಈ ಉದ್ದೇಶಕ್ಕಾಗಿ ಹಿಂದೆ ಹೊರಡಿಸಿದ್ದ ಸುಗ್ರೀವಾಜ್ಞೆಯನ್ನು ರದ್ದುಗೊಳಿಸಲಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>