ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಗರಶೈಲಿಯ ದೇವಾಲಯ, 392 ಕಂಬಗಳು, 44 ದ್ವಾರಗಳು... ರಾಮಮಂದಿರದ ವಿಶೇಷತೆಗಳಿವು

Published 4 ಜನವರಿ 2024, 13:58 IST
Last Updated 4 ಜನವರಿ 2024, 13:58 IST
ಅಕ್ಷರ ಗಾತ್ರ

ಅಯೋಧ್ಯೆ:  ಇದೇ 22 ರಂದು ಪ್ರಧಾನಿ ನರೇಂದ್ರ  ಮೋದಿ ಅವರು ಉದ್ಘಾಟಿಸಲಿರುವ ಮತ್ತು ರಾಮಲಲ್ಲಾ ವಿಗ್ರಹದ ಪ್ರಾಣ ಪ್ರತಿಷ್ಠಾಪನೆ ಮಾಡಲಿರುವ ರಾಮಮಂದಿರ ಹಲವು ವಿಶೇಷತೆಗಳನ್ನು ಒಳಗೊಂಡಿದೆ. ಅವುಗಳ ಬಗ್ಗೆ ಇಲ್ಲಿದೆ ಮಾಹಿತಿ....

  • ರಾಮಮಂದಿರ ದೇವಾಲಯವನ್ನು ನಾಗರ ಶೈಲಿಯಲ್ಲಿ ನಿರ್ಮಿಸಲಾಗಿದೆ (ಮಾಲ್ವಾ, ರಜಪೂತ ಮತ್ತು ಕಳಿಂಗ ಪ್ರದೇಶಗಳಲ್ಲಿ ಇದು ಹೆಚ್ಚು ಜನಪ್ರಿಯವಾಗಿದೆ)

  • ದೇವಾಲಯದ ಆಯ: ಉದ್ದ (ಪೂರ್ವದಿಂದ ಪಶ್ಚಿಮಕ್ಕೆ) - 380 ಅಡಿ, ಅಗಲ - 250 ಅಡಿ, ಮತ್ತು ಎತ್ತರ - 161 ಅಡಿ ಇದೆ.

  • ದೇವಾಲಯ ಮೂರು ಅಂತಸ್ತಿನದಾಗಿದ್ದು, ಪ್ರತಿ ಮಹಡಿ 20 ಅಡಿ ಎತ್ತರವಿದೆ. ದೇವಾಲಯದಲ್ಲಿ ಒಟ್ಟು 392 ಕಂಬಗಳು, 44 ದ್ವಾರಗಳಿವೆ.

  • ಮುಖ್ಯ ಗರ್ಭಗುಡಿ ಬಾಲರಾಮನ ಗೃಹವಾಗಿರಲಿದ್ದು ದೇವಾಲಯದ ಮೊದಲ ಮಹಡಿ ಶ್ರೀರಾಮ ದರ್ಬಾರ್‌ ಆಗಿರಲಿದೆ.

  • ಐದು ಮಂಟಪಗಳನ್ನು ಒಳಗೊಂಡ ರಾಮಮಂದಿರದಲ್ಲಿ ನೃತ್ಯ, ರಂಗ, ಸಭಾ, ಪ್ರಾರ್ಥನೆ ಮತ್ತು ಕೀರ್ತನ ಮಂಟಪಗಳಿವೆ.

  • ದೇವಸ್ಥಾನದ ಪ್ರವೇಶ ದ್ವಾರ ಪೂರ್ವ ದಿಕ್ಕಿನಲ್ಲಿದ್ದು, ಸಿಂಹದ್ವಾರದಿಂದ 32 ಮೆಟ್ಟಿಲುಗಳನ್ನು ಏರಿ ದೇವಾಲಯವನ್ನು ತಲುಪಬೇಕು. ವಿಶೇಷ ಚೇತನರಿಗಾಗಿ ಇಳಿಜಾರು ಪ್ರದೇಶ ಮತ್ತು ಲಿಫ್ಟ್‌ ವ್ಯವಸ್ಥೆಯನ್ನೂ ಮಾಡಲಾಗಿದೆ.

  • ದೇವಾಲಯದ ಸುತ್ತಲಿನ ಆಯತಾಕಾರದ ಗೋಡೆಯು ಒಟ್ಟು 732 ಮೀಟರ್ ಉದ್ದ ಮತ್ತು 14 ಅಡಿ ಅಗಲವಿದೆ.

  • ಸೂರ್ಯದೇವ. ತಾಯಿ ಭಗವತಿ, ಗಣಪತಿ ಮತ್ತು ಶಿವನ ದೇವಾಲಯಗಳನ್ನು ರಾಮಮಂದಿರ ನಾಲ್ಕು ಮೂಲೆಗಳಲ್ಲಿ ನಿರ್ಮಿಸಲಾಗಿದೆ. ಅದೇ ರೀತಿ ಅನ್ನಪೂರ್ಣ ದೇವಿ ಮತ್ತು ಹನುಮಂತನ ಗುಡಿಯನ್ನು ಮಂದಿರದ ಉತ್ತರ ಮತ್ತು ದಕ್ಷಿಣ ದಿಕ್ಕಿನಲ್ಲಿ ನಿರ್ಮಿಸಲಾಗಿದೆ.

  • ದೇವಾಲಯದ ಬಳಿ ಪುರಾಣ ಕಾಲದ ಸೀತಾಕೂಪ ಇರಲಿದೆ.

  • ಇನ್ನು, ದೇವಾಲಯದ ಆವರಣದಲ್ಲಿ ಮಹರ್ಷಿ ವಾಲ್ಮೀಕಿ, ಶಬರಿ ಮತ್ತು ಗೌತಮ ಮಹರ್ಷಿಯ ಪತ್ನಿ ಅಹಲ್ಯಾ ದೇವಿಯ ಗುಡಿ ಕಟ್ಟಲಾಗಿದೆ.

  • ನೈರುತ್ಯ ದಿಕ್ಕಿನಲ್ಲಿದ್ದ ಪುರಾತನ ಶಿವ ದೇವಾಲಯ ‘ನವರತ್ನ ಕುಬೇರ ತಿಲ’ವನ್ನು ನವೀಕರಿಸಲಾಗಿದ್ದು, ಜಟಾಯು ಮೂರ್ತಿಯನ್ನು ಸ್ಥಾಪಿಸಲಾಗಿದೆ.

  • ದೇವಾಲಯದಲ್ಲಿ ಮಣ್ಣಿನ ತೇವಾಂಶ ತಪ್ಪಿಸಲು 21 ಅಡಿ ಗ್ರಾನೈಟ್‌ ಅಡಿಪಾಯ ನಿರ್ಮಿಸಲಾಗಿದೆ.

  • ಭಕ್ತಾದಿಗಳಿಗಾಗಿ 25 ಸಾವಿರ ಜನರ ಸಾಮರ್ಥ್ಯದ ಕಟ್ಟಡ ನಿರ್ಮಿಸಲಾಗಿದ್ದು, ಲಾಕರ್ಸ್‌, ವೈದ್ಯಕೀಯ ಸೌಲಭ್ಯ  ಸೇರಿದಂತೆ ವಿವಿಧ ಸೌಕರ್ಯಗಳನ್ನು ಕಲ್ಪಿಸಲಾಗಿದೆ.

  • ಭಾರತೀಯ ಸಂಪ್ರದಾಯವನ್ನು ಅನುಸರಿಸಿ ಮತ್ತು ಸ್ಥಳೀಯ ತಂತ್ರಜ್ಞಾನವನ್ನು ಬಳಸಿಕೊಂಡು ಪರಿಸರ ಸಂರಕ್ಷಣೆಯ ಮೇಲೆ ಕೇಂದ್ರೀಕರಿಸಿ ಒಟ್ಟು 70 ಎಕರೆ ಪ್ರದೇಶದಲ್ಲಿ ಈ ದೇವಾಲಯ ನಿರ್ಮಿಸಲಾಗಿದೆ.

  • ರಾಮಮಂದಿರ ಕಟ್ಟಡದ ನಿರ್ಮಾಣ ವೆಚ್ಚ ₹1400 ಕೋಟಿ – ₹1800 ಕೋಟಿ ಆಗಿದ್ದು, ರಾಮ ಜನ್ಮ ಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ ಸರಿಸುಮಾರು ₹60–70 ಲಕ್ಷದ ದೇಣಿಗೆಯನ್ನು ಪಡೆಯುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT