‘ಈ ದಂಪತಿಯ ವೈವಾಹಿಕ ಜೀವನ ಸಂತಸದಿಂದ ಕೂಡಿರಲಿಲ್ಲ. ಪದೇಪದೇ ಜಗಳಗಳಾಗುತ್ತಿದ್ದವು. ಘಟನೆ ನಡೆದ ರಾತ್ರಿ ದಂಪತಿ ಸಂಬಂಧಿಯೊಬ್ಬನ ಜತೆ ಜಗಳವಾಡಿದ್ದರು. ಉತ್ತರಾಖಂಡದಿಂದ ದೆಹಲಿಗೆ ಬರುವ ಮಾರ್ಗದುದ್ದಕ್ಕೂ ರೋಹಿತ್ ವಿಪರೀತ ಮದ್ಯ ಸೇವಿಸಿ ಸ್ಥಿಮಿತ ಕಳೆದುಕೊಂಡಿದ್ದರು. ಇಬ್ಬರ ನಡುವೆ ಜಗಳ ತಾರಕಕ್ಕೇರಿತು. ಈ ವೇಳೆ ಅಪೂರ್ವ ರೋಹಿತ್ ಮೇಲೆರಗಿ ಉಸಿರುಗಟ್ಟುವಂತೆ ಮಾಡಿದರು’ ಎಂದು ಅಪರಾಧ ವಿಭಾಗದ ಹೆಚ್ಚುವರಿ ಆಯುಕ್ತ ರಾಜೀವ್ ರಂಜನ್ ಸುದ್ದಿಗಾರರಿಗೆ ತಿಳಿಸಿದರು.