<p><strong>ಮುಂಬೈ:</strong> 2025ರ ಜನವರಿ ಮತ್ತು ಏಪ್ರಿಲ್ ನಡುವೆ ಮಹಾರಾಷ್ಟ್ರದಲ್ಲಿ ಕಾಡು ಪ್ರಾಣಿಗಳ ದಾಳಿಯಿಂದ 21 ಜನರು ಸಾವನ್ನಪ್ಪಿದ್ದಾರೆ. ಇದೇ ಅವಧಿಯಲ್ಲಿ ರಾಜ್ಯದ ಅರಣ್ಯ ಪ್ರದೇಶಗಳಲ್ಲಿ ವಿವಿಧ ಕಾರಣಗಳಿಂದ 22 ಹುಲಿಗಳು ಸಾವನ್ನಪ್ಪಿವೆ ಎಂದು ಸರ್ಕಾರ ಶುಕ್ರವಾರ ವಿಧಾನಸಭೆಗೆ ಮಾಹಿತಿ ನೀಡಿದೆ.</p>.ಮಹಾರಾಷ್ಟ್ರ | ವಿದ್ಯಾರ್ಥಿನಿ ಮೇಲೆ ಲೈಂಗಿಕ ದೌರ್ಜನ್ಯ: ತನಿಖೆಗೆ ಎಸ್ಐಟಿ.<p>ಜೊತೆಗೆ 2025 ರ ಜನವರಿ-ಏಪ್ರಿಲ್ ನಡುವೆ ಮಹಾರಾಷ್ಟ್ರದಲ್ಲಿ 40 ಚಿರತೆಗಳು ಸಾವನ್ನಪ್ಪಿವೆ. ಅವುಗಳಲ್ಲಿ ಮೂರು ಬೇಟೆಗೆ ಬಲಿಯಾಗಿದೆ ಎಂದು ರಾಜ್ಯ ಸರ್ಕಾರ ತಿಳಿಸಿದೆ. </p><p>ನೈಸರ್ಗಿಕ ಕಾರಣಗಳಿಂದ 13, ವಿದ್ಯುತ್ ಆವಘಡದಿಂದ 4, ರಸ್ತೆ ಮತ್ತು ರೈಲು ಅಪಘಾತಗಳಲ್ಲಿ ಮತ್ತು ತೆರೆದ ಬಾವಿಗಳಿಗೆ ಬಿದ್ದು 4 ಹುಲಿಗಳು ಮೃತಪಟ್ಟಿವೆ, ಇನ್ನೊಂದು ಹುಲಿಯ ಸಾವಿಗೆ ಕಾರಣ ಗೊತ್ತಾಗಿಲ್ಲ ಎಂದು ಅರಣ್ಯ ಸಚಿವ ಗಣೇಶ್ ನಾಯಕ್ ಲಿಖತ ಉತ್ತರದಲ್ಲಿ ಹೇಳಿದ್ದಾರೆ.</p>.ಮಹಾರಾಷ್ಟ್ರ | ಚಾಕೊಲೇಟ್ ಖರೀದಿಸಲು ಹಣ ಕೇಳಿದ್ದಕ್ಕೆ ಮಗಳನ್ನೇ ಕೊಂದ ತಂದೆ!.<p>20 ಚಿರತೆಗಳು ರಸ್ತೆ, ರೈಲು ಅಪಘಾತಗಳಲ್ಲಿ ಮತ್ತು ತೆರೆದ ಬಾವಿಗಳಿಗೆ ಬಿದ್ದು, 8 ನೈಸರ್ಗಿಕ ಕಾರಣಗಳಿಂದ ಸಾವನ್ನಪ್ಪಿವೆ. ಬೇಟೆಯಾಡಿ ಮೂರು ಚಿರತೆಗಳನ್ನು ಕೊಲ್ಲಲಾಗಿದೆ. 9 ಚಿರತೆಗಳ ಸಾವಿಗೆ ಕಾರಣ ಪತ್ತೆಯಾಗಿಲ್ಲ.</p><p>ಜನವರಿ 2022 ರಿಂದ ಡಿಸೆಂಬರ್ 2024 ರವರೆಗೆ, ರಾಜ್ಯದಲ್ಲಿ ವಿವಿಧ ಕಾರಣಗಳಿಂದ 107 ಹುಲಿಗಳು ಸಾವಿಗೀಡಾಗಿವೆ. ಅದೇ ಅವಧಿಯಲ್ಲಿ ಒಟ್ಟು 707 ಕಾಡು ಪ್ರಾಣಿಗಳು ಸಾವನ್ನಪ್ಪಿವೆ ಎಂದು ನಾಯಕ್ ಉತ್ತರದಲ್ಲಿ ತಿಳಿಸಿದ್ದಾರೆ.</p>.ಮಹಾರಾಷ್ಟ್ರದಲ್ಲಿ 2 ತಿಂಗಳಿನಲ್ಲಿ 479 ರೈತರ ಆತ್ಮಹತ್ಯೆ: ಸರ್ಕಾರ.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮುಂಬೈ:</strong> 2025ರ ಜನವರಿ ಮತ್ತು ಏಪ್ರಿಲ್ ನಡುವೆ ಮಹಾರಾಷ್ಟ್ರದಲ್ಲಿ ಕಾಡು ಪ್ರಾಣಿಗಳ ದಾಳಿಯಿಂದ 21 ಜನರು ಸಾವನ್ನಪ್ಪಿದ್ದಾರೆ. ಇದೇ ಅವಧಿಯಲ್ಲಿ ರಾಜ್ಯದ ಅರಣ್ಯ ಪ್ರದೇಶಗಳಲ್ಲಿ ವಿವಿಧ ಕಾರಣಗಳಿಂದ 22 ಹುಲಿಗಳು ಸಾವನ್ನಪ್ಪಿವೆ ಎಂದು ಸರ್ಕಾರ ಶುಕ್ರವಾರ ವಿಧಾನಸಭೆಗೆ ಮಾಹಿತಿ ನೀಡಿದೆ.</p>.ಮಹಾರಾಷ್ಟ್ರ | ವಿದ್ಯಾರ್ಥಿನಿ ಮೇಲೆ ಲೈಂಗಿಕ ದೌರ್ಜನ್ಯ: ತನಿಖೆಗೆ ಎಸ್ಐಟಿ.<p>ಜೊತೆಗೆ 2025 ರ ಜನವರಿ-ಏಪ್ರಿಲ್ ನಡುವೆ ಮಹಾರಾಷ್ಟ್ರದಲ್ಲಿ 40 ಚಿರತೆಗಳು ಸಾವನ್ನಪ್ಪಿವೆ. ಅವುಗಳಲ್ಲಿ ಮೂರು ಬೇಟೆಗೆ ಬಲಿಯಾಗಿದೆ ಎಂದು ರಾಜ್ಯ ಸರ್ಕಾರ ತಿಳಿಸಿದೆ. </p><p>ನೈಸರ್ಗಿಕ ಕಾರಣಗಳಿಂದ 13, ವಿದ್ಯುತ್ ಆವಘಡದಿಂದ 4, ರಸ್ತೆ ಮತ್ತು ರೈಲು ಅಪಘಾತಗಳಲ್ಲಿ ಮತ್ತು ತೆರೆದ ಬಾವಿಗಳಿಗೆ ಬಿದ್ದು 4 ಹುಲಿಗಳು ಮೃತಪಟ್ಟಿವೆ, ಇನ್ನೊಂದು ಹುಲಿಯ ಸಾವಿಗೆ ಕಾರಣ ಗೊತ್ತಾಗಿಲ್ಲ ಎಂದು ಅರಣ್ಯ ಸಚಿವ ಗಣೇಶ್ ನಾಯಕ್ ಲಿಖತ ಉತ್ತರದಲ್ಲಿ ಹೇಳಿದ್ದಾರೆ.</p>.ಮಹಾರಾಷ್ಟ್ರ | ಚಾಕೊಲೇಟ್ ಖರೀದಿಸಲು ಹಣ ಕೇಳಿದ್ದಕ್ಕೆ ಮಗಳನ್ನೇ ಕೊಂದ ತಂದೆ!.<p>20 ಚಿರತೆಗಳು ರಸ್ತೆ, ರೈಲು ಅಪಘಾತಗಳಲ್ಲಿ ಮತ್ತು ತೆರೆದ ಬಾವಿಗಳಿಗೆ ಬಿದ್ದು, 8 ನೈಸರ್ಗಿಕ ಕಾರಣಗಳಿಂದ ಸಾವನ್ನಪ್ಪಿವೆ. ಬೇಟೆಯಾಡಿ ಮೂರು ಚಿರತೆಗಳನ್ನು ಕೊಲ್ಲಲಾಗಿದೆ. 9 ಚಿರತೆಗಳ ಸಾವಿಗೆ ಕಾರಣ ಪತ್ತೆಯಾಗಿಲ್ಲ.</p><p>ಜನವರಿ 2022 ರಿಂದ ಡಿಸೆಂಬರ್ 2024 ರವರೆಗೆ, ರಾಜ್ಯದಲ್ಲಿ ವಿವಿಧ ಕಾರಣಗಳಿಂದ 107 ಹುಲಿಗಳು ಸಾವಿಗೀಡಾಗಿವೆ. ಅದೇ ಅವಧಿಯಲ್ಲಿ ಒಟ್ಟು 707 ಕಾಡು ಪ್ರಾಣಿಗಳು ಸಾವನ್ನಪ್ಪಿವೆ ಎಂದು ನಾಯಕ್ ಉತ್ತರದಲ್ಲಿ ತಿಳಿಸಿದ್ದಾರೆ.</p>.ಮಹಾರಾಷ್ಟ್ರದಲ್ಲಿ 2 ತಿಂಗಳಿನಲ್ಲಿ 479 ರೈತರ ಆತ್ಮಹತ್ಯೆ: ಸರ್ಕಾರ.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>