ಪಲ್ಕ್ ಖಾರಿಯಲ್ಲಿ ಮೀನು ಹಿಡಿಯಲು ದೋಣಿಯಲ್ಲಿ ತೆರಳಿದ್ದ ಮೀನುಗಾರನಿಗೆ ದೋಣಿ ನಿಲ್ಲಿಸುವಂತೆ ನೌಕಾಪಡೆ ಸಿಬ್ಬಂದಿ ಸೂಚನೆ ನೀಡಿದರು. ಆದರೆ ಅವರು ದೋಣಿ ನಿಲ್ಲಿಸದಿದ್ದದ್ದನ್ನು ಕಂಡು ಅದು ಶ್ರೀಲಂಕಾ ಮೀನುಗಾರರ ದೋಣಿ ಇರಬಹುದು ಎಂದು ಭಾವಿಸಿ ದೋಣಿ ಕಡೆಗೆ ಗುಂಡು ಹಾರಿಸಿದರು. ಗುಂಡೇಟು ತಿಂದ ಮೀನುಗಾರ ಕಾವೇರಿ ಪ್ರಸ್ಥಭೂಮಿ ಪ್ರದೇಶದ ನಿವಾಸಿ ವೀರವಲ್ ಎಂದು ಬಳಿಕ ತಿಳಿದುಬಂದಿದೆ.