ಕೋವಿಡ್–19 ಸಂಕಷ್ಟ ಬಿಜೆಪಿ ಮೇಲೆ ಮತ್ತು ಮುಂಬರುವ ಚುನಾವಣೆಗಳ ಮೇಲೆ ಹೇಗೆ ಪರಿಣಾಮ ಬೀರಬಲ್ಲದು ಎಂಬುದನ್ನು ಆರ್ಎಸ್ಎಸ್ ಜೊತೆ ಬಿಜೆಪಿ ಚರ್ಚಿಸುತ್ತಿರುವ ಕುರಿತು ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ನನಗೆ ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಕುರಿತು ಬಹಳ ಗೌರವವಿದೆ. ಗಂಗಾ ನದಿಯಲ್ಲಿ ಸಾವಿರಾರು ಹೆಣಗಳು ತೇಲುತ್ತಿದ್ದ ಕುರಿತು ಅವರು ಪ್ರತಿಕ್ರಿಯೆ ನೀಡುತ್ತಾರೆ ಎಂದು ನಿರೀಕ್ಷಿಸಿದ್ದೆ. ಶವಗಳು ತೇಲಿ ಬಂದಿದ್ದು ರಾಮ ಮಂದಿರ ವಿಚಾರದಷ್ಟೇ ಪ್ರಮುಖ ವಿಷಯವಾಗಿದೆ ಎಂದರು.