ಭಾನುವಾರ ನಡೆದಿದ್ದ ದುರಂತಕ್ಕೆ ಹಲವು ಕಾರಣಗಳನ್ನು ಭದ್ರತಾ ಸಿಬ್ಬಂದಿ ಮತ್ತು ಸರ್ಕಾರ ನೀಡುತ್ತಿದೆ. ಅದರ ಜತೆಗೇ, ತೂಗುಸೇತುವೆಗೆ ಭೇಟಿ ನೀಡಿದ್ದ ಯುವಕರ ಗುಂಪೊಂದು, ಸೇತುವೆ ಮಧ್ಯದಲ್ಲಿ ನೃತ್ಯ ಮಾಡುತ್ತಾ, ಜೋರಾಗಿ ಸೇತುವೆಯನ್ನು ಅಲುಗಾಡಿಸಿ ತೊಂದರೆ ಉಂಟುಮಾಡಿದ್ದರು ಎಂದು ಪ್ರವಾಸಿಗರೊಬ್ಬರು ದೂರಿದ್ದಾರೆ.