<p><strong>ಚೆನ್ನೈ:</strong> ತೂತುಕುಡಿ ಬಂದರಿನಲ್ಲಿ ಹಡಗೊಂದರ (ಬಾರ್ಜ್) ಬ್ಯಾಲಸ್ಟ್ ಟ್ಯಾಂಕ್ ಸ್ವಚ್ಛಗೊಳಿಸುವಾಗ ಉಸಿರುಗಟ್ಟಿ ಮೂವರು ಕಾರ್ಮಿಕರು ಮೃತಪಟ್ಟಿದ್ದಾರೆ.</p><p>ಮೃತರನ್ನು ರಾಜಸ್ಥಾನ ಮೂಲದ ಸಂದೀಪ್ ಕುಮಾರ್ (25). ಸ್ಥಳೀಯರಾದ ಥಾಮಸ್ (35) ಹಾಗೂ ಸಿರೋನ್ ಜಾರ್ಜ್ (23) ಎಂದು ಗುರುತಿಸಲಾಗಿದೆ. </p><p>ಈ ಮೂವರು ಕಾರ್ಮಿಕರು ಹಡಗಿನ ಕೆಳಭಾಗದಲ್ಲಿರುವ ಬ್ಯಾಲಸ್ಟ್ ಟ್ಯಾಂಕ್ ಸ್ವಚ್ಛಗೊಳಿಸುತ್ತಿದ್ದರು. ಇಲ್ಲಿ ಸಂಗ್ರಹಗೊಂಡಿದ್ದ ವಿಷಕಾರಿ ಅನಿಲವನ್ನು ಉಸಿರಾಡಿದ ಪರಿಣಾಮ ಅವರು ಕುಸಿದು ಬಿದ್ದು ಸ್ಥಳದಲ್ಲೇ ಮೃತಪಟ್ಟರು ಎಂದು ಪೊಲೀಸರು ತಿಳಿಸಿದ್ದಾರೆ. </p><p>ಮುಕ್ತಾ ಇನ್ಫ್ರಾ ಕಂಪನಿಗೆ ಸೇರಿದ ಈ ಹಡಗನ್ನು ಶ್ರೀಲಂಕಾ ಹಾಗೂ ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಿಗೆ ಕಟ್ಟಡ ಸಾಮಗ್ರಿ ಸಾಗಿಸಲು ಬಂದರಿಗೆ ತಂದು ನಿಲ್ಲಿಸಲಾಗಿತ್ತು.</p><p>ಮೂವರು ಕಾರ್ಮಿಕರು ಯಾವುದೇ ಸುರಕ್ಷಾ ಕ್ರಮಗಳನ್ನು ತೆಗೆದುಕೊಳ್ಳದೇ ಟ್ಯಾಂಕ್ ಸ್ವಚ್ಛ ಮಾಡುತ್ತಿದ್ದರು. ಅವರಿಗೆ ಯಾವುದೇ ರಕ್ಷಣಾ ಸಾಧನಗಳನ್ನು ನೀಡಿರಲಿಲ್ಲ ಎಂದು ತನಿಖಾಧಿಕಾರಿಗಳು ದೃಢಪಡಿಸಿದ್ದಾರೆ.</p><p>ಹಡಗಿನ ಮಾಲೀಕರು, ಕ್ಯಾಪ್ಟನ್ ಅವರ ಮೇಲೆ ದೂರ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಚೆನ್ನೈ:</strong> ತೂತುಕುಡಿ ಬಂದರಿನಲ್ಲಿ ಹಡಗೊಂದರ (ಬಾರ್ಜ್) ಬ್ಯಾಲಸ್ಟ್ ಟ್ಯಾಂಕ್ ಸ್ವಚ್ಛಗೊಳಿಸುವಾಗ ಉಸಿರುಗಟ್ಟಿ ಮೂವರು ಕಾರ್ಮಿಕರು ಮೃತಪಟ್ಟಿದ್ದಾರೆ.</p><p>ಮೃತರನ್ನು ರಾಜಸ್ಥಾನ ಮೂಲದ ಸಂದೀಪ್ ಕುಮಾರ್ (25). ಸ್ಥಳೀಯರಾದ ಥಾಮಸ್ (35) ಹಾಗೂ ಸಿರೋನ್ ಜಾರ್ಜ್ (23) ಎಂದು ಗುರುತಿಸಲಾಗಿದೆ. </p><p>ಈ ಮೂವರು ಕಾರ್ಮಿಕರು ಹಡಗಿನ ಕೆಳಭಾಗದಲ್ಲಿರುವ ಬ್ಯಾಲಸ್ಟ್ ಟ್ಯಾಂಕ್ ಸ್ವಚ್ಛಗೊಳಿಸುತ್ತಿದ್ದರು. ಇಲ್ಲಿ ಸಂಗ್ರಹಗೊಂಡಿದ್ದ ವಿಷಕಾರಿ ಅನಿಲವನ್ನು ಉಸಿರಾಡಿದ ಪರಿಣಾಮ ಅವರು ಕುಸಿದು ಬಿದ್ದು ಸ್ಥಳದಲ್ಲೇ ಮೃತಪಟ್ಟರು ಎಂದು ಪೊಲೀಸರು ತಿಳಿಸಿದ್ದಾರೆ. </p><p>ಮುಕ್ತಾ ಇನ್ಫ್ರಾ ಕಂಪನಿಗೆ ಸೇರಿದ ಈ ಹಡಗನ್ನು ಶ್ರೀಲಂಕಾ ಹಾಗೂ ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಿಗೆ ಕಟ್ಟಡ ಸಾಮಗ್ರಿ ಸಾಗಿಸಲು ಬಂದರಿಗೆ ತಂದು ನಿಲ್ಲಿಸಲಾಗಿತ್ತು.</p><p>ಮೂವರು ಕಾರ್ಮಿಕರು ಯಾವುದೇ ಸುರಕ್ಷಾ ಕ್ರಮಗಳನ್ನು ತೆಗೆದುಕೊಳ್ಳದೇ ಟ್ಯಾಂಕ್ ಸ್ವಚ್ಛ ಮಾಡುತ್ತಿದ್ದರು. ಅವರಿಗೆ ಯಾವುದೇ ರಕ್ಷಣಾ ಸಾಧನಗಳನ್ನು ನೀಡಿರಲಿಲ್ಲ ಎಂದು ತನಿಖಾಧಿಕಾರಿಗಳು ದೃಢಪಡಿಸಿದ್ದಾರೆ.</p><p>ಹಡಗಿನ ಮಾಲೀಕರು, ಕ್ಯಾಪ್ಟನ್ ಅವರ ಮೇಲೆ ದೂರ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>