‘ಈ ಬಗ್ಗೆ ಆರೋಪಿಯ ಪತ್ನಿ ರೇಖಾ ಪೊಲೀಸರಿಗೆ ನೀಡಿರುವ ದೂರಿನ ಪ್ರಕಾರ, ಆರೋಪಿಯು ಶುಕ್ರವಾರ ಕೆಲಸಕ್ಕೆ ತೆರಳುವಾಗ ಪುತ್ರನನ್ನು ಜೊತೆಗೆ ಕರೆದೊಯ್ದಿದ್ದಾನೆ. ಬಳಿಕ ಪುತ್ರನನ್ನು ಕೊಂದು ಸ್ಥಳದಿಂದ ಪರಾರಿಯಾಗಿದ್ದಾನೆ. ಶನಿವಾರ ತನ್ನ ಪತ್ನಿಗೆ ಕರೆ ಮಾಡಿ, ಪುತ್ರನ ಮೃತದೇಹವನ್ನು ತಾನು ಕೆಲಸ ಮಾಡುತ್ತಿದ್ದ ಚೌಕಿಯಲ್ಲಿಯೇ ಬಿಸಾಡಿರುವುದಾಗಿ ತಿಳಿಸಿದ್ದಾನೆ’ ಎಂದು ನವಸಾರಿ ಎಸ್ಪಿ ಸುಶೀಲ್ ಅಗರ್ವಾಲ್ ತಿಳಿಸಿದ್ದಾರೆ.