‘ವಿರೋಧ ಪಕ್ಷಗಳ ಕೆಲ ನಾಯಕರು, ಸರ್ಕಾರದ ನಿಲುವುಗಳನ್ನು ಪ್ರಶ್ನಿಸಿದ್ದ ಪತ್ರಕರ್ತರು ಹಾಗೂ ನಾಗರಿಕ ಸಂಘಗಳ ಸದಸ್ಯರ ಕುರಿತು ಬೇಹುಗಾರಿಕೆ ನಡೆಸಲು 2019–21ರ ಅವಧಿಯಲ್ಲಿ ಪೆಗಾಸಸ್ ಕುತಂತ್ರಾಂಶ ಬಳಸಲಾಗಿತ್ತು. ಈಗ, ಅಂಥದೇ ಪ್ರಯತ್ನಗಳು ನಡೆಯುತ್ತಿವೆ ಎಂಬುದು ತಿಳಿದು ಮತ್ತಷ್ಟು ಆಘಾತವಾಗಿದೆ‘ ಎಂದು ವಿವರಿಸಿದ್ದಾರೆ.