<p><strong>ಗಾಜೀಪುರ/ ಲಖನೌ:</strong> ಚಿನ್ಹಟ್ನಲ್ಲಿರುವ ಇಂಡಿಯನ್ ಓವರ್ಸೀಸ್ ಬ್ಯಾಂಕ್ನ ಬ್ರಾಂಚ್ನಲ್ಲಿ ದರೋಡೆ ನಡೆಸಿದ ಪ್ರಕರಣದ ಇಬ್ಬರು ಆರೋಪಿಗಳನ್ನು ಪ್ರತ್ಯೇಕ ಎನ್ಕೌಂಟರ್ಗಳಲ್ಲಿ ಹತ್ಯೆ ಮಾಡಲಾಗಿದೆ ಎಂದು ಅಧಿಕಾರಿಗಳು ಮಂಗಳವಾರ ತಿಳಿಸಿದರು.</p><p>ಕಿಸಾನ್ ಪಥದ ಸಮೀಪ ಲಖನೌ ಪೊಲೀಸರು ನಡೆಸಿದ ಎನ್ಕೌಂಟರ್ನಲ್ಲಿ ಸೋಬಿಂದ್ ಕುಮಾರ್ನನ್ನು (26) ಹತ್ಯೆ ಮಾಡಲಾಗಿದೆ ಮತ್ತು ಗಾಜೀಪುರ ಪೊಲೀಸರ ಗುಂಡಿನ ದಾಳಿಗೆ ಸನ್ನಿ ದಯಾಳ್ (28) ಬಲಿಯಾಗಿದ್ದಾನೆ ಎಂದು ಹೇಳಿದರು.</p><p>ಖಚಿತ ಮಾಹಿತಿ ಮೇರೆಗೆ ಚಿನಹಟ್ ಪ್ರದೇಶದಲ್ಲಿ ಎರಡು ವಾಹನಗಳನ್ನು ಪೊಲೀಸರು ಪರಿಶೀಲಿಸಿದರು. ಈ ಸಂದರ್ಭದಲ್ಲಿ ದರೋಡೆ ಪ್ರಕರಣದಲ್ಲಿ ಬೇಕಾಗಿದ್ದ ಶಂಕಿತ ಆರೋಪಿ ಸೋಬಿಂದ್ ಕುಮಾರ್, ಪೊಲೀಸರ ಮೇಲೆ ಗುಂಡಿನ ದಾಳಿ ನಡೆಸಿದ. ಪೊಲೀಸರು ಪ್ರತಿದಾಳಿ ನಡೆಸಿದರು. ಗಾಯಗೊಂಡಿದ್ದ ಕುಮಾರ್ ಬಳಿಕ ಮೃತಪಟ್ಟಿದ್ದಾನೆ ಎಂದು ಸಹಾಯಕ ಪೊಲೀಸ್ ಆಯುಕ್ತ ರಾಧಾ ರಮಣ್ ಸಿಂಗ್ ತಿಳಿಸಿದರು.</p><p>‘ದಯಾಳ್ನನ್ನು ಹುಡುಕಿಕೊಟ್ಟವರರಿಗೆ ₹25,000 ಬಹುಮಾನ ಘೋಷಿಸಲಾಗಿತ್ತು ಎಂದು ಉತ್ತರ ಪ್ರದೇಶ ಡಿಜಿಪಿ ಪ್ರಶಾಂತ್ ಕುಮಾರ್ ತಿಳಿಸಿದರು.</p><p>‘ಬಾರಾ ಪೊಲೀಸ್ ಹೊರಠಾಣೆ ಸಮೀಪ ಬೈಕ್ವೊಂದರ ತಪಾಸಣೆಗಾಗಿ ಪ್ರಯತ್ನಿಸಿದಾಗ ಶಂಕಿತರು ಬಿಹಾರ ಗಡಿಯತ್ತ ಪಲಾಯನಕ್ಕೆ ಯತ್ನಿಸಿದರು. ನಂತರ ಪೊಲೀಸರ ಮೇಲೆ ಗುಂಡಿನ ದಾಳಿ ನಡೆಸಿದರು. ಪೊಲೀಸರು ನಡೆಸಿದ ಪ್ರತಿದಾಳಿಯಲ್ಲಿ ಸನ್ನಿ ದಯಾಳ್ ಮೃತಪಟ್ಟಿದ್ದಾನೆ. ಎರಡನೇ ಆರೋಪಿಯು ಪರಾರಿಯಾಗಿದ್ದಾನೆ’ ಎಂದು ಅವರು ಹೇಳಿದರು.</p><p>ಘಟನಾ ಸ್ಥಳದಿಂದ ಪಿಸ್ತೂಲ್, ₹35,000 ನಗದು ಮತ್ತಿತರ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಗಾಜೀಪುರ/ ಲಖನೌ:</strong> ಚಿನ್ಹಟ್ನಲ್ಲಿರುವ ಇಂಡಿಯನ್ ಓವರ್ಸೀಸ್ ಬ್ಯಾಂಕ್ನ ಬ್ರಾಂಚ್ನಲ್ಲಿ ದರೋಡೆ ನಡೆಸಿದ ಪ್ರಕರಣದ ಇಬ್ಬರು ಆರೋಪಿಗಳನ್ನು ಪ್ರತ್ಯೇಕ ಎನ್ಕೌಂಟರ್ಗಳಲ್ಲಿ ಹತ್ಯೆ ಮಾಡಲಾಗಿದೆ ಎಂದು ಅಧಿಕಾರಿಗಳು ಮಂಗಳವಾರ ತಿಳಿಸಿದರು.</p><p>ಕಿಸಾನ್ ಪಥದ ಸಮೀಪ ಲಖನೌ ಪೊಲೀಸರು ನಡೆಸಿದ ಎನ್ಕೌಂಟರ್ನಲ್ಲಿ ಸೋಬಿಂದ್ ಕುಮಾರ್ನನ್ನು (26) ಹತ್ಯೆ ಮಾಡಲಾಗಿದೆ ಮತ್ತು ಗಾಜೀಪುರ ಪೊಲೀಸರ ಗುಂಡಿನ ದಾಳಿಗೆ ಸನ್ನಿ ದಯಾಳ್ (28) ಬಲಿಯಾಗಿದ್ದಾನೆ ಎಂದು ಹೇಳಿದರು.</p><p>ಖಚಿತ ಮಾಹಿತಿ ಮೇರೆಗೆ ಚಿನಹಟ್ ಪ್ರದೇಶದಲ್ಲಿ ಎರಡು ವಾಹನಗಳನ್ನು ಪೊಲೀಸರು ಪರಿಶೀಲಿಸಿದರು. ಈ ಸಂದರ್ಭದಲ್ಲಿ ದರೋಡೆ ಪ್ರಕರಣದಲ್ಲಿ ಬೇಕಾಗಿದ್ದ ಶಂಕಿತ ಆರೋಪಿ ಸೋಬಿಂದ್ ಕುಮಾರ್, ಪೊಲೀಸರ ಮೇಲೆ ಗುಂಡಿನ ದಾಳಿ ನಡೆಸಿದ. ಪೊಲೀಸರು ಪ್ರತಿದಾಳಿ ನಡೆಸಿದರು. ಗಾಯಗೊಂಡಿದ್ದ ಕುಮಾರ್ ಬಳಿಕ ಮೃತಪಟ್ಟಿದ್ದಾನೆ ಎಂದು ಸಹಾಯಕ ಪೊಲೀಸ್ ಆಯುಕ್ತ ರಾಧಾ ರಮಣ್ ಸಿಂಗ್ ತಿಳಿಸಿದರು.</p><p>‘ದಯಾಳ್ನನ್ನು ಹುಡುಕಿಕೊಟ್ಟವರರಿಗೆ ₹25,000 ಬಹುಮಾನ ಘೋಷಿಸಲಾಗಿತ್ತು ಎಂದು ಉತ್ತರ ಪ್ರದೇಶ ಡಿಜಿಪಿ ಪ್ರಶಾಂತ್ ಕುಮಾರ್ ತಿಳಿಸಿದರು.</p><p>‘ಬಾರಾ ಪೊಲೀಸ್ ಹೊರಠಾಣೆ ಸಮೀಪ ಬೈಕ್ವೊಂದರ ತಪಾಸಣೆಗಾಗಿ ಪ್ರಯತ್ನಿಸಿದಾಗ ಶಂಕಿತರು ಬಿಹಾರ ಗಡಿಯತ್ತ ಪಲಾಯನಕ್ಕೆ ಯತ್ನಿಸಿದರು. ನಂತರ ಪೊಲೀಸರ ಮೇಲೆ ಗುಂಡಿನ ದಾಳಿ ನಡೆಸಿದರು. ಪೊಲೀಸರು ನಡೆಸಿದ ಪ್ರತಿದಾಳಿಯಲ್ಲಿ ಸನ್ನಿ ದಯಾಳ್ ಮೃತಪಟ್ಟಿದ್ದಾನೆ. ಎರಡನೇ ಆರೋಪಿಯು ಪರಾರಿಯಾಗಿದ್ದಾನೆ’ ಎಂದು ಅವರು ಹೇಳಿದರು.</p><p>ಘಟನಾ ಸ್ಥಳದಿಂದ ಪಿಸ್ತೂಲ್, ₹35,000 ನಗದು ಮತ್ತಿತರ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>