<p><strong>ಮುಂಬೈ</strong>: ವಕ್ಫ್ ತಿದ್ದುಪಡಿ ಮಸೂದೆಗೆ ಉದ್ಧವ್ ಠಾಕ್ರೆ ನೇತ್ರತ್ವದ ಶಿವಸೇನಾ ವಿರೋಧ ವ್ಯಕ್ತಪಡಿಸಿರುವುದಕ್ಕೆ ಕಿಡಿಕಾರಿರುವ ಮಹಾರಾಷ್ಟ್ರ ಉಪಮುಖ್ಯಮಂತ್ರಿ ಏಕನಾಥ ಶಿಂದೆ, ರಾಹುಲ್ ಗಾಂಧಿ ಪ್ರಭಾವದಿಂದಾಗಿ ಬಾಳಾ ಸಾಹೇಬ್ ಸಿದ್ದಾಂತದಿಂದ ಉದ್ಥವ್ ಠಾಕ್ರೆ ದೂರ ಸರಿದಿದ್ದಾರೆ ಎಂದು ಹೇಳಿದ್ದಾರೆ.</p><p>ಮಸೂದೆ ವಿಚಾರವಾಗಿ ಶಿವಸೇನಾ(ಯುಬಿಟಿ) ನಿಲುವನ್ನು ಪ್ರಶ್ನಿಸಿ ಸುದ್ದಿಗಾರರೊಂದಿಗೆ ಮಾತನಾಡಿದ ಶಿಂದೆ, ಉದ್ಧವ್ ಠಾಕ್ರೆಯವರು ಬಾಳಾಸಾಹೇಬರ ಆದರ್ಶಗಳನ್ನು ಎತ್ತಿಹಿಡಿಯುತ್ತಾರೆಯೇ? ಅಥವಾ ರಾಹುಲ್ ಗಾಂಧಿಯವರ ಸೂಚನೆಗಳನ್ನು ಅನುಸರಿಸುತ್ತಾರೆಯೇ? ಎಂದು ಕೇಳಿದ್ದಾರೆ.</p><p>‘ವಕ್ಫ್ ಮಸೂದೆಯಿಂದ ಮತಬ್ಯಾಂಕ್ ರಾಜಕೀಯದಲ್ಲಿ ತೊಡಗಿರುವವರ ನಿಜವಾದ ಮುಖಗಳು ಬಹಿರಂಗಗೊಂಡಿವೆ’ ಎಂದು ಅವರು ಕಿಡಿಕಾರಿದ್ದಾರೆ.</p><p>‘ಮತಕ್ಕೋಸ್ಕರ ಅವಕಾಶವಾದಿ ರಾಜಕೀಯದಲ್ಲಿ ನಾವು ಎಂದಿಗೂ ತೊಡಗಿಕೊಂಡಿಲ್ಲ. ಹಿಂದೂ ಹೃದಯ ಸಾಮ್ರಾಟ್ ಬಾಳಾಸಾಹೇಬ್ ಠಾಕ್ರೆ ಮತ್ತು ಧರ್ಮವೀರ್ ಆನಂದ್ ದಿಘೆ ಅವರ ಸಿದ್ಧಾಂತಕ್ಕೆ ನಮ್ಮ ಬದ್ಧತೆ ದೃಢವಾಗಿದೆ. ಅಧಿಕಾರಕ್ಕಾಗಿ ನಾವು ನಮ್ಮ ತತ್ವಗಳನ್ನು ರಾಜಿ ಮಾಡಿಕೊಂಡಿಲ್ಲ’ ಎಂದಿದ್ದಾರೆ.</p><p>ಇದೇ ವೇಳೆ ವಕ್ಫ್ ತಿದ್ದುಪಡಿ ಮಸೂದೆ ಬೆಂಬಲಿಸಿ ಮಾತನಾಡಿದ ಅವರು, ಕೆಲವರ ನಿಯಂತ್ರಣದಲ್ಲಿದ್ದ ವಕ್ಫ್ ಮಂಡಳಿ ಆಸ್ತಿಯನ್ನು ಎಲ್ಲರ ಹಿತಕ್ಕಾಗಿ ಬಳಸುವ ಉದ್ದೇಶ ಈ ಮಸೂದೆ ಹೊಂದಿದೆ. ಹಿಂದುಳಿದ ಮುಸ್ಲಿಮರ ಅನುಕೂಲಕ್ಕೆ ಇದು ಸಹಾಯ ಮಾಡುತ್ತದೆ’ ಎಂದು ಹೇಳಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮುಂಬೈ</strong>: ವಕ್ಫ್ ತಿದ್ದುಪಡಿ ಮಸೂದೆಗೆ ಉದ್ಧವ್ ಠಾಕ್ರೆ ನೇತ್ರತ್ವದ ಶಿವಸೇನಾ ವಿರೋಧ ವ್ಯಕ್ತಪಡಿಸಿರುವುದಕ್ಕೆ ಕಿಡಿಕಾರಿರುವ ಮಹಾರಾಷ್ಟ್ರ ಉಪಮುಖ್ಯಮಂತ್ರಿ ಏಕನಾಥ ಶಿಂದೆ, ರಾಹುಲ್ ಗಾಂಧಿ ಪ್ರಭಾವದಿಂದಾಗಿ ಬಾಳಾ ಸಾಹೇಬ್ ಸಿದ್ದಾಂತದಿಂದ ಉದ್ಥವ್ ಠಾಕ್ರೆ ದೂರ ಸರಿದಿದ್ದಾರೆ ಎಂದು ಹೇಳಿದ್ದಾರೆ.</p><p>ಮಸೂದೆ ವಿಚಾರವಾಗಿ ಶಿವಸೇನಾ(ಯುಬಿಟಿ) ನಿಲುವನ್ನು ಪ್ರಶ್ನಿಸಿ ಸುದ್ದಿಗಾರರೊಂದಿಗೆ ಮಾತನಾಡಿದ ಶಿಂದೆ, ಉದ್ಧವ್ ಠಾಕ್ರೆಯವರು ಬಾಳಾಸಾಹೇಬರ ಆದರ್ಶಗಳನ್ನು ಎತ್ತಿಹಿಡಿಯುತ್ತಾರೆಯೇ? ಅಥವಾ ರಾಹುಲ್ ಗಾಂಧಿಯವರ ಸೂಚನೆಗಳನ್ನು ಅನುಸರಿಸುತ್ತಾರೆಯೇ? ಎಂದು ಕೇಳಿದ್ದಾರೆ.</p><p>‘ವಕ್ಫ್ ಮಸೂದೆಯಿಂದ ಮತಬ್ಯಾಂಕ್ ರಾಜಕೀಯದಲ್ಲಿ ತೊಡಗಿರುವವರ ನಿಜವಾದ ಮುಖಗಳು ಬಹಿರಂಗಗೊಂಡಿವೆ’ ಎಂದು ಅವರು ಕಿಡಿಕಾರಿದ್ದಾರೆ.</p><p>‘ಮತಕ್ಕೋಸ್ಕರ ಅವಕಾಶವಾದಿ ರಾಜಕೀಯದಲ್ಲಿ ನಾವು ಎಂದಿಗೂ ತೊಡಗಿಕೊಂಡಿಲ್ಲ. ಹಿಂದೂ ಹೃದಯ ಸಾಮ್ರಾಟ್ ಬಾಳಾಸಾಹೇಬ್ ಠಾಕ್ರೆ ಮತ್ತು ಧರ್ಮವೀರ್ ಆನಂದ್ ದಿಘೆ ಅವರ ಸಿದ್ಧಾಂತಕ್ಕೆ ನಮ್ಮ ಬದ್ಧತೆ ದೃಢವಾಗಿದೆ. ಅಧಿಕಾರಕ್ಕಾಗಿ ನಾವು ನಮ್ಮ ತತ್ವಗಳನ್ನು ರಾಜಿ ಮಾಡಿಕೊಂಡಿಲ್ಲ’ ಎಂದಿದ್ದಾರೆ.</p><p>ಇದೇ ವೇಳೆ ವಕ್ಫ್ ತಿದ್ದುಪಡಿ ಮಸೂದೆ ಬೆಂಬಲಿಸಿ ಮಾತನಾಡಿದ ಅವರು, ಕೆಲವರ ನಿಯಂತ್ರಣದಲ್ಲಿದ್ದ ವಕ್ಫ್ ಮಂಡಳಿ ಆಸ್ತಿಯನ್ನು ಎಲ್ಲರ ಹಿತಕ್ಕಾಗಿ ಬಳಸುವ ಉದ್ದೇಶ ಈ ಮಸೂದೆ ಹೊಂದಿದೆ. ಹಿಂದುಳಿದ ಮುಸ್ಲಿಮರ ಅನುಕೂಲಕ್ಕೆ ಇದು ಸಹಾಯ ಮಾಡುತ್ತದೆ’ ಎಂದು ಹೇಳಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>