ಮುಂಬೈ : ಶಿವಸೇನಾ ಅಧ್ಯಕ್ಷ ಉದ್ಧವ್ ಠಾಕ್ರೆ ಅವರ ಅಣ್ಣನ ಮಗನಿಹಾರ್ ಠಾಕ್ರೆ ಅವರು ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ ಶಿಂದೆ ಅವರನ್ನು ಶುಕ್ರವಾರ ಭೇಟಿ ಮಾಡಿ, ಬೆಂಬಲ ಸೂಚಿಸಿದರು.
ನಿಹಾರ್ ಠಾಕ್ರೆ, ಶಿವಸೇನಾ ಸ್ಥಾಪಕ ಬಾಳ್ ಠಾಕ್ರೆಯ ಅವರ ಹಿರಿಯ ಮಗ ಬಿಂದುಮಾಧವ್ ಠಾಕ್ರೆ ಅವರ ಮಗ.ಬಿಜೆಪಿ ನಾಯಕ ಮತ್ತು ಮಹಾರಾಷ್ಟ್ರದ ಮಾಜಿ ಸಚಿವ ಹರ್ಷವರ್ಧನ್ ಪಾಟೀಲ್ ಅವರ ಮಗಳೊಂದಿಗೆನಿಹಾರ್ ಅವರು ವಿವಾಹವಾಗಿದ್ದಾರೆ.
ಇಬ್ಬರ ಭೇಟಿಯ ಬಳಿಕ ಪತ್ರಿಕಾ ಹೇಳಿಕೆ ನೀಡಿರುವ ಮುಖ್ಯಮಂತ್ರಿ ಕಚೇರಿ, ‘ನಿಹಾರ್ ಅವರು ಹಲವು ವರ್ಷಗಳಿಂದ ರಾಜಕೀಯದಿಂದ ದೂರ ಉಳಿದಿದ್ದರು. ಆದರೆ, ಈಗ ಅವರು ಶಿಂದೆ ಅವರ ನಾಯಕತ್ವದಲ್ಲಿ ರಾಜಕೀಯ ಜೀವನ ಪ್ರಾರಂಭಿಸಲಿದ್ದಾರೆ’ ಎಂದಿದೆ.