ದೆಹಲಿಯ ಈಶಾನ್ಯಭಾಗದಲ್ಲಿ 2020ರಲ್ಲಿ ನಡೆಸಲಾಗಿದ್ದಪೌರತ್ವ (ತಿದ್ದುಪಡಿ) ಕಾಯ್ದೆ (ಸಿಎಎ) ಮತ್ತು ರಾಷ್ಟ್ರೀಯ ನಾಗರಿಕರ ನೋಂದಣಿ (ಎನ್ಆರ್ಸಿ) ವಿರುದ್ಧದ ಪ್ರತಿಭಟನೆಯು ಹಿಂಸಾಚಾರಕ್ಕೆ ತಿರುಗಿತ್ತು. ಈ ಗಲಭೆಯಲ್ಲಿ 53 ಜನ ಮೃತರಾಗಿದ್ದು, 700ಕ್ಕೂ ಹೆಚ್ಚು ಜನ ಗಾಯಗೊಂಡಿದ್ದರು. ಈ ಗಲಭೆಗೆ ಮೂಲ ಕಾರಣಕರ್ತ ಉಮರ್ ಎಂಬ ಆರೋಪದಡಿ 2020ರ ಸೆಪ್ಟೆಂಬರ್ನಲ್ಲಿ ದೆಹಲಿ ಪೊಲೀಸರು ಉಮರ್ ಅವರನ್ನು ಬಂಧಿಸಿದ್ದರು.