<p><strong>ತಿರುವನಂತಪುರ:</strong> ದೇಶದಲ್ಲಿ ಸಂಘ ಪರಿವಾರದ ಸರ್ಕಾರವು (ಬಿಜೆಪಿ ನೇತೃತ್ವದ ಎನ್ಡಿಎ) ಸಂವಿಧಾನವನ್ನು ತೆಗೆದುಹಾಕಲು ಪ್ರಯತ್ನಿಸುತ್ತಿರುವುದರಿಂದ ಅಘೋಷಿತ ತುರ್ತು ಪರಿಸ್ಥಿತಿ ಎದುರಾಗಿದೆ ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ವಾಗ್ದಾಳಿ ನಡೆಸಿದ್ದಾರೆ. </p><p>1975ರಲ್ಲಿ ಇಂದಿರಾ ಗಾಂಧಿ ಸರ್ಕಾರ ಘೋಷಿಸಿದ್ದ ತುರ್ತು ಪರಿಸ್ಥಿತಿಯು ‘ಭಾರತದ ಪ್ರಜಾಪ್ರಭುತ್ವದ ಇತಿಹಾಸದಲ್ಲಿ ಅತ್ಯಂತ ಕರಾಳ ಅಧ್ಯಾಯವಾಗಿತ್ತು. ಈ ಕರಾಳ ಅಧ್ಯಾಯ ಅರ್ಧ ಶತಮಾನವನ್ನು ಪೂರೈಸಿದೆ ಎಂದು ಸಿಪಿಐ(ಎಂ) ಮುಖವಾಣಿ ‘ದೇಶಾಭಿಮಾನಿ’ಯಲ್ಲಿ ಪ್ರಕಟವಾದ ತುರ್ತು ಪರಿಸ್ಥಿತಿಯ ಕುರಿತಾದ ಲೇಖನದಲ್ಲಿ ಅವರು ಬೇಸರ ಹೊರಹಾಕಿದ್ದಾರೆ. </p><p>‘1975ರ ಜೂನ್ 25ರಂದು ಘೋಷಿಸಿದ ತುರ್ತು ಪರಿಸ್ಥಿತಿಯು ಹಠಾತ್ ಅಥವಾ ಅನಿರೀಕ್ಷಿತ ಘಟನೆ ಆಗಿರಲಿಲ್ಲ. ಬದಲಾಗಿ ಸರ್ವಾಧಿಕಾರಿ ಪ್ರವೃತ್ತಿ ಕ್ರೂರ ಪರಾಕಾಷ್ಠೆಯಾಗಿತ್ತು. ತುರ್ತು ಪರಿಸ್ಥಿತಿಯ 50ನೇ ವಾರ್ಷಿಕೋತ್ಸವವು ದೇಶದ ಪ್ರಸ್ತುತ ರಾಜಕೀಯ ಪರಿಸ್ಥಿತಿಯ ಭಯಾನಕತೆಯನ್ನು ನೆನಪಿಸುತ್ತದೆ’ ಎಂದು ವಿಜಯನ್ ಹೇಳಿದ್ದಾರೆ. </p><p>ದೇಶವು ಪ್ರಸ್ತುತ ಅಘೋಷಿತ ತುರ್ತು ಪರಿಸ್ಥಿತಿಯನ್ನು ಎದುರಿಸುತ್ತಿದೆ. ಇಂದಿರಾ ಗಾಂಧಿ ಸಂವಿಧಾನವನ್ನು ದುರುಪಯೋಗಪಡಿಸಿಕೊಂಡರೆ, ಇಂದು ಸಂಘ ಪರಿವಾರದ ಸರ್ಕಾರ ಸಂವಿಧಾನವನ್ನೇ ತೆಗೆದುಹಾಕಲು ಪ್ರಯತ್ನಿಸುತ್ತಿದೆ ಎಂದು ಸಿಪಿಐ ಅವರು ಆರೋಪಿಸಿದ್ದಾರೆ. </p><p>ತುರ್ತು ಪರಿಸ್ಥಿತಿಯನ್ನು ಅನುಭವಿಸಿದವರಿಗೆ ಕೇವಲ ಇತಿಹಾಸದ ಪಾಠವಲ್ಲ, ಬದಲಾಗಿ ಕರಾಳ ನೆನಪಾಗಿ ಉಳಿದಿದೆ. ತುರ್ತು ಪರಿಸ್ಥಿತಿ ಅವಧಿಯ ನೆನಪುಗಳನ್ನು ಭವಿಷ್ಯದ ಹೋರಾಟಗಳಿಗೆ ಸ್ಫೂರ್ತಿಯ ಮೂಲವಾಗಿ ತೆಗೆದುಕೊಳ್ಳಬೇಕು ಮತ್ತು ಮುಂದಿನ ಪೀಳಿಗೆಗೂ ಈ ಸಂದೇಶ ರವಾನಿಸಬೇಕು ಎಂದು ಅವರು ಒತ್ತಿ ಹೇಳಿದ್ದಾರೆ.</p><p>ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ವಿಜಯನ್ ಅವರನ್ನು ಕೇರಳದಲ್ಲಿ ಭೂಗತ ರಾಜಕೀಯ ಚಟುವಟಿಕೆಗಳನ್ನು ನಡೆಸಿದ್ದಕ್ಕಾಗಿ 18 ತಿಂಗಳು ಜೈಲಿನಲ್ಲಿರಿಸಲಾಗಿತ್ತು.</p>.ತುರ್ತು ಪರಿಸ್ಥಿತಿ: ಸಂವಿಧಾನ ಏನು ಹೇಳುತ್ತದೆ?.ತುರ್ತು ಪರಿಸ್ಥಿತಿ ಸವಾಲು ಗೆದ್ದ ಪ್ರಜಾಪ್ರಭುತ್ವ- ಬಸವರಾಜ ಬೊಮ್ಮಾಯಿ ಅವರ ಬರಹ.ತುರ್ತು ಪರಿಸ್ಥಿತಿ @50 | ನಿರಂಕುಶ ಪ್ರಭುತ್ವದ ನೆನಪು.ತುರ್ತು ಪರಿಸ್ಥಿತಿ: ವಿಶೇಷ ಅಧಿವೇಶನ?.'The Emergency Diaries' ಪುಸ್ತಕದಲ್ಲಿ ತುರ್ತು ಪರಿಸ್ಥಿತಿಯ ಅನುಭವ ಹಂಚಿದ ಮೋದಿ.Emergency @50 | ಪ್ರಜಾಪ್ರಭುತ್ವ ಇತಿಹಾಸದ ಅತ್ಯಂತ ಕರಾಳ ಅಧ್ಯಾಯ: ಪ್ರಧಾನಿ ಮೋದಿ.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ತಿರುವನಂತಪುರ:</strong> ದೇಶದಲ್ಲಿ ಸಂಘ ಪರಿವಾರದ ಸರ್ಕಾರವು (ಬಿಜೆಪಿ ನೇತೃತ್ವದ ಎನ್ಡಿಎ) ಸಂವಿಧಾನವನ್ನು ತೆಗೆದುಹಾಕಲು ಪ್ರಯತ್ನಿಸುತ್ತಿರುವುದರಿಂದ ಅಘೋಷಿತ ತುರ್ತು ಪರಿಸ್ಥಿತಿ ಎದುರಾಗಿದೆ ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ವಾಗ್ದಾಳಿ ನಡೆಸಿದ್ದಾರೆ. </p><p>1975ರಲ್ಲಿ ಇಂದಿರಾ ಗಾಂಧಿ ಸರ್ಕಾರ ಘೋಷಿಸಿದ್ದ ತುರ್ತು ಪರಿಸ್ಥಿತಿಯು ‘ಭಾರತದ ಪ್ರಜಾಪ್ರಭುತ್ವದ ಇತಿಹಾಸದಲ್ಲಿ ಅತ್ಯಂತ ಕರಾಳ ಅಧ್ಯಾಯವಾಗಿತ್ತು. ಈ ಕರಾಳ ಅಧ್ಯಾಯ ಅರ್ಧ ಶತಮಾನವನ್ನು ಪೂರೈಸಿದೆ ಎಂದು ಸಿಪಿಐ(ಎಂ) ಮುಖವಾಣಿ ‘ದೇಶಾಭಿಮಾನಿ’ಯಲ್ಲಿ ಪ್ರಕಟವಾದ ತುರ್ತು ಪರಿಸ್ಥಿತಿಯ ಕುರಿತಾದ ಲೇಖನದಲ್ಲಿ ಅವರು ಬೇಸರ ಹೊರಹಾಕಿದ್ದಾರೆ. </p><p>‘1975ರ ಜೂನ್ 25ರಂದು ಘೋಷಿಸಿದ ತುರ್ತು ಪರಿಸ್ಥಿತಿಯು ಹಠಾತ್ ಅಥವಾ ಅನಿರೀಕ್ಷಿತ ಘಟನೆ ಆಗಿರಲಿಲ್ಲ. ಬದಲಾಗಿ ಸರ್ವಾಧಿಕಾರಿ ಪ್ರವೃತ್ತಿ ಕ್ರೂರ ಪರಾಕಾಷ್ಠೆಯಾಗಿತ್ತು. ತುರ್ತು ಪರಿಸ್ಥಿತಿಯ 50ನೇ ವಾರ್ಷಿಕೋತ್ಸವವು ದೇಶದ ಪ್ರಸ್ತುತ ರಾಜಕೀಯ ಪರಿಸ್ಥಿತಿಯ ಭಯಾನಕತೆಯನ್ನು ನೆನಪಿಸುತ್ತದೆ’ ಎಂದು ವಿಜಯನ್ ಹೇಳಿದ್ದಾರೆ. </p><p>ದೇಶವು ಪ್ರಸ್ತುತ ಅಘೋಷಿತ ತುರ್ತು ಪರಿಸ್ಥಿತಿಯನ್ನು ಎದುರಿಸುತ್ತಿದೆ. ಇಂದಿರಾ ಗಾಂಧಿ ಸಂವಿಧಾನವನ್ನು ದುರುಪಯೋಗಪಡಿಸಿಕೊಂಡರೆ, ಇಂದು ಸಂಘ ಪರಿವಾರದ ಸರ್ಕಾರ ಸಂವಿಧಾನವನ್ನೇ ತೆಗೆದುಹಾಕಲು ಪ್ರಯತ್ನಿಸುತ್ತಿದೆ ಎಂದು ಸಿಪಿಐ ಅವರು ಆರೋಪಿಸಿದ್ದಾರೆ. </p><p>ತುರ್ತು ಪರಿಸ್ಥಿತಿಯನ್ನು ಅನುಭವಿಸಿದವರಿಗೆ ಕೇವಲ ಇತಿಹಾಸದ ಪಾಠವಲ್ಲ, ಬದಲಾಗಿ ಕರಾಳ ನೆನಪಾಗಿ ಉಳಿದಿದೆ. ತುರ್ತು ಪರಿಸ್ಥಿತಿ ಅವಧಿಯ ನೆನಪುಗಳನ್ನು ಭವಿಷ್ಯದ ಹೋರಾಟಗಳಿಗೆ ಸ್ಫೂರ್ತಿಯ ಮೂಲವಾಗಿ ತೆಗೆದುಕೊಳ್ಳಬೇಕು ಮತ್ತು ಮುಂದಿನ ಪೀಳಿಗೆಗೂ ಈ ಸಂದೇಶ ರವಾನಿಸಬೇಕು ಎಂದು ಅವರು ಒತ್ತಿ ಹೇಳಿದ್ದಾರೆ.</p><p>ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ವಿಜಯನ್ ಅವರನ್ನು ಕೇರಳದಲ್ಲಿ ಭೂಗತ ರಾಜಕೀಯ ಚಟುವಟಿಕೆಗಳನ್ನು ನಡೆಸಿದ್ದಕ್ಕಾಗಿ 18 ತಿಂಗಳು ಜೈಲಿನಲ್ಲಿರಿಸಲಾಗಿತ್ತು.</p>.ತುರ್ತು ಪರಿಸ್ಥಿತಿ: ಸಂವಿಧಾನ ಏನು ಹೇಳುತ್ತದೆ?.ತುರ್ತು ಪರಿಸ್ಥಿತಿ ಸವಾಲು ಗೆದ್ದ ಪ್ರಜಾಪ್ರಭುತ್ವ- ಬಸವರಾಜ ಬೊಮ್ಮಾಯಿ ಅವರ ಬರಹ.ತುರ್ತು ಪರಿಸ್ಥಿತಿ @50 | ನಿರಂಕುಶ ಪ್ರಭುತ್ವದ ನೆನಪು.ತುರ್ತು ಪರಿಸ್ಥಿತಿ: ವಿಶೇಷ ಅಧಿವೇಶನ?.'The Emergency Diaries' ಪುಸ್ತಕದಲ್ಲಿ ತುರ್ತು ಪರಿಸ್ಥಿತಿಯ ಅನುಭವ ಹಂಚಿದ ಮೋದಿ.Emergency @50 | ಪ್ರಜಾಪ್ರಭುತ್ವ ಇತಿಹಾಸದ ಅತ್ಯಂತ ಕರಾಳ ಅಧ್ಯಾಯ: ಪ್ರಧಾನಿ ಮೋದಿ.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>