<p><strong>ಸಂಭಲ್, ಉತ್ತರಪ್ರದೇಶ</strong>: ಇಲ್ಲಿನ ಚಂದೌಸಿ ಪಟ್ಟಣದಲ್ಲಿ ತಲೆ ಎತ್ತಿರುವ 51 ಅಡಿ ಎತ್ತರದ ಶ್ರೀರಾಮನ ಪ್ರತಿಮೆ ನಿರ್ಮಾಣ ಅಂತಿಮ ಹಂತದಲ್ಲಿದ್ದು, ಮುಂದಿನ ತಿಂಗಳು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಉದ್ಘಾಟಿಸುವ ನಿರೀಕ್ಷೆಯಿದೆ.</p>.<p>ರಾಮ್ಲೀಲಾ ಮೈದಾನದಲ್ಲಿರುವ ರಾಮ್ ಬಾಗ್ ಧಾಮದಲ್ಲಿ ನಿರ್ಮಾಣಗೊಂಡಿರುವ ಪ್ರತಿಮೆಯ ಒಂದು ಕೈಯಲ್ಲಿ ಬಿಲ್ಲು ಇದ್ದರೆ, ಮತ್ತೊಂದು ಕೈಯಲ್ಲಿ ಭಕ್ತರನ್ನು ಆಶೀರ್ವದಿಸುವ ಸ್ಥಿತಿಯಲ್ಲಿದೆ. </p>.<p>‘2023ರ ಮೇ 31ರಂದು ಪ್ರತಿಮೆ ನಿರ್ಮಾಣ ಕಾರ್ಯ ಆರಂಭಗೊಂಡಿದ್ದು, ಅಂತಿಮ ಹಂತದಲ್ಲಿದೆ’ ಎಂದು ರಾಮ್ ಬಾಗ್ ಧಾಮ್ ಟ್ರಸ್ಟ್ನ ಅಧ್ಯಕ್ಷ ಅಶೋಕ್ ಕುಮಾರ್ ತಿಳಿಸಿದ್ದಾರೆ.</p>.<p class="title">‘ಪ್ರತಿಮೆ ನಿರ್ಮಾಣ ಬಹುತೇಕ ಪೂರ್ಣಗೊಂಡಿದೆ. ಬಣ್ಣ ಬಳಿಯುವ ಕಾರ್ಯ ಉಳಿದಿದ್ದು, ಫೆಬ್ರುವರಿ ವೇಳೆಗೆ ಸಿದ್ಧಗೊಳ್ಳಲಿದೆ’ ಎಂದರು.</p>.<p class="title">‘₹25 ಲಕ್ಷ ವೆಚ್ಚದಲ್ಲಿ ಪ್ರತಿಮೆ ನಿರ್ಮಾಣ ಮಾಡುತ್ತಿದ್ದು, ದೇವರಿಗೆ ನಮಿಸಲು ಪರಿಕ್ರಮ ಪಥ ನಿರ್ಮಿಸಲಾಗಿದೆ. ಅಶೋಕವನದ ಜೊತೆಗೆ ಹನುಮಂತ, ಗರುಡನ ಪ್ರತಿಮೆಯನ್ನು ನಿರ್ಮಿಸಲಾಗಿದೆ. ಗಾತ್ರದಲ್ಲಿ ದೇಶದಲ್ಲಿಯೇ ಅತೀ ಎತ್ತರದ್ದು’ ಎಂದು ಅಶೋಕ್ ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಸಂಭಲ್, ಉತ್ತರಪ್ರದೇಶ</strong>: ಇಲ್ಲಿನ ಚಂದೌಸಿ ಪಟ್ಟಣದಲ್ಲಿ ತಲೆ ಎತ್ತಿರುವ 51 ಅಡಿ ಎತ್ತರದ ಶ್ರೀರಾಮನ ಪ್ರತಿಮೆ ನಿರ್ಮಾಣ ಅಂತಿಮ ಹಂತದಲ್ಲಿದ್ದು, ಮುಂದಿನ ತಿಂಗಳು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಉದ್ಘಾಟಿಸುವ ನಿರೀಕ್ಷೆಯಿದೆ.</p>.<p>ರಾಮ್ಲೀಲಾ ಮೈದಾನದಲ್ಲಿರುವ ರಾಮ್ ಬಾಗ್ ಧಾಮದಲ್ಲಿ ನಿರ್ಮಾಣಗೊಂಡಿರುವ ಪ್ರತಿಮೆಯ ಒಂದು ಕೈಯಲ್ಲಿ ಬಿಲ್ಲು ಇದ್ದರೆ, ಮತ್ತೊಂದು ಕೈಯಲ್ಲಿ ಭಕ್ತರನ್ನು ಆಶೀರ್ವದಿಸುವ ಸ್ಥಿತಿಯಲ್ಲಿದೆ. </p>.<p>‘2023ರ ಮೇ 31ರಂದು ಪ್ರತಿಮೆ ನಿರ್ಮಾಣ ಕಾರ್ಯ ಆರಂಭಗೊಂಡಿದ್ದು, ಅಂತಿಮ ಹಂತದಲ್ಲಿದೆ’ ಎಂದು ರಾಮ್ ಬಾಗ್ ಧಾಮ್ ಟ್ರಸ್ಟ್ನ ಅಧ್ಯಕ್ಷ ಅಶೋಕ್ ಕುಮಾರ್ ತಿಳಿಸಿದ್ದಾರೆ.</p>.<p class="title">‘ಪ್ರತಿಮೆ ನಿರ್ಮಾಣ ಬಹುತೇಕ ಪೂರ್ಣಗೊಂಡಿದೆ. ಬಣ್ಣ ಬಳಿಯುವ ಕಾರ್ಯ ಉಳಿದಿದ್ದು, ಫೆಬ್ರುವರಿ ವೇಳೆಗೆ ಸಿದ್ಧಗೊಳ್ಳಲಿದೆ’ ಎಂದರು.</p>.<p class="title">‘₹25 ಲಕ್ಷ ವೆಚ್ಚದಲ್ಲಿ ಪ್ರತಿಮೆ ನಿರ್ಮಾಣ ಮಾಡುತ್ತಿದ್ದು, ದೇವರಿಗೆ ನಮಿಸಲು ಪರಿಕ್ರಮ ಪಥ ನಿರ್ಮಿಸಲಾಗಿದೆ. ಅಶೋಕವನದ ಜೊತೆಗೆ ಹನುಮಂತ, ಗರುಡನ ಪ್ರತಿಮೆಯನ್ನು ನಿರ್ಮಿಸಲಾಗಿದೆ. ಗಾತ್ರದಲ್ಲಿ ದೇಶದಲ್ಲಿಯೇ ಅತೀ ಎತ್ತರದ್ದು’ ಎಂದು ಅಶೋಕ್ ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>