<p><strong>ಡೆಹರಾಡೂನ್</strong>: ಉತ್ತರಾಖಂಡದ ಬಾಗೇಶ್ವರ್ ಜಿಲ್ಲೆಯ ಸುಧರ್ದುಂಗಾ ನದಿ ಕಣಿವೆ ವ್ಯಾಪ್ತಿಯ ಪರಿಸರ ಸೂಕ್ಷ್ಮ ವಲಯದ ಬೆಟ್ಟದ ಮೇಲೆ ಸ್ವಘೋಷಿತ ದೇವಮಾನವನೊಬ್ಬ ದೇವಸ್ಥಾನವನ್ನು ನಿರ್ಮಿಸಿರುವುದು ವಿವಾದದ ಸ್ವರೂಪ ಪಡೆದಿದೆ.</p><p>ಬಾಬಾ ಚೈತನ್ಯ ಆಕಾಶ್ ಅಲಿಯಾಸ್ ಆದಿತ್ಯ ಕೈಲಾಸ್ ಎನ್ನುವ ಸ್ವಘೋಷಿತ ದೇವಮಾನವ ದೇವಿ ಕುಂಡ ಸರೋವರದ ಬಳಿಯ ಬೆಟ್ಟದ ಮೇಲೆ ಕಟ್ಟಿಗೆ ಹಾಗೂ ಕಲ್ಲು ಬಳಸಿ ಪುಟ್ಟ ದೇವಸ್ಥಾನ ನಿರ್ಮಿಸಿದ್ದಾರೆ. ಅವರ ವಿರುದ್ಧ ಸ್ಥಳೀಯರು ಬಾಗೇಶ್ವರ್ ಜಿಲ್ಲಾಡಳಿತಕ್ಕೆ ದೂರು ನೀಡಿದ್ದಾರೆ.</p><p>ಜಿಲ್ಲಾಧಿಕಾರಿ ಅನುರಾಗ್ ಪಾಲ್ ಅವರು ದೂರಿನ ಬಗ್ಗೆ ತನಿಖೆ ನಡೆಸಲು ಎಸ್.ಪಿಗೆ ಸೂಚಿಸಿದ್ದಾರೆ.</p><p>‘ದೇವರಿಂದಲೇ ನನಗೆ ಸೂಚನೆ ಬಂದಿದ್ದು ಹಾಗಾಗಿ ನಾನು ದೇವಸ್ಥಾನ ನಿರ್ಮಿಸಿದ್ದೇನೆ. ಸ್ಥಳೀಯರು ನನಗೆ ಬೆಂಬಲ ನೀಡಬೇಕು’ ಎಂದು ಬಾಬಾ ಚೈತನ್ಯ ಸ್ಥಳೀಯರ ಬಳಿ ಕೇಳಿಕೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.</p>.<p>ದೇವಸ್ಥಾನ ನಿರ್ಮಿಸಿರುವ ಜಾಗ ಪರಿಸರ ಸೂಕ್ಷ್ಮ ವಲಯ ಅಷ್ಟೇ ಅಲ್ಲದೇ ಅಪಾಯಕಾರಿಯೂ ಆಗಿದ್ದು ಮುಂಗಾರು ಸಮಯದಲ್ಲಿ ಪ್ರವೇಶ ನಿಷೇಧಿಸಲಾಗಿರುತ್ತದೆ.</p><p>ದೇವಿ ಕುಂಡವನ್ನು ಸ್ಥಳೀಯರು ಪವಿತ್ರ ಸರೋವರ ಎಂದು ಪೂಜಿಸುವ ರೂಡಿಯಿದ್ದು, ಅದರ ಬಳಿ ಅನಧಿಕೃತವಾಗಿ ದೇವಸ್ಥಾನ ನಿರ್ಮಿಸಿರುವುದಲ್ಲದೇ ಬಾಬಾ ಚೈತನ್ಯ ಅವರು ದೇವಿ ಕುಂಡದಲ್ಲಿ ಸ್ನಾನ ಮಾಡಿ ಅಪವಿತ್ರಗೊಳಿಸಿದ್ದಾರೆ ಎಂದು ಸ್ಥಳೀಯರು ದೂರಿದ್ದಾರೆ.</p><p>‘ದೇವಸ್ಥಾನ ನಿರ್ಮಿಸಿರುವ ಜಾಗ ಅರಣ್ಯ ಇಲಾಖೆ ವ್ಯಾಪ್ತಿಗೆ ಬರುತ್ತದೆ. ಬಾಬಾ ಚೈತನ್ಯ ಎನ್ನುವರ ವಿರುದ್ಧ ಕ್ರಮ ಕೈಗೊಳ್ಳಲು ಸ್ಥಳೀಯರು ದೂರು ನೀಡಿದ್ದು ಪ್ರಕರಣವನ್ನು ಅರಣ್ಯ ಇಲಾಖೆಗೆ ವರ್ಗಾಯಿಸಲಾಗುವುದು’ ಎಂದು ಬಾಗೇಶ್ವರ್ ಎಸ್.ಪಿ ಪ್ರಹ್ಲಾದ್ ಕೊಂಡೆ ತಿಳಿಸಿದ್ದಾರೆ.</p><p>ನಿರ್ಮಿಸಿರುವ ದೇವಸ್ಥಾನದಲ್ಲಿ ಪೂಜಾ ಕೈಂಕರ್ಯಗಳನ್ನು ಕೈಗೊಳ್ಳಲು ಅನುಮತಿ ಕೊಡಿಸಬೇಕು ಎಂದು ಬಾಬಾ ಚೈತನ್ಯ ಕೆಲ ರಾಜಕಾರಣಿಗಳ ಹಿಂದೆ ಬಿಂದಿದ್ದಾರೆ ಎಂದು ಸ್ಥಳೀಯರು ಪೊಲೀಸರ ಬಳಿ ದೂರಿದ್ದಾರೆ.</p>.ದೇವಸ್ಥಾನ–ದೇವರುಗಳಷ್ಟೇ ಸದ್ಯ ತೆರಿಗೆಯಿಲ್ಲ!: ಆರ್.ಅಶೋಕ ವ್ಯಂಗ್ಯ.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಡೆಹರಾಡೂನ್</strong>: ಉತ್ತರಾಖಂಡದ ಬಾಗೇಶ್ವರ್ ಜಿಲ್ಲೆಯ ಸುಧರ್ದುಂಗಾ ನದಿ ಕಣಿವೆ ವ್ಯಾಪ್ತಿಯ ಪರಿಸರ ಸೂಕ್ಷ್ಮ ವಲಯದ ಬೆಟ್ಟದ ಮೇಲೆ ಸ್ವಘೋಷಿತ ದೇವಮಾನವನೊಬ್ಬ ದೇವಸ್ಥಾನವನ್ನು ನಿರ್ಮಿಸಿರುವುದು ವಿವಾದದ ಸ್ವರೂಪ ಪಡೆದಿದೆ.</p><p>ಬಾಬಾ ಚೈತನ್ಯ ಆಕಾಶ್ ಅಲಿಯಾಸ್ ಆದಿತ್ಯ ಕೈಲಾಸ್ ಎನ್ನುವ ಸ್ವಘೋಷಿತ ದೇವಮಾನವ ದೇವಿ ಕುಂಡ ಸರೋವರದ ಬಳಿಯ ಬೆಟ್ಟದ ಮೇಲೆ ಕಟ್ಟಿಗೆ ಹಾಗೂ ಕಲ್ಲು ಬಳಸಿ ಪುಟ್ಟ ದೇವಸ್ಥಾನ ನಿರ್ಮಿಸಿದ್ದಾರೆ. ಅವರ ವಿರುದ್ಧ ಸ್ಥಳೀಯರು ಬಾಗೇಶ್ವರ್ ಜಿಲ್ಲಾಡಳಿತಕ್ಕೆ ದೂರು ನೀಡಿದ್ದಾರೆ.</p><p>ಜಿಲ್ಲಾಧಿಕಾರಿ ಅನುರಾಗ್ ಪಾಲ್ ಅವರು ದೂರಿನ ಬಗ್ಗೆ ತನಿಖೆ ನಡೆಸಲು ಎಸ್.ಪಿಗೆ ಸೂಚಿಸಿದ್ದಾರೆ.</p><p>‘ದೇವರಿಂದಲೇ ನನಗೆ ಸೂಚನೆ ಬಂದಿದ್ದು ಹಾಗಾಗಿ ನಾನು ದೇವಸ್ಥಾನ ನಿರ್ಮಿಸಿದ್ದೇನೆ. ಸ್ಥಳೀಯರು ನನಗೆ ಬೆಂಬಲ ನೀಡಬೇಕು’ ಎಂದು ಬಾಬಾ ಚೈತನ್ಯ ಸ್ಥಳೀಯರ ಬಳಿ ಕೇಳಿಕೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.</p>.<p>ದೇವಸ್ಥಾನ ನಿರ್ಮಿಸಿರುವ ಜಾಗ ಪರಿಸರ ಸೂಕ್ಷ್ಮ ವಲಯ ಅಷ್ಟೇ ಅಲ್ಲದೇ ಅಪಾಯಕಾರಿಯೂ ಆಗಿದ್ದು ಮುಂಗಾರು ಸಮಯದಲ್ಲಿ ಪ್ರವೇಶ ನಿಷೇಧಿಸಲಾಗಿರುತ್ತದೆ.</p><p>ದೇವಿ ಕುಂಡವನ್ನು ಸ್ಥಳೀಯರು ಪವಿತ್ರ ಸರೋವರ ಎಂದು ಪೂಜಿಸುವ ರೂಡಿಯಿದ್ದು, ಅದರ ಬಳಿ ಅನಧಿಕೃತವಾಗಿ ದೇವಸ್ಥಾನ ನಿರ್ಮಿಸಿರುವುದಲ್ಲದೇ ಬಾಬಾ ಚೈತನ್ಯ ಅವರು ದೇವಿ ಕುಂಡದಲ್ಲಿ ಸ್ನಾನ ಮಾಡಿ ಅಪವಿತ್ರಗೊಳಿಸಿದ್ದಾರೆ ಎಂದು ಸ್ಥಳೀಯರು ದೂರಿದ್ದಾರೆ.</p><p>‘ದೇವಸ್ಥಾನ ನಿರ್ಮಿಸಿರುವ ಜಾಗ ಅರಣ್ಯ ಇಲಾಖೆ ವ್ಯಾಪ್ತಿಗೆ ಬರುತ್ತದೆ. ಬಾಬಾ ಚೈತನ್ಯ ಎನ್ನುವರ ವಿರುದ್ಧ ಕ್ರಮ ಕೈಗೊಳ್ಳಲು ಸ್ಥಳೀಯರು ದೂರು ನೀಡಿದ್ದು ಪ್ರಕರಣವನ್ನು ಅರಣ್ಯ ಇಲಾಖೆಗೆ ವರ್ಗಾಯಿಸಲಾಗುವುದು’ ಎಂದು ಬಾಗೇಶ್ವರ್ ಎಸ್.ಪಿ ಪ್ರಹ್ಲಾದ್ ಕೊಂಡೆ ತಿಳಿಸಿದ್ದಾರೆ.</p><p>ನಿರ್ಮಿಸಿರುವ ದೇವಸ್ಥಾನದಲ್ಲಿ ಪೂಜಾ ಕೈಂಕರ್ಯಗಳನ್ನು ಕೈಗೊಳ್ಳಲು ಅನುಮತಿ ಕೊಡಿಸಬೇಕು ಎಂದು ಬಾಬಾ ಚೈತನ್ಯ ಕೆಲ ರಾಜಕಾರಣಿಗಳ ಹಿಂದೆ ಬಿಂದಿದ್ದಾರೆ ಎಂದು ಸ್ಥಳೀಯರು ಪೊಲೀಸರ ಬಳಿ ದೂರಿದ್ದಾರೆ.</p>.ದೇವಸ್ಥಾನ–ದೇವರುಗಳಷ್ಟೇ ಸದ್ಯ ತೆರಿಗೆಯಿಲ್ಲ!: ಆರ್.ಅಶೋಕ ವ್ಯಂಗ್ಯ.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>