<p><strong>ನವದೆಹಲಿ:</strong> ‘ಸೇನೆಯಲ್ಲಿರುವ ಯೋಧರ ನೈತಿಕ ಸ್ಥೈರ್ಯ ಕಾಪಾಡಿಕೊಳ್ಳಬೇಕೆಂದರೆ, ಮಾಜಿ ಯೋಧರ ಪುನರ್ವಸತಿಯನ್ನು ರಕ್ಷಣಾ ಇಲಾಖೆ ನಿರ್ಲಕ್ಷಿಸಬಾರದು’ ಎಂದು ಸುಪ್ರೀಂ ಕೋರ್ಟ್ ಬುಧವಾರ ಹೇಳಿದೆ.</p><p>ಭಾರತೀಯ ಸೇನೆಯಲ್ಲಿ ಶುಶ್ರೂಷಕಿಯಾಗಿರುವ ಮಹಿಳೆಯ ನೇಮಕಕ್ಕೆ ಆದೇಶಿಸಿದ್ದ ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ಆದೇಶ ಪ್ರಶ್ನಿಸಿ ಮಾಜಿ ಯೋಧರೊಬ್ಬರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ಸಂದರ್ಭದಲ್ಲಿ ನ್ಯಾ. ಪಿ.ಎಸ್. ನರಸಿಂಹ ಮತ್ತು ನ್ಯಾ. ಮನೋಜ್ ಮಿಶ್ರಾ ಅವರಿದ್ದ ಪೀಠವು ಈ ಅಭಿಪ್ರಾಯಪಟ್ಟಿದೆ.</p><p>‘ಸಶಸ್ತ್ರ ಸೇನಾಪಡೆಯಿಂದ ನಿವೃತ್ತರಾದ ನಂತರ, ಅವರು ಸೇನೆ ಸೇರಬಯಸುವ ಯುವ ಸಮುದಾಯಕ್ಕೆ ಪ್ರೇರಣೆಯಾಗಲಿದ್ದಾರೆ. ನಾಗರಿಕ ಸಮಾಜದಲ್ಲಿ ಮಾಜಿ ಯೋಧರ ಯೋಗದಾನಕ್ಕೆ ಪ್ರಾಮುಖ್ಯತೆ ಇಲ್ಲವೆಂದು ಭಾವಿಸಬಹುದು. ಆದರೆ ಈ ದೇಶದ ಭದ್ರತೆಗೆ ಅಗತ್ಯವಿರುವ ಸೇನೆಗೆ ಯುವ ಸಮುದಾಯವನ್ನು ಪ್ರೇರೇಪಿಸುವ ಸಾಮರ್ಥ್ಯ ಇವರಲ್ಲಿರುತ್ತದೆ. ಆ ಮೂಲಕ ಆರೋಗ್ಯವಂತ ಸಮಾಜ ನಿರ್ಮಾಣ ಇವರಿಂದ ಸಾಧ್ಯ’ ಎಂದು ಪೀಠ ಹೇಳಿದೆ.</p><p>‘ಪಂಜಾಬ್ ರಾಜ್ಯದಿಂದ ಸೈನ್ಯದಲ್ಲಿರುವವರ ಒಟ್ಟು ಸಂಖ್ಯೆ 89 ಸಾವಿರವಿದೆ. ದೇಶದ ಜನಸಂಖ್ಯೆಯಲ್ಲಿ ಪಂಜಾಬ್ನದ್ದು ಶೇ 2.3ರಷ್ಟಿದೆ. ಆದರೆ ಸೇನೆಯಲ್ಲಿ ಈ ರಾಜ್ಯದವರ ಸಂಖ್ಯೆ ಶೇ 7.7ರಷ್ಟಿದೆ ಎಂಬುದನ್ನು ಗಮದಲ್ಲಿಟ್ಟುಕೊಳ್ಳಬೇಕು’ ಎಂದಿದೆ.</p><p>‘ಮಾಜಿ ಯೋಧರ ಪುನರ್ವಸತಿಯನ್ನು ಸಕಾಲಕ್ಕೆ ಕಲ್ಪಿಸುವುದರಿಂದ ಹಾಲಿ ಸೇನೆಯಲ್ಲಿರುವ ಯೋಧರ ಹಾಗೂ ಮುಂದೆ ಸೇರಬಯಸುವ ಆಕಾಂಕ್ಷಿಗಳ ಮನೋಬಲ ಹೆಚ್ಚಲಿದೆ. ಒಂದೊಮ್ಮೆ ನಿರ್ಲಕ್ಷಿಸಿದರೆ ಭವಿಷ್ಯದಲ್ಲಿ ಸೇನೆ ಸೇರಬಯಸುವ ಯುವಕರಿಗೆ ಪ್ರೇರಣೆ ಇಲ್ಲದಂತಾಗಲಿದೆ’ ಎಂದು ಸುಪ್ರೀಂ ಕೋರ್ಟ್ ಹೇಳಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ:</strong> ‘ಸೇನೆಯಲ್ಲಿರುವ ಯೋಧರ ನೈತಿಕ ಸ್ಥೈರ್ಯ ಕಾಪಾಡಿಕೊಳ್ಳಬೇಕೆಂದರೆ, ಮಾಜಿ ಯೋಧರ ಪುನರ್ವಸತಿಯನ್ನು ರಕ್ಷಣಾ ಇಲಾಖೆ ನಿರ್ಲಕ್ಷಿಸಬಾರದು’ ಎಂದು ಸುಪ್ರೀಂ ಕೋರ್ಟ್ ಬುಧವಾರ ಹೇಳಿದೆ.</p><p>ಭಾರತೀಯ ಸೇನೆಯಲ್ಲಿ ಶುಶ್ರೂಷಕಿಯಾಗಿರುವ ಮಹಿಳೆಯ ನೇಮಕಕ್ಕೆ ಆದೇಶಿಸಿದ್ದ ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ಆದೇಶ ಪ್ರಶ್ನಿಸಿ ಮಾಜಿ ಯೋಧರೊಬ್ಬರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ಸಂದರ್ಭದಲ್ಲಿ ನ್ಯಾ. ಪಿ.ಎಸ್. ನರಸಿಂಹ ಮತ್ತು ನ್ಯಾ. ಮನೋಜ್ ಮಿಶ್ರಾ ಅವರಿದ್ದ ಪೀಠವು ಈ ಅಭಿಪ್ರಾಯಪಟ್ಟಿದೆ.</p><p>‘ಸಶಸ್ತ್ರ ಸೇನಾಪಡೆಯಿಂದ ನಿವೃತ್ತರಾದ ನಂತರ, ಅವರು ಸೇನೆ ಸೇರಬಯಸುವ ಯುವ ಸಮುದಾಯಕ್ಕೆ ಪ್ರೇರಣೆಯಾಗಲಿದ್ದಾರೆ. ನಾಗರಿಕ ಸಮಾಜದಲ್ಲಿ ಮಾಜಿ ಯೋಧರ ಯೋಗದಾನಕ್ಕೆ ಪ್ರಾಮುಖ್ಯತೆ ಇಲ್ಲವೆಂದು ಭಾವಿಸಬಹುದು. ಆದರೆ ಈ ದೇಶದ ಭದ್ರತೆಗೆ ಅಗತ್ಯವಿರುವ ಸೇನೆಗೆ ಯುವ ಸಮುದಾಯವನ್ನು ಪ್ರೇರೇಪಿಸುವ ಸಾಮರ್ಥ್ಯ ಇವರಲ್ಲಿರುತ್ತದೆ. ಆ ಮೂಲಕ ಆರೋಗ್ಯವಂತ ಸಮಾಜ ನಿರ್ಮಾಣ ಇವರಿಂದ ಸಾಧ್ಯ’ ಎಂದು ಪೀಠ ಹೇಳಿದೆ.</p><p>‘ಪಂಜಾಬ್ ರಾಜ್ಯದಿಂದ ಸೈನ್ಯದಲ್ಲಿರುವವರ ಒಟ್ಟು ಸಂಖ್ಯೆ 89 ಸಾವಿರವಿದೆ. ದೇಶದ ಜನಸಂಖ್ಯೆಯಲ್ಲಿ ಪಂಜಾಬ್ನದ್ದು ಶೇ 2.3ರಷ್ಟಿದೆ. ಆದರೆ ಸೇನೆಯಲ್ಲಿ ಈ ರಾಜ್ಯದವರ ಸಂಖ್ಯೆ ಶೇ 7.7ರಷ್ಟಿದೆ ಎಂಬುದನ್ನು ಗಮದಲ್ಲಿಟ್ಟುಕೊಳ್ಳಬೇಕು’ ಎಂದಿದೆ.</p><p>‘ಮಾಜಿ ಯೋಧರ ಪುನರ್ವಸತಿಯನ್ನು ಸಕಾಲಕ್ಕೆ ಕಲ್ಪಿಸುವುದರಿಂದ ಹಾಲಿ ಸೇನೆಯಲ್ಲಿರುವ ಯೋಧರ ಹಾಗೂ ಮುಂದೆ ಸೇರಬಯಸುವ ಆಕಾಂಕ್ಷಿಗಳ ಮನೋಬಲ ಹೆಚ್ಚಲಿದೆ. ಒಂದೊಮ್ಮೆ ನಿರ್ಲಕ್ಷಿಸಿದರೆ ಭವಿಷ್ಯದಲ್ಲಿ ಸೇನೆ ಸೇರಬಯಸುವ ಯುವಕರಿಗೆ ಪ್ರೇರಣೆ ಇಲ್ಲದಂತಾಗಲಿದೆ’ ಎಂದು ಸುಪ್ರೀಂ ಕೋರ್ಟ್ ಹೇಳಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>