<p><strong>ನವದೆಹಲಿ:</strong> ‘ಮತದಾರರ ನೋಂದಣಾಧಿಕಾರಿಗಳಿಗೆ(ಇಆರ್ಒ) ಮತದಾರರೊಬ್ಬರ ಪೌರತ್ವ ನಿರ್ಧರಿಸುವ ಹಕ್ಕು ಇಲ್ಲ. ಹೀಗಾಗಿ, ಚುನಾವಣಾ ಆಯೋಗ ಕೈಗೊಂಡಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್ಐಆರ್) ಹಲವು ನ್ಯೂನತೆಗಳಿಂದ ಕೂಡಿದೆ’ ಎಂದು ಸುಪ್ರೀಂ ಕೋರ್ಟ್ಗೆ ಗುರುವಾರ ಮಾಹಿತಿ ನೀಡಲಾಗಿದೆ.</p>.<p>ಎಸ್ಐಆರ್ ಪ್ರಶ್ನಿಸಿರುವ ಅರ್ಜಿದಾರರೊಬ್ಬರ ವಾದ ಮಂಡಿಸಿದ ವಕೀಲ ಪ್ರಶಾಂತ್ ಭೂಷಣ್, ಈ ವಿಷಯ ತಿಳಿಸಿದ್ದಾರೆ.</p>.<p>‘ಎಸ್ಐಆರ್ ಪಾರದರ್ಶಕವಾಗಿ ನಡೆಯುತ್ತಿಲ್ಲ. ಪೌರತ್ವ ನಿರ್ಧರಿಸುವ ಅಧಿಕಾರ ವ್ಯಾಪ್ತಿಗೆ ಸಂಬಂಧಿಸಿ ಸ್ಪಷ್ಟತೆಯೂ ಇಲ್ಲ’ ಎಂದು ಮುಖ್ಯನ್ಯಾಯಮೂರ್ತಿ ಸೂರ್ಯ ಕಾಂತ್ ಹಾಗೂ ನ್ಯಾಯಮೂರ್ತಿ ಜಾಯ್ಮಾಲ್ಯ ಬಾಗ್ಚಿ ಅವರು ಇದ್ದ ಪೀಠಕ್ಕೆ ಅವರು ತಿಳಿಸಿದ್ದಾರೆ.</p>.<p>ಹಲವು ತೀರ್ಪುಗಳನ್ನು ಉಲ್ಲೇಖಿಸಿದ ಭೂಷಣ್,‘ಪೌರತ್ವ ನಿರ್ಧರಿಸುವುದು ಇಆರ್ಒ ಅವರ ಕೆಲಸವಲ್ಲ. ಒಬ್ಬ ವ್ಯಕ್ತಿಯ ಪೌರತ್ವ ಕುರಿತು ಶಂಕೆ ಇದ್ದಲ್ಲಿ, ಆ ವಿಚಾರವನ್ನು ಸಂಬಂಧಿಸಿದ ಪ್ರಾಧಿಕಾರಗಳಿಗೆ ಅವರು ಶಿಫಾರಸು ಮಾಡಬೇಕಷ್ಟೆ’ ಎಂದು ವಾದಿಸಿದರು.</p>.<p>ವಾದಗಳನ್ನು ಆಲಿಸಿದ ಪೀಠವು ವಿಚಾರಣೆಯನ್ನು ಡಿಸೆಂಬರ್ 9ಕ್ಕೆ ಮುಂದೂಡಿತು.</p>
<p><strong>ನವದೆಹಲಿ:</strong> ‘ಮತದಾರರ ನೋಂದಣಾಧಿಕಾರಿಗಳಿಗೆ(ಇಆರ್ಒ) ಮತದಾರರೊಬ್ಬರ ಪೌರತ್ವ ನಿರ್ಧರಿಸುವ ಹಕ್ಕು ಇಲ್ಲ. ಹೀಗಾಗಿ, ಚುನಾವಣಾ ಆಯೋಗ ಕೈಗೊಂಡಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್ಐಆರ್) ಹಲವು ನ್ಯೂನತೆಗಳಿಂದ ಕೂಡಿದೆ’ ಎಂದು ಸುಪ್ರೀಂ ಕೋರ್ಟ್ಗೆ ಗುರುವಾರ ಮಾಹಿತಿ ನೀಡಲಾಗಿದೆ.</p>.<p>ಎಸ್ಐಆರ್ ಪ್ರಶ್ನಿಸಿರುವ ಅರ್ಜಿದಾರರೊಬ್ಬರ ವಾದ ಮಂಡಿಸಿದ ವಕೀಲ ಪ್ರಶಾಂತ್ ಭೂಷಣ್, ಈ ವಿಷಯ ತಿಳಿಸಿದ್ದಾರೆ.</p>.<p>‘ಎಸ್ಐಆರ್ ಪಾರದರ್ಶಕವಾಗಿ ನಡೆಯುತ್ತಿಲ್ಲ. ಪೌರತ್ವ ನಿರ್ಧರಿಸುವ ಅಧಿಕಾರ ವ್ಯಾಪ್ತಿಗೆ ಸಂಬಂಧಿಸಿ ಸ್ಪಷ್ಟತೆಯೂ ಇಲ್ಲ’ ಎಂದು ಮುಖ್ಯನ್ಯಾಯಮೂರ್ತಿ ಸೂರ್ಯ ಕಾಂತ್ ಹಾಗೂ ನ್ಯಾಯಮೂರ್ತಿ ಜಾಯ್ಮಾಲ್ಯ ಬಾಗ್ಚಿ ಅವರು ಇದ್ದ ಪೀಠಕ್ಕೆ ಅವರು ತಿಳಿಸಿದ್ದಾರೆ.</p>.<p>ಹಲವು ತೀರ್ಪುಗಳನ್ನು ಉಲ್ಲೇಖಿಸಿದ ಭೂಷಣ್,‘ಪೌರತ್ವ ನಿರ್ಧರಿಸುವುದು ಇಆರ್ಒ ಅವರ ಕೆಲಸವಲ್ಲ. ಒಬ್ಬ ವ್ಯಕ್ತಿಯ ಪೌರತ್ವ ಕುರಿತು ಶಂಕೆ ಇದ್ದಲ್ಲಿ, ಆ ವಿಚಾರವನ್ನು ಸಂಬಂಧಿಸಿದ ಪ್ರಾಧಿಕಾರಗಳಿಗೆ ಅವರು ಶಿಫಾರಸು ಮಾಡಬೇಕಷ್ಟೆ’ ಎಂದು ವಾದಿಸಿದರು.</p>.<p>ವಾದಗಳನ್ನು ಆಲಿಸಿದ ಪೀಠವು ವಿಚಾರಣೆಯನ್ನು ಡಿಸೆಂಬರ್ 9ಕ್ಕೆ ಮುಂದೂಡಿತು.</p>