ಮುಂಬೈಗೆ ಆಘಾತ ನೀಡಿದ ಕೇರಳ
ವೇಗದ ಬೌಲರ್ ಕೆ.ಎಂ.ಆಸಿಫ್ ಅವರ ಐದು ವಿಕೆಟ್ ಗೊಂಚಲಿನ ನೆರವಿನಿಂದ ಕೇರಳ ತಂಡ ‘ಎ’ ಗುಂಪಿನ ಪಂದ್ಯದಲ್ಲಿ ಗುರುವಾರ ಹಾಲಿ ಚಾಂಪಿಯನ್ ಮುಂಬೈಗೆ 15 ರನ್ಗಳಿಂದ ಸೋಲುಣಿಸಿತು. ಇದು ಶಾರ್ದೂಲ್ ಠಾಕೂರ್ ಸಾರಥ್ಯದ ಮುಂಬೈಗೆ ಈ ಬಾರಿಯ ಟೂರ್ನಿಯಲ್ಲಿ ಮೊದಲ ಸೋಲು. ಸಂಕ್ಷಿಪ್ತ ಸ್ಕೋರು: ಕೇರಳ: 20 ಓವರುಗಳಲ್ಲಿ 5ಕ್ಕೆ 178 (ಸಂಜು ಸ್ಯಾಮ್ಸನ್ 46, ವಿಷ್ಣು ವಿನೋದ್ 43, ಶಾರ್ದೂಲ್ ಠಾಕೂರ್ 34ಕ್ಕೆ1, ಶಿವಂ ದುಬೆ 18ಕ್ಕೆ1); ಮುಂಬೈ: 19.4 ಓವರುಗಳಲ್ಲಿ 163 (ಸರ್ಫರಾಜ್ ಖಾನ್ 52, ಅಜಿಂಕ್ಯ ರಹಾನೆ 32, ಸೂರ್ಯಕುಮಾರ್ ಯಾದವ್ 32; ಕೆ.ಎಂ.ಆಸಿಫ್ 24ಕ್ಕೆ5, ವಿಘ್ನೇಶ್ ಪುತ್ತೂರ್ 31ಕ್ಕೆ2).