<p><strong>ಜೆರುಸಲೇಮ್:</strong> ಭಾರತದ ಆಟಗಾರರೇ ಇದ್ದ ಫೈನಲ್ನಲ್ಲಿ ಗ್ರ್ಯಾಂಡ್ಮಾಸ್ಟರ್ ಅರ್ಜುನ್ ಇರಿಗೇಶಿ ಅವರು ಸ್ವದೇಶದ ದಿಗ್ಗಜ ವಿಶ್ವನಾಥನ್ ಆನಂದ್ ಅವರನ್ನು ಸೋಲಿಸಿ ಜೆರುಸಲೇಂ ಮಾಸ್ಟರ್ಸ್ ಚೆಸ್ ಪ್ರಶಸ್ತಿ ಗೆದ್ದುಕೊಂಡರು.</p>.<p>ಇವರಿಬ್ಬರು ರ್ಯಾಪಿಡ್ ಸುತ್ತಿನ ಪಂದ್ಯಗಳನ್ನು ಡ್ರಾ ಮಾಡಿಕೊಂಡರು. ಬ್ಲಿಟ್ಝ್ ಸುತ್ತಿನಲ್ಲಿ ಅರ್ಜುನ್ ಬಿಳಿ ಕಾಯಿಗಳಲ್ಲಿ ಆಡಿದ ಮೊದಲ ಆಟ ಗೆದ್ದುಕೊಂಡರು. ನಂತರ 22 ವರ್ಷ ವಯಸ್ಸಿನ ತೆಲಂಗಾಣದ ಆಟಗಾರ ಎರಡನೆ ಆಟ ಡ್ರಾ ಮಾಡಿಕೊಂಡು ಒಟ್ಟು 2.5–1.5ರಿಂದ ಜಯಗಳಿಸಿದರು.</p>.<p>‘ಬುಧವಾರ ಆಡಿದ ಎರರೂ ಪಂದ್ಯಗಳು (ಪೀಟರ್ ಸ್ವಿಡ್ಲರ್ ಮತ್ತು ಆನಂದ್ ವಿರುದ್ಧ) ಕಠಿಣವಾಗಿದ್ದವು. ನಂತರ ಆನಂದ್ ಸರ್ ವಿರುದ್ಧ ರ್ಯಾಪಿಡ್ ಸುತ್ತಿನಲ್ಲಿ ಇಬ್ಬರಿಗೂ ಅವಕಾಶಗಳಿದ್ದವು. ಆದರೆ ಬ್ಲಿಟ್ಝ್ನಲ್ಲಿ ನಾನು ಚೆನ್ನಾಗಿ ಆಡಿದೆ’ ಎಂದು ಅರ್ಜುನ್ ಪ್ರತಿಕ್ರಿಯಿಸಿದರು.</p>.<p>ಅರ್ಜುನ್ ಪ್ರಶಸ್ತಿ ಜೊತೆ ₹49.50 ಲಕ್ಷ ನಗದು ಬಹುಮಾನ ಜೇಬಿಗಿಳಿಸಿದರು. ಆನಂದ್ ಅವರು ₹31.50 ಲಕ್ಷ ಬಹುಮಾನ ಗಳಿಸಿದರು.</p>.<p>ಅರ್ಜುನ್ ನಾಲ್ಕರ ಹಂತದ ಪಂದ್ಯದಲ್ಲಿ ರಷ್ಯದ ಪೀಟರ್ ಸ್ವಿಡ್ಲರ್ ಅವರನ್ನು ಮಣಿಸಿದರೆ, ಆನಂದ್ ಅವರು ಇನ್ನೊಂದು ಸೆಮಿಫೈನಲ್ನಲ್ಲಿ ವಿಶ್ವ ಬ್ಲಿಟ್ಝ್ ಚಾಂಪಿಯನ್ ರಷ್ಯಾದ ಇಯಾನ್ ನಿಪೊಮ್ನಿಷಿ ಅವರನ್ನು ಸೋಲಿಸಿದರು.</p>.<p>ಮೂರನೇ ಸ್ಥಾನಕ್ಕಾಗಿ ನಡೆದ ಪಂದ್ಯದಲ್ಲಿ ಸ್ವಿಡ್ಲರ್ 2.5–1.5 ರಿಂದ ಸ್ವದೇಶದ ನಿಪೊಮ್ನಿಷಿ ಅವರನ್ನು ಸೋಲಿಸಿದರು.</p>.<p>ಈ ಟೂರ್ನಿಯು 12 ಆಟಗಾರರನ್ನು ಒಳಗೊಂಡಿದ್ದು, ರೌಂಡ್ರಾಬಿನ್ ಮಾದರಿಯಲ್ಲಿ ನಡೆಯುತ್ತದೆ. ಮೊದಲ ನಾಲ್ಕು ಸ್ಥಾನ ಗಳಿಸಿದವರು ಸೆಮಿಫೈನಲ್ ತಲುಪುತ್ತಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಜೆರುಸಲೇಮ್:</strong> ಭಾರತದ ಆಟಗಾರರೇ ಇದ್ದ ಫೈನಲ್ನಲ್ಲಿ ಗ್ರ್ಯಾಂಡ್ಮಾಸ್ಟರ್ ಅರ್ಜುನ್ ಇರಿಗೇಶಿ ಅವರು ಸ್ವದೇಶದ ದಿಗ್ಗಜ ವಿಶ್ವನಾಥನ್ ಆನಂದ್ ಅವರನ್ನು ಸೋಲಿಸಿ ಜೆರುಸಲೇಂ ಮಾಸ್ಟರ್ಸ್ ಚೆಸ್ ಪ್ರಶಸ್ತಿ ಗೆದ್ದುಕೊಂಡರು.</p>.<p>ಇವರಿಬ್ಬರು ರ್ಯಾಪಿಡ್ ಸುತ್ತಿನ ಪಂದ್ಯಗಳನ್ನು ಡ್ರಾ ಮಾಡಿಕೊಂಡರು. ಬ್ಲಿಟ್ಝ್ ಸುತ್ತಿನಲ್ಲಿ ಅರ್ಜುನ್ ಬಿಳಿ ಕಾಯಿಗಳಲ್ಲಿ ಆಡಿದ ಮೊದಲ ಆಟ ಗೆದ್ದುಕೊಂಡರು. ನಂತರ 22 ವರ್ಷ ವಯಸ್ಸಿನ ತೆಲಂಗಾಣದ ಆಟಗಾರ ಎರಡನೆ ಆಟ ಡ್ರಾ ಮಾಡಿಕೊಂಡು ಒಟ್ಟು 2.5–1.5ರಿಂದ ಜಯಗಳಿಸಿದರು.</p>.<p>‘ಬುಧವಾರ ಆಡಿದ ಎರರೂ ಪಂದ್ಯಗಳು (ಪೀಟರ್ ಸ್ವಿಡ್ಲರ್ ಮತ್ತು ಆನಂದ್ ವಿರುದ್ಧ) ಕಠಿಣವಾಗಿದ್ದವು. ನಂತರ ಆನಂದ್ ಸರ್ ವಿರುದ್ಧ ರ್ಯಾಪಿಡ್ ಸುತ್ತಿನಲ್ಲಿ ಇಬ್ಬರಿಗೂ ಅವಕಾಶಗಳಿದ್ದವು. ಆದರೆ ಬ್ಲಿಟ್ಝ್ನಲ್ಲಿ ನಾನು ಚೆನ್ನಾಗಿ ಆಡಿದೆ’ ಎಂದು ಅರ್ಜುನ್ ಪ್ರತಿಕ್ರಿಯಿಸಿದರು.</p>.<p>ಅರ್ಜುನ್ ಪ್ರಶಸ್ತಿ ಜೊತೆ ₹49.50 ಲಕ್ಷ ನಗದು ಬಹುಮಾನ ಜೇಬಿಗಿಳಿಸಿದರು. ಆನಂದ್ ಅವರು ₹31.50 ಲಕ್ಷ ಬಹುಮಾನ ಗಳಿಸಿದರು.</p>.<p>ಅರ್ಜುನ್ ನಾಲ್ಕರ ಹಂತದ ಪಂದ್ಯದಲ್ಲಿ ರಷ್ಯದ ಪೀಟರ್ ಸ್ವಿಡ್ಲರ್ ಅವರನ್ನು ಮಣಿಸಿದರೆ, ಆನಂದ್ ಅವರು ಇನ್ನೊಂದು ಸೆಮಿಫೈನಲ್ನಲ್ಲಿ ವಿಶ್ವ ಬ್ಲಿಟ್ಝ್ ಚಾಂಪಿಯನ್ ರಷ್ಯಾದ ಇಯಾನ್ ನಿಪೊಮ್ನಿಷಿ ಅವರನ್ನು ಸೋಲಿಸಿದರು.</p>.<p>ಮೂರನೇ ಸ್ಥಾನಕ್ಕಾಗಿ ನಡೆದ ಪಂದ್ಯದಲ್ಲಿ ಸ್ವಿಡ್ಲರ್ 2.5–1.5 ರಿಂದ ಸ್ವದೇಶದ ನಿಪೊಮ್ನಿಷಿ ಅವರನ್ನು ಸೋಲಿಸಿದರು.</p>.<p>ಈ ಟೂರ್ನಿಯು 12 ಆಟಗಾರರನ್ನು ಒಳಗೊಂಡಿದ್ದು, ರೌಂಡ್ರಾಬಿನ್ ಮಾದರಿಯಲ್ಲಿ ನಡೆಯುತ್ತದೆ. ಮೊದಲ ನಾಲ್ಕು ಸ್ಥಾನ ಗಳಿಸಿದವರು ಸೆಮಿಫೈನಲ್ ತಲುಪುತ್ತಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>