<p><strong>ನವದೆಹಲಿ:</strong> ಸಂಸತ್ತಿನ ಅಂಗೀಕಾರ ಪಡೆದಿರುವ ವಕ್ಫ್ (ತಿದ್ದುಪಡಿ) ಕಾಯ್ದೆಯು ಸಾಂವಿಧಾನಿಕವಾಗಿ ಸರಿಯಾಗಿಯೇ ಇದೆ ಎಂದು ಭಾವಿಸಬೇಕಾಗುತ್ತದೆ ಎನ್ನುವ ಮಾತನ್ನು ಪುನರುಚ್ಚರಿಸಿರುವ ಸುಪ್ರೀಂ ಕೋರ್ಟ್, ಕಾಯ್ದೆಗೆ ಸಂಬಂಧಿಸಿದ ಮೂರು ಪ್ರಮುಖ ವಿಚಾರಗಳ ಕುರಿತ ಮಧ್ಯಂತರ ಆದೇಶವನ್ನು ಗುರುವಾರ ಕಾಯ್ದಿರಿಸಿದೆ.</p><p>ಕೋರ್ಟ್ಗಳು ವಕ್ಫ್ ಎಂದು ಘೋಷಿಸಿರುವ, ಬಳಕೆಯ ಕಾರಣದಿಂದಾಗಿ ವಕ್ಫ್ ಆಗಿರುವ ಮತ್ತು ಕ್ರಯಪತ್ರದ ಮೂಲಕ ವಕ್ಫ್ ಆಗಿರುವ ಆಸ್ತಿಗಳನ್ನು ಅಧಿಸೂಚನೆಯಿಂದ ಕೈಬಿಡುವ (ಡಿನೋಟಿಫೈ) ಅಧಿಕಾರವು ಈ ಮೂರು ವಿಚಾರಗಳ ಪೈಕಿ ಒಂದಾಗಿದೆ. ಡಿನೋಟಿಫೈ ಮಾಡುವ ಅಧಿಕಾರವನ್ನು ತಿದ್ದುಪಡಿ ಕಾಯ್ದೆಯಲ್ಲಿ ಉಲ್ಲೇಖಿಸಲಾಗಿದೆ.</p><p>ಸುಪ್ರೀಂ ಕೋರ್ಟ್ನ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಬಿ.ಆರ್. ಗವಾಯಿ ಮತ್ತು ನ್ಯಾಯಮೂರ್ತಿ ಆಗಸ್ಟೀನ್ ಜಾರ್ಜ್ ಮಸೀಹ್ ಅವರು ಇರುವ ಪೀಠವು ಮಧ್ಯಂತರ ಆದೇಶವನ್ನು ಕಾಯ್ದಿರಿಸುವುದಕ್ಕೂ ಮೊದಲು, ಅರ್ಜಿದಾರರು ಹಾಗೂ ಕೇಂದ್ರದ ಪರ ವಕೀಲರ ವಾದವನ್ನು ಸತತ ಮೂರು ದಿನ ಆಲಿಸಿದೆ.</p><p>ಸಂಸತ್ತು ರೂಪಿಸಿದ ಕಾನೂನು ಸಾಂವಿಧಾನಿಕವಾಗಿ ಸರಿಯಾಗಿರುತ್ತದೆ ಎಂದೇ ಭಾವಿಸಬೇಕಾಗುತ್ತದೆ ಎನ್ನುವ ಮಾತನ್ನು ಸಿಜೆಐ ಗವಾಯಿ ಅವರು ಗುರುವಾರ ಕೂಡ ಹೇಳಿದರು.</p><p>‘ಮಧ್ಯಂತರ ತಡೆ ಬೇಕು ಎಂದಾದರೆ ನೀವು ಬಲವಾದ ವಾದವನ್ನು ಮಂಡಿಸಬೇಕಾಗುತ್ತದೆ. ಇಲ್ಲದಿದ್ದರೆ, ಕಾಯ್ದೆಯು ಸಾಂವಿಧಾನಿಕವಾಗಿ ಸರಿಯಾಗಿ ಇದೆ ಎಂಬುದಾಗಿ ಭಾವಿಸಬೇಕಾಗುತ್ತದೆ’ ಎಂದು ಸಿಜೆಐ ಅವರು ಮೇ 20ರಂದು ಹೇಳಿದ್ದರು.</p><p>ವಕ್ಫ್ ಆಸ್ತಿಗಳ ಡಿನೋಟಿಫಿಕೇಷನ್ ಮಾತ್ರವೇ ಅಲ್ಲದೆ, ರಾಜ್ಯ ವಕ್ಫ್ ಮಂಡಳಿಗಳು ಹಾಗೂ ಕೇಂದ್ರ ವಕ್ಫ್ ಪರಿಷತ್ತಿನ ಸ್ವರೂಪದ ಬಗ್ಗೆಯೂ ಅರ್ಜಿದಾರರು ಆಕ್ಷೇಪ ಎತ್ತಿದ್ದಾರೆ. ಪದನಿಮಿತ್ತ ಸದಸ್ಯರನ್ನು ಹೊರತುಪಡಿಸಿದರೆ, ಮುಸ್ಲಿಮರು ಮಾತ್ರವೇ ಪರಿಷತ್ತು ಮತ್ತು ಮಂಡಳಿಗಳ ಸದಸ್ಯರಾಗಿರಬೇಕು ಎಂದು ಅರ್ಜಿದಾರರು ಕೋರಿದ್ದಾರೆ.</p><p>ಆಸ್ತಿಯೊಂದು ಸರ್ಕಾರಕ್ಕೆ ಸೇರಿರುವುದೇ ಎಂಬ ಬಗ್ಗೆ ಜಿಲ್ಲಾಧಿಕಾರಿಯು ವಿಚಾರಣೆ ನಡೆಸಿದಾಗ ಅಂತಹ ಆಸ್ತಿಯನ್ನು ವಕ್ಫ್ ಎಂದು ಪರಿಗಣಿಸಲಾಗುವುದಿಲ್ಲ ಎನ್ನುವ ಅಂಶದ ಬಗ್ಗೆಯೂ ಆಕ್ಷೇಪ ದಾಖಲಿಸಿದ್ದಾರೆ.</p><p>ಕೇಂದ್ರ ಸರ್ಕಾರದ ಪರವಾಗಿ ಗುರುವಾರ ವಾದ ಮಂಡಿಸಿದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ಇಸ್ಲಾಂ ಧರ್ಮವನ್ನು ಕನಿಷ್ಠ ಐದು ವರ್ಷಗಳಿಂದ ಪಾಲಿಸುತ್ತಿರುವ ವ್ಯಕ್ತಿ ಮಾತ್ರವೇ ವಕ್ಫ್ಗೆ ಆಸ್ತಿ ನೀಡಬಹುದು ಎಂದು ಕಾನೂನಿನಲ್ಲಿ ಹೇಳಿರುವುದನ್ನು ಸಮರ್ಥಿಸಿಕೊಂಡರು.</p><p>ವಕ್ಫ್ಗೆ ವಂಚನೆಯ ಮೂಲಕ ಆಸ್ತಿ ವರ್ಗಾಯಿಸುವುದನ್ನು ತಡೆಯುವ ಉದ್ದೇಶದಿಂದ ಈ ಅಂಶ ಸೇರಿಸಲಾಗಿದೆ ಎಂದು ಹೇಳಿದರು. ‘ಹಿಂದೂ ಒಬ್ಬ ದತ್ತಿ ಸಂಸ್ಥೆಯನ್ನು ಆರಂಭಿಸಬೇಕು ಎಂದಾದರೆ ಅದಕ್ಕೆ ಕಾನೂನಿನ ಅಡಿ ಮಾರ್ಗ ಇದೆ. ವಕ್ಫ್ ಏಕೆ ಬಳಕೆ ಮಾಡಿಕೊಳ್ಳಬೇಕು’ ಎಂದು ಅವರು ಪ್ರಶ್ನಿಸಿದರು. ಮುಸ್ಲಿಮೇತರರು ಟ್ರಸ್ಟ್ಗಳನ್ನು ಸೃಷ್ಟಿಸುವ ಮೂಲಕ ದತ್ತಿ ಕೆಲಸ ಮಾಡಬಹುದು ಎಂದರು.</p><p>‘ವಕ್ಫ್ ಆಸ್ತಿ ಸೃಷ್ಟಿಸುವುದಕ್ಕೂ ವಕ್ಫ್ಗೆ ಆಸ್ತಿ ದಾನ ಮಾಡುವುದಕ್ಕೂ ವ್ಯತ್ಯಾಸವಿದೆ. ಹಿಂದೂ ಧರ್ಮೀಯರು ವಕ್ಫ್ಗೆ ದಾನ ನೀಡಬಹುದು. ಆದರೆ ವಕ್ಫ್ ಆಸ್ತಿ ಸೃಷ್ಟಿಸುವ ಅವಕಾಶ ಇಲ್ಲ’ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ:</strong> ಸಂಸತ್ತಿನ ಅಂಗೀಕಾರ ಪಡೆದಿರುವ ವಕ್ಫ್ (ತಿದ್ದುಪಡಿ) ಕಾಯ್ದೆಯು ಸಾಂವಿಧಾನಿಕವಾಗಿ ಸರಿಯಾಗಿಯೇ ಇದೆ ಎಂದು ಭಾವಿಸಬೇಕಾಗುತ್ತದೆ ಎನ್ನುವ ಮಾತನ್ನು ಪುನರುಚ್ಚರಿಸಿರುವ ಸುಪ್ರೀಂ ಕೋರ್ಟ್, ಕಾಯ್ದೆಗೆ ಸಂಬಂಧಿಸಿದ ಮೂರು ಪ್ರಮುಖ ವಿಚಾರಗಳ ಕುರಿತ ಮಧ್ಯಂತರ ಆದೇಶವನ್ನು ಗುರುವಾರ ಕಾಯ್ದಿರಿಸಿದೆ.</p><p>ಕೋರ್ಟ್ಗಳು ವಕ್ಫ್ ಎಂದು ಘೋಷಿಸಿರುವ, ಬಳಕೆಯ ಕಾರಣದಿಂದಾಗಿ ವಕ್ಫ್ ಆಗಿರುವ ಮತ್ತು ಕ್ರಯಪತ್ರದ ಮೂಲಕ ವಕ್ಫ್ ಆಗಿರುವ ಆಸ್ತಿಗಳನ್ನು ಅಧಿಸೂಚನೆಯಿಂದ ಕೈಬಿಡುವ (ಡಿನೋಟಿಫೈ) ಅಧಿಕಾರವು ಈ ಮೂರು ವಿಚಾರಗಳ ಪೈಕಿ ಒಂದಾಗಿದೆ. ಡಿನೋಟಿಫೈ ಮಾಡುವ ಅಧಿಕಾರವನ್ನು ತಿದ್ದುಪಡಿ ಕಾಯ್ದೆಯಲ್ಲಿ ಉಲ್ಲೇಖಿಸಲಾಗಿದೆ.</p><p>ಸುಪ್ರೀಂ ಕೋರ್ಟ್ನ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಬಿ.ಆರ್. ಗವಾಯಿ ಮತ್ತು ನ್ಯಾಯಮೂರ್ತಿ ಆಗಸ್ಟೀನ್ ಜಾರ್ಜ್ ಮಸೀಹ್ ಅವರು ಇರುವ ಪೀಠವು ಮಧ್ಯಂತರ ಆದೇಶವನ್ನು ಕಾಯ್ದಿರಿಸುವುದಕ್ಕೂ ಮೊದಲು, ಅರ್ಜಿದಾರರು ಹಾಗೂ ಕೇಂದ್ರದ ಪರ ವಕೀಲರ ವಾದವನ್ನು ಸತತ ಮೂರು ದಿನ ಆಲಿಸಿದೆ.</p><p>ಸಂಸತ್ತು ರೂಪಿಸಿದ ಕಾನೂನು ಸಾಂವಿಧಾನಿಕವಾಗಿ ಸರಿಯಾಗಿರುತ್ತದೆ ಎಂದೇ ಭಾವಿಸಬೇಕಾಗುತ್ತದೆ ಎನ್ನುವ ಮಾತನ್ನು ಸಿಜೆಐ ಗವಾಯಿ ಅವರು ಗುರುವಾರ ಕೂಡ ಹೇಳಿದರು.</p><p>‘ಮಧ್ಯಂತರ ತಡೆ ಬೇಕು ಎಂದಾದರೆ ನೀವು ಬಲವಾದ ವಾದವನ್ನು ಮಂಡಿಸಬೇಕಾಗುತ್ತದೆ. ಇಲ್ಲದಿದ್ದರೆ, ಕಾಯ್ದೆಯು ಸಾಂವಿಧಾನಿಕವಾಗಿ ಸರಿಯಾಗಿ ಇದೆ ಎಂಬುದಾಗಿ ಭಾವಿಸಬೇಕಾಗುತ್ತದೆ’ ಎಂದು ಸಿಜೆಐ ಅವರು ಮೇ 20ರಂದು ಹೇಳಿದ್ದರು.</p><p>ವಕ್ಫ್ ಆಸ್ತಿಗಳ ಡಿನೋಟಿಫಿಕೇಷನ್ ಮಾತ್ರವೇ ಅಲ್ಲದೆ, ರಾಜ್ಯ ವಕ್ಫ್ ಮಂಡಳಿಗಳು ಹಾಗೂ ಕೇಂದ್ರ ವಕ್ಫ್ ಪರಿಷತ್ತಿನ ಸ್ವರೂಪದ ಬಗ್ಗೆಯೂ ಅರ್ಜಿದಾರರು ಆಕ್ಷೇಪ ಎತ್ತಿದ್ದಾರೆ. ಪದನಿಮಿತ್ತ ಸದಸ್ಯರನ್ನು ಹೊರತುಪಡಿಸಿದರೆ, ಮುಸ್ಲಿಮರು ಮಾತ್ರವೇ ಪರಿಷತ್ತು ಮತ್ತು ಮಂಡಳಿಗಳ ಸದಸ್ಯರಾಗಿರಬೇಕು ಎಂದು ಅರ್ಜಿದಾರರು ಕೋರಿದ್ದಾರೆ.</p><p>ಆಸ್ತಿಯೊಂದು ಸರ್ಕಾರಕ್ಕೆ ಸೇರಿರುವುದೇ ಎಂಬ ಬಗ್ಗೆ ಜಿಲ್ಲಾಧಿಕಾರಿಯು ವಿಚಾರಣೆ ನಡೆಸಿದಾಗ ಅಂತಹ ಆಸ್ತಿಯನ್ನು ವಕ್ಫ್ ಎಂದು ಪರಿಗಣಿಸಲಾಗುವುದಿಲ್ಲ ಎನ್ನುವ ಅಂಶದ ಬಗ್ಗೆಯೂ ಆಕ್ಷೇಪ ದಾಖಲಿಸಿದ್ದಾರೆ.</p><p>ಕೇಂದ್ರ ಸರ್ಕಾರದ ಪರವಾಗಿ ಗುರುವಾರ ವಾದ ಮಂಡಿಸಿದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ಇಸ್ಲಾಂ ಧರ್ಮವನ್ನು ಕನಿಷ್ಠ ಐದು ವರ್ಷಗಳಿಂದ ಪಾಲಿಸುತ್ತಿರುವ ವ್ಯಕ್ತಿ ಮಾತ್ರವೇ ವಕ್ಫ್ಗೆ ಆಸ್ತಿ ನೀಡಬಹುದು ಎಂದು ಕಾನೂನಿನಲ್ಲಿ ಹೇಳಿರುವುದನ್ನು ಸಮರ್ಥಿಸಿಕೊಂಡರು.</p><p>ವಕ್ಫ್ಗೆ ವಂಚನೆಯ ಮೂಲಕ ಆಸ್ತಿ ವರ್ಗಾಯಿಸುವುದನ್ನು ತಡೆಯುವ ಉದ್ದೇಶದಿಂದ ಈ ಅಂಶ ಸೇರಿಸಲಾಗಿದೆ ಎಂದು ಹೇಳಿದರು. ‘ಹಿಂದೂ ಒಬ್ಬ ದತ್ತಿ ಸಂಸ್ಥೆಯನ್ನು ಆರಂಭಿಸಬೇಕು ಎಂದಾದರೆ ಅದಕ್ಕೆ ಕಾನೂನಿನ ಅಡಿ ಮಾರ್ಗ ಇದೆ. ವಕ್ಫ್ ಏಕೆ ಬಳಕೆ ಮಾಡಿಕೊಳ್ಳಬೇಕು’ ಎಂದು ಅವರು ಪ್ರಶ್ನಿಸಿದರು. ಮುಸ್ಲಿಮೇತರರು ಟ್ರಸ್ಟ್ಗಳನ್ನು ಸೃಷ್ಟಿಸುವ ಮೂಲಕ ದತ್ತಿ ಕೆಲಸ ಮಾಡಬಹುದು ಎಂದರು.</p><p>‘ವಕ್ಫ್ ಆಸ್ತಿ ಸೃಷ್ಟಿಸುವುದಕ್ಕೂ ವಕ್ಫ್ಗೆ ಆಸ್ತಿ ದಾನ ಮಾಡುವುದಕ್ಕೂ ವ್ಯತ್ಯಾಸವಿದೆ. ಹಿಂದೂ ಧರ್ಮೀಯರು ವಕ್ಫ್ಗೆ ದಾನ ನೀಡಬಹುದು. ಆದರೆ ವಕ್ಫ್ ಆಸ್ತಿ ಸೃಷ್ಟಿಸುವ ಅವಕಾಶ ಇಲ್ಲ’ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>