<p><strong>ಕೋಲ್ಕತ್ತ</strong>: ಗಣರಾಜ್ಯೋತ್ಸವ ಹಿನ್ನೆಲೆಯಲ್ಲಿ ರಾಜಭವನದಲ್ಲಿ ನಡೆದ ಸಮಾರಂಭಕ್ಕೆ ಕೋಲ್ಕತ್ತ ಪೊಲೀಸ್ ಬ್ಯಾಂಡ್ಗೆ ಪ್ರವೇಶ ನಿರಾಕರಿಸಿದ್ದರ ಬಗ್ಗೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಕಿಡಿಕಾರಿದ್ದಾರೆ.</p><p>ಸಾಂಪ್ರದಾಯಿಕ ಚಹಾ ಕೂಟದ ಸಲುವಾಗಿ ಭಾನುವಾರ ಸಂಜೆ 4.29ಕ್ಕೆ ರಾಜಭವನಕ್ಕೆ ಬಂದ ಮಮತಾ ಅವರಿಗೆ, ಪೊಲೀಸ್ ಬ್ಯಾಂಡ್ ಹೊರಗೆ ಕಾಯುತ್ತಿರುವ ಬಗ್ಗೆ ತಿಳಿಸಲಾಯಿತು.</p><p>ಇದರಿಂದ ಬೇಸರಗೊಂಡ ಬ್ಯಾನರ್ಜಿ, ಸಮಾರಂಭದಲ್ಲಿ ಪೊಲೀಸ್ ಬ್ಯಾಂಡ್ ಪಾಲ್ಗೊಳ್ಳುವುದು ವಾಡಿಕೆ. ಪ್ರವೇಶ ನೀರಾಕರಿಸಿರುವುದು ಏಕೆ? ಎಂದು ಅಸಮಾಧಾನ ವ್ಯಕ್ತಪಡಿಸಿದರು. ಬ್ಯಾಂಡ್ ಒಳಗೆ ಬರಲು ಕೂಡಲೇ ಅನುಮತಿಸಬೇಕು ಇಲ್ಲದಿದ್ದರೆ, ತಾವು ರಾಜಭವನ ಪ್ರವೇಶಿಸುವುದಿಲ್ಲ ಎಂದು ಅಧಿಕಾರಿಗಳಿಗೆ ಎಚ್ಚರಿಸಿದರು.</p><p>ಬ್ಯಾಂಡ್ ಇದ್ದ ಗೇಟ್ ಬಳಿಗೆ ತೆರಳಿದ ಮಮತಾ, 'ಕೋಲ್ಕತ್ತ ಪೊಲೀಸರು ಭದ್ರತೆ ನೀಡುತ್ತಾರೆ; ಆದರೆ, ಬ್ಯಾಂಡ್ಗೆ ಪ್ರವೇಶ ಏಕಿಲ್ಲ' ಎಂದು ಕೇಳಿದರು.</p>.R-Day | ಸೇನೆ ಶಕ್ತಿ, ಸಂಸ್ಕೃತಿ ಸಮೃದ್ಧಿ ಪ್ರದರ್ಶನ; ಹಲವು ಪ್ರಥಮಗಳಿಗೆ ಸಾಕ್ಷಿ.Republic Day: ಸಾಂಸ್ಕೃತಿಕ ವೈವಿಧ್ಯತೆಗೆ ಸಾಕ್ಷಿಯಾದ ಕರ್ತವ್ಯ ಪಥ.<p>ಇಷ್ಟೆಲ್ಲಾ ಆದ ಮೇಲೆ, ಪೊಲೀಸ್ ಬ್ಯಾಂಡ್ಗೆ ಪ್ರವೇಶಾವಕಾಶ ನೀಡಲಾಯಿತು.</p><p>ಈ ಬೆಳವಣಿಗೆಯ ಪ್ರತಿಭಟನಾರ್ಥವಾಗಿ ಮುಖ್ಯ ಕಾರ್ಯದರ್ಶಿ ಮನೋಜ್ ಪಂತ್ ಅವರು ರಾಜಭವನಕ್ಕೆ ಪತ್ರ ಬರೆಯಲಿದ್ದಾರೆ ಎಂದು ಮೂಲಗಳು ತಿಳಿಸಿವೆ.</p><p>ಘಟನೆ ಕುರಿತು ಪ್ರತಿಕ್ರಿಯಿಸಿರುವ ರಾಜಭವನದ ಅಧಿಕಾರಿಯೊಬ್ಬರು, ವಾದ್ಯ ವೃಂದವು ಪ್ರತಿ ಸಲ ಕಾರ್ಯಕ್ರಮ ನಡೆಸಿಕೊಡುತ್ತಿದ್ದ ಸ್ಥಳದ ಬದಲು ಈ ಬಾರಿ ಬೇರೆಡೆ ವ್ಯವಸ್ಥೆ ಮಾಡಲಾಗಿತ್ತು. ಇದು ನನ್ನ ಗಮನಕ್ಕೆ ಬಂದಾಗ, ಕೂಡಲೇ ಮಧ್ಯ ಪ್ರವೇಶಿಸಿ ಸೂಕ್ತ ಸ್ಥಳ ನಿಗದಿ ಮಾಡಿದೆ ಎಂದು ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕೋಲ್ಕತ್ತ</strong>: ಗಣರಾಜ್ಯೋತ್ಸವ ಹಿನ್ನೆಲೆಯಲ್ಲಿ ರಾಜಭವನದಲ್ಲಿ ನಡೆದ ಸಮಾರಂಭಕ್ಕೆ ಕೋಲ್ಕತ್ತ ಪೊಲೀಸ್ ಬ್ಯಾಂಡ್ಗೆ ಪ್ರವೇಶ ನಿರಾಕರಿಸಿದ್ದರ ಬಗ್ಗೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಕಿಡಿಕಾರಿದ್ದಾರೆ.</p><p>ಸಾಂಪ್ರದಾಯಿಕ ಚಹಾ ಕೂಟದ ಸಲುವಾಗಿ ಭಾನುವಾರ ಸಂಜೆ 4.29ಕ್ಕೆ ರಾಜಭವನಕ್ಕೆ ಬಂದ ಮಮತಾ ಅವರಿಗೆ, ಪೊಲೀಸ್ ಬ್ಯಾಂಡ್ ಹೊರಗೆ ಕಾಯುತ್ತಿರುವ ಬಗ್ಗೆ ತಿಳಿಸಲಾಯಿತು.</p><p>ಇದರಿಂದ ಬೇಸರಗೊಂಡ ಬ್ಯಾನರ್ಜಿ, ಸಮಾರಂಭದಲ್ಲಿ ಪೊಲೀಸ್ ಬ್ಯಾಂಡ್ ಪಾಲ್ಗೊಳ್ಳುವುದು ವಾಡಿಕೆ. ಪ್ರವೇಶ ನೀರಾಕರಿಸಿರುವುದು ಏಕೆ? ಎಂದು ಅಸಮಾಧಾನ ವ್ಯಕ್ತಪಡಿಸಿದರು. ಬ್ಯಾಂಡ್ ಒಳಗೆ ಬರಲು ಕೂಡಲೇ ಅನುಮತಿಸಬೇಕು ಇಲ್ಲದಿದ್ದರೆ, ತಾವು ರಾಜಭವನ ಪ್ರವೇಶಿಸುವುದಿಲ್ಲ ಎಂದು ಅಧಿಕಾರಿಗಳಿಗೆ ಎಚ್ಚರಿಸಿದರು.</p><p>ಬ್ಯಾಂಡ್ ಇದ್ದ ಗೇಟ್ ಬಳಿಗೆ ತೆರಳಿದ ಮಮತಾ, 'ಕೋಲ್ಕತ್ತ ಪೊಲೀಸರು ಭದ್ರತೆ ನೀಡುತ್ತಾರೆ; ಆದರೆ, ಬ್ಯಾಂಡ್ಗೆ ಪ್ರವೇಶ ಏಕಿಲ್ಲ' ಎಂದು ಕೇಳಿದರು.</p>.R-Day | ಸೇನೆ ಶಕ್ತಿ, ಸಂಸ್ಕೃತಿ ಸಮೃದ್ಧಿ ಪ್ರದರ್ಶನ; ಹಲವು ಪ್ರಥಮಗಳಿಗೆ ಸಾಕ್ಷಿ.Republic Day: ಸಾಂಸ್ಕೃತಿಕ ವೈವಿಧ್ಯತೆಗೆ ಸಾಕ್ಷಿಯಾದ ಕರ್ತವ್ಯ ಪಥ.<p>ಇಷ್ಟೆಲ್ಲಾ ಆದ ಮೇಲೆ, ಪೊಲೀಸ್ ಬ್ಯಾಂಡ್ಗೆ ಪ್ರವೇಶಾವಕಾಶ ನೀಡಲಾಯಿತು.</p><p>ಈ ಬೆಳವಣಿಗೆಯ ಪ್ರತಿಭಟನಾರ್ಥವಾಗಿ ಮುಖ್ಯ ಕಾರ್ಯದರ್ಶಿ ಮನೋಜ್ ಪಂತ್ ಅವರು ರಾಜಭವನಕ್ಕೆ ಪತ್ರ ಬರೆಯಲಿದ್ದಾರೆ ಎಂದು ಮೂಲಗಳು ತಿಳಿಸಿವೆ.</p><p>ಘಟನೆ ಕುರಿತು ಪ್ರತಿಕ್ರಿಯಿಸಿರುವ ರಾಜಭವನದ ಅಧಿಕಾರಿಯೊಬ್ಬರು, ವಾದ್ಯ ವೃಂದವು ಪ್ರತಿ ಸಲ ಕಾರ್ಯಕ್ರಮ ನಡೆಸಿಕೊಡುತ್ತಿದ್ದ ಸ್ಥಳದ ಬದಲು ಈ ಬಾರಿ ಬೇರೆಡೆ ವ್ಯವಸ್ಥೆ ಮಾಡಲಾಗಿತ್ತು. ಇದು ನನ್ನ ಗಮನಕ್ಕೆ ಬಂದಾಗ, ಕೂಡಲೇ ಮಧ್ಯ ಪ್ರವೇಶಿಸಿ ಸೂಕ್ತ ಸ್ಥಳ ನಿಗದಿ ಮಾಡಿದೆ ಎಂದು ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>