<p><strong>ಕೋಲ್ಕತ್ತ</strong>: ಪಶ್ಚಿಮ ಬಂಗಾಳದಲ್ಲಿ ನಡೆಸಿದ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್ಐಆರ್) ಬಳಿಕ 63.66 ಲಕ್ಷ (ಶೇ 8.3ರಷ್ಟು) ಮತದಾರರ ಹೆಸರನ್ನು ಕೈಬಿಡಲಾಗಿದ್ದು, ರಾಜ್ಯದ ಒಟ್ಟು ಮತದಾರರ ಸಂಖ್ಯೆ 7.04 ಕೋಟಿಗೆ ಇಳಿದಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ. </p>.<p>ಸುಮಾರು 60.6 ಲಕ್ಷ ಮತದಾರರಿಗೆ ಸಂಬಂಧಿಸಿದಂತೆ ನ್ಯಾಯಾಂಗ ಅಧಿಕಾರಿಗಳಿಂದ ಪರಿಶೀಲನೆ ನಡೆಯಲಿದ್ದು, ಆ ಬಳಿಕವಷ್ಟೇ ಪಟ್ಟಿಯಲ್ಲಿ ಹೆಸರು ಅಳಿಸುವ ಮತ್ತು ಸೇರಿಸುವ ಕುರಿತು ಸ್ಪಷ್ಟ ಚಿತ್ರಣ ದೊರೆಯಲಿದೆ ಎಂದು ಅದು ಹೇಳಿದೆ. </p>.<p>‘ಎಸ್ಐಆರ್ ಭಾಗವಾಗಿ ನಡೆದ ಹೆಸರುಗಳನ್ನು ತೆಗೆದುಹಾಕುವುದು ಮತ್ತು ಸೇರಿಸುವ ಪ್ರಕ್ರಿಯೆ ಬಳಿಕ ಪಶ್ಚಿಮ ಬಂಗಾಳದಲ್ಲಿ 7.04 ಕೋಟಿ ಜನರು ಮತದಾರರ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ’ ಎಂದು ಮುಖ್ಯ ಚುನಾವಣಾ ಅಧಿಕಾರಿ ಮನೋಜ್ ಕುಮಾರ್ ಅಗರ್ವಾಲ್ ಶನಿವಾರ ಸುದ್ದಿಗಾರರಿಗೆ ತಿಳಿಸಿದರು.</p>.<div><blockquote>ಎಸ್ಐಆರ್ ಹೆಸರಿನಲ್ಲಿ ಬಂಗಾಳಿ ಜನರ ವಿರುದ್ಧದ ದ್ವೇಷ ಮತ್ತು ಕಿರುಕುಳ ತಾರಕಕ್ಕೇರಿದೆ ಅರ್ಹ ಮತದಾರರ ಹೆಸರು ಅಳಿಸಿದರೆ ಕಾನೂನು ಹೋರಾಟ ನಡೆಸಲಾಗುವುದು.</blockquote><span class="attribution">– ತನ್ಮಯ್ ಘೋಷ್, ಟಿಎಂಸಿ ನಾಯಕ</span></div>.<p>ನಮೂನೆ 7ರ ಮೂಲಕ 5.46 ಲಕ್ಷಕ್ಕೂ ಹೆಚ್ಚು ಮತದಾರರ ಹೆಸರನ್ನು ಅಳಿಸಲಾಗಿದ್ದರೆ, ನಮೂನೆ 6 ಮತ್ತು 6ಎ ಪರಿಶೀಲನೆ ಮೂಲಕ 1.82 ಲಕ್ಷಕ್ಕೂ ಹೆಚ್ಚು ಮತದಾರರನ್ನು ಪಟ್ಟಿಯಲ್ಲಿ ಸೇರಿಸಲಾಗಿದೆ ಎಂದು ಅವರು ಮಾಹಿತಿ ನೀಡಿದರು. </p>.<p>ನವೆಂಬರ್ 4ರಿಂದ 116 ದಿನಗಳವರೆಗೆ ರಾಜ್ಯವ್ಯಾಪಿ ಎಸ್ಐಆರ್ ಪ್ರಕ್ರಿಯೆ ನಡೆದಿದ್ದು, ಡಿಸೆಂಬರ್ 16ರಂದು ಕರಡು ಪಟ್ಟಿ ಪ್ರಕಟಿಸಲಾಗಿತ್ತು. </p>.<p><strong>‘ತೀರ್ಪು ಬಾಕಿ’:</strong></p>.<p>ಪಟ್ಟಿಯಲ್ಲಿ ಸುಮಾರು 60.06 ಲಕ್ಷ ಮತದಾರರನ್ನು ‘ತೀರ್ಪು ಬಾಕಿ’ ಎಂದು ಗುರುತಿಸಲಾಗಿದೆ. ಈ ಮತದಾರರ ಭವಿಷ್ಯವನ್ನು ಮುಂಬರುವ ವಾರಗಳಲ್ಲಿ ನ್ಯಾಯಾಂಗ ಅಧಿಕಾರಿಗಳು ನಿರ್ಧರಿಸಲಿದ್ದಾರೆ. ಇದು ಮತದಾರರ ಪಟ್ಟಿಯಲ್ಲಿನ ಏರಿಳಿತಕ್ಕೆ ಕಾರಣವಾಗುವ ಸಾಧ್ಯತೆಯಿದೆ.</p>.<p>‘ಆಯೋಗದಿಂದ ಅನುಮೋದನೆ ಪಡೆದ ಮತದಾರರು ಪಶ್ಚಿಮ ಬಂಗಾಳದ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಹಕ್ಕು ಚಲಾಯಿಸಲು ಅವಕಾಶ ಪಡೆಯಲಿದ್ದಾರೆ. ಮಾರ್ಚ್ ಮಧ್ಯಭಾಗದಲ್ಲಿ ಆಯೋಗವು ಚುನಾವಣೆಯ ವೇಳಾಪಟ್ಟಿ ಪ್ರಕಟಿಸುವ ಸಾಧ್ಯತೆ ಇದೆ’ ಎಂದು ಮೂಲಗಳು ಹೇಳಿವೆ. </p>.<p>ರಾಜ್ಯದಲ್ಲಿ 2025ರ ಆಗಸ್ಟ್ನ ಮತದಾರರ ಪಟ್ಟಿಯಲ್ಲಿ 7.66 ಕೋಟಿ ಮತದಾರರ ಹೆಸರುಗಳಿದ್ದವು. ಆಯೋಗ ಪ್ರಕಟಿಸಿರುವ ಎಸ್ಐಆರ್ನ ಕರಡು ಪಟ್ಟಿಯಲ್ಲಿ 58 ಲಕ್ಷ ಮತದಾರರ ಹೆಸರನ್ನು ವಲಸೆ, ಸಾವು, ನಕಲು ಎಂಬ ಕಾರಣಗಳನ್ನು ನೀಡಿ ಕೈಬಿಡಲಾಗಿತ್ತು. </p>.<p><strong>ತೆರೆದುಕೊಳ್ಳದ ವೆಬ್ ಪೋರ್ಟಲ್:</strong></p>.<p>ಆಯೋಗವು ಶನಿವಾರ ಹಂತ ಹಂತವಾಗಿ ಆಫ್ಲೈನ್ ವಿಧಾನದಲ್ಲಿ ಪಟ್ಟಿ ಪ್ರಕಟಿಸಿದೆ. ಈ ಪಟ್ಟಿಯ ಪ್ರತಿಗಳನ್ನು ಜಿಲ್ಲೆಗಳ ಎಸ್ಡಿಒ ಮತ್ತು ಬಿಡಿಒ ಕಚೇರಿಗಳಲ್ಲಿ ಪ್ರಕಟಿಸಲಾಗಿದೆ. ಆದರೆ ಈ ಕುರಿತು ಕ್ರೋಡೀಕೃತ ಪಟ್ಟಿಯ ‘ಸಾಫ್ಟ್’ ಪ್ರತಿಗಳು ಲಭ್ಯವಾಗಿಲ್ಲ. ಆಯೋಗದ ವೆಬ್ಸೈಟ್, ಪೋರ್ಟಲ್, ಮೊಬೈಲ್ ಅಪ್ಲಿಕೇಷನ್ಗಳು ತೆರೆದುಕೊಳ್ಳದ ಕಾರಣ ಮಾಹಿತಿ ಪಡೆಯಲು ಮತದಾರರು, ರಾಜಕೀಯ ಪಕ್ಷಗಳ ಕಾರ್ಯಕರ್ತರು ಹೆಣಗಾಡಿದರು. </p>.<p>ಪಟ್ಟಿಯಲ್ಲಿ ತಮ್ಮ ಹೆಸರು ಇದೆಯೇ ಇಲ್ಲವೇ ಎಂಬುದನ್ನು ತಿಳಿದುಕೊಳ್ಳಲು ಹೆಚ್ಚಿನ ಸಂಖ್ಯೆಯ ಜನರು ಎಸ್ಡಿಒ ಮತ್ತು ಬಿಡಿಒ ಕಚೇರಿಗಳಿಗೆ ಭೇಟಿ ನೀಡಿದರು. ಜನದಟ್ಟಣೆ ಹೆಚ್ಚಾದ ಕಾರಣ ಹಲವೆಡೆ ಉದ್ದನೆಯ ಸಾಲುಗಳು ಕಂಡುಬಂದವು.</p>.<p>‘ತಾಂತ್ರಿಕ ಕಾರಣದಿಂದ ವೆಬ್ ಪೋರ್ಟಲ್ ನಿಷ್ಕ್ರಿಯವಾಗಿತ್ತು. ಹೀಗಾಗಿ ಮತದಾರರಲ್ಲಿ ಗೊಂದಲ ಉಂಟಾಯಿತು’ ಎಂದು ಮೂಲಗಳು ತಿಳಿಸಿವೆ. ಆದರೆ ತಾಂತ್ರಿಕ ದೋಷದ ಕುರಿತು ಆಯೋಗದಿಂದ ಯಾವುದೇ ಅಧಿಕೃತ ಹೇಳಿಕೆ ಬಂದಿಲ್ಲ.</p>.<p><strong>ನಾದಿಯಾ, ಉತ್ತರ ಕೋಲ್ಕತ್ತ ಹೂಗ್ಲಿಯಲ್ಲಿ ಭಾರಿ ಕಡಿತ</strong></p><p>ಬಾಂಗ್ಲಾದೇಶದ ಗಡಿಯಲ್ಲಿರುವ ನಾದಿಯಾ ಜಿಲ್ಲೆಯಲ್ಲಿ ಸುಮಾರು 2.73 ಲಕ್ಷ ಹೆಸರುಗಳನ್ನು ಪಟ್ಟಿಯಿಂದ ಕೈಬಿಡಲಾಗಿದೆ. ಎಸ್ಐಆರ್ ಆರಂಭಕ್ಕೂ ಮುನ್ನ ಜಿಲ್ಲೆಯಲ್ಲಿ 44.18 ಲಕ್ಷ ಇದ್ದ ಮತದಾರರ ಸಂಖ್ಯೆ ಎಸ್ಐಆರ್ನ ಕರಡು ಪಟ್ಟಿಯಲ್ಲಿ 42.02 ಲಕ್ಷಕ್ಕೆ ಕುಸಿದಿತ್ತು. ಅದೀಗ 41.45 ಲಕ್ಷಕ್ಕೆ ಇಳಿದಿದೆ. </p><p>ಉತ್ತರ ಕೋಲ್ಕತ್ತ ವಲಯದಲ್ಲಿ 4.07 ಲಕ್ಷ ಮತದಾರರ ಹೆಸರನ್ನು ಅಳಿಸಲಾಗಿದೆ. ಇವುಗಳಲ್ಲಿ 3.90 ಲಕ್ಷ ಹೆಸರುಗಳನ್ನು ಕರಡು ಹಂತದಲ್ಲಿ ಇನ್ನೂ 17000 ಹೆಸರುಗಳನ್ನು ಅಂತಿಮ ಹಂತದಲ್ಲಿ ತೆಗೆದುಹಾಕಲಾಗಿದೆ. </p><p>ಬಂಕುರಾ ಜಿಲ್ಲೆಯಲ್ಲಿ 1.18 ಲಕ್ಷ ಉತ್ತರ ಬಂಗಾಳದ ಅಲಿಪುರ್ದೂರ್ನಲ್ಲಿ 1.02 ಲಕ್ಷ ಮತದಾರರ ಹೆಸರನ್ನು ಕೈಬಿಡಲಾಗಿದೆ. ಹೂಗ್ಲಿಯ ಮತದಾರರ ಪಟ್ಟಿಯಿಂದ 3.34 ಲಕ್ಷ ಮತದಾರರನ್ನು ಕೈಬಿಡಲಾಗಿದೆ. ಇಲ್ಲಿನ 1.73 ಲಕ್ಷ ಮತದಾರರನ್ನು ‘ತೀರ್ಪು ಬಾಕಿ’ ಎಂದು ಗುರುತಿಸಲಾಗಿದೆ. </p><p>ಎಸ್ಐಆರ್ನ ಅಂತಿಮ ಪಟ್ಟಿ ಆಧರಿಸಿ ರಾಜಕೀಯ ಪಕ್ಷಗಳು ಬೂತ್ ಮಟ್ಟದಲ್ಲಿ ಪರಿಶೀಲನಾ ಕಾರ್ಯವನ್ನು ಈಗಾಗಲೇ ಆರಂಭಿಸಿವೆ. ವಿವಿಧ ಪಕ್ಷಗಳ ಕಾರ್ಯಕರ್ತರು ಪಟ್ಟಿಗಳನ್ನು ಪಡೆದು ಮತದಾರರ ಹೆಸರುಗಳ ಪರಿಶೀಲಿಸುತ್ತಿದ್ದು ಕೆಲ ಮೇಲ್ಮನವಿಗಳಿಗೂ ಸಿದ್ಧತೆ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ.</p><p><strong>ಭವಾನಿಪುರ: 47000 ಮತದಾರರು ಹೊರಕ್ಕೆ </strong></p><p>ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಪ್ರತಿನಿಧಿಸುವ ಕ್ಷೇತ್ರವಾದ ಭವಾನಿಪುರದಲ್ಲಿ ಒಟ್ಟು 47000 ಮತದಾರರ ಹೆಸರನ್ನು ತೆಗೆಯಲಾಗಿದೆ. ಅಲ್ಲದೆ 14000ಕ್ಕೂ ಹೆಚ್ಚು ಮತದಾರರ ಹೆಸರನ್ನು ‘ತೀರ್ಪು ಬಾಕಿ’ ಎಂದು ಗುರುತಿಸಲಾಗಿದೆ. </p><p>ಭವಾನಿಪುರ ಕ್ಷೇತ್ರದಲ್ಲಿ 2025ರ ನವೆಂಬರ್ 4ರಂದು 206295 ಮತದಾರರಿದ್ದರು. ಎಸ್ಐಆರ್ನ ಕರಡು ಪಟ್ಟಿ ಪ್ರಕಟವಾದಾಗ 44786 ಮತದಾರರ ಹೆಸರನ್ನು ಅಳಿಸಲಾಗಿತ್ತು. ಶನಿವಾರ ಪ್ರಕಟಗೊಂಡಿರುವ ಅಂತಿಮ ಪಟ್ಟಿಯಲ್ಲಿ ಹೆಚ್ಚುವರಿಯಾಗಿ 2324 ಹೆಸರುಗಳನ್ನು ಕೈಬಿಡಲಾಗಿದೆ. </p><p>2021ರಲ್ಲಿ ಭವಾನಿಪುರದಲ್ಲಿ ನಡೆದ ಉಪ ಚುನಾವಣೆಯಲ್ಲಿ ಮಮತಾ ಬ್ಯಾನರ್ಜಿ 58000ಕ್ಕೂ ಹೆಚ್ಚು ಮತಗಳ ಅಂತರದಿಂದ ಜಯಗಳಿಸಿದ್ದರು. ಈಗ ಈ ಕ್ಷೇತ್ರದಲ್ಲಿ ಕೈಬಿಟ್ಟಿರುವ ಮತದಾರರ ಸಂಖ್ಯೆಯೇ 47000 ದಾಟಿದೆ.</p>.<p><strong>ತಮಿಳುನಾಡು: 1.18 ಕೋಟಿ ಯುವ ಮತದಾರರು </strong></p><p>ತಮಿಳುನಾಡಿನಲ್ಲಿ ಸುಮಾರು 1.18 ಕೋಟಿ ಯುವ ಮತದಾರರಿದ್ದಾರೆ ಎಂದು ಚುನಾವಣಾ ಆಯೋಗ ತಿಳಿಸಿದೆ. </p><p>ಯುವ ಜನರನ್ನು ನೋಂದಾಯಿಸಲು 3060 ಸಹಾಯಕ ಚುನಾವಣಾ ನೋಂದಣಿ ಅಧಿಕಾರಿಗಳನ್ನು ನಿಯೋಜಿಸಲಾಗಿದೆ ಎಂದು ಆಯೋಗದ ಅಧಿಕಾರಿಗಳು ತಿಳಿಸಿದ್ದಾರೆ. </p><p> ತಮಿಳುನಾಡಿನಲ್ಲಿ ಮುಂಬರಲಿರುವ ವಿಧಾನಸಭಾ ಚುನಾವಣಾ ಸಿದ್ಧತೆಗಳ ಕುರಿತು ಫೆ. 26 ಮತ್ತು 27ರಂದು ಪರಿಶೀಲನಾ ಸಭೆ ನಡೆಯಿತು. ಅದರ ಬಳಿಕ ಆಯೋಗವು ಈ ಮಾಹಿತಿಯನ್ನು ಮಾಧ್ಯಮಗಳೊಂದಿಗೆ ಹಂಚಿಕೊಂಡಿದೆ. </p><p>ಯುವ ಮತದಾರರ ಹೆಸರು ಸೇರ್ಪಡೆಗೆ ಕಾಲೇಜುಗಳಲ್ಲಿ ಅಭಿಯಾನಗಳನ್ನು ನಡೆಸಲು ಆಯೋಗ ಈ ಅಧಿಕಾರಿಗಳಿಗೆ ತಿಳಿಸಿದೆ. </p><p>ಫೆಬ್ರುವರಿ 23ರಂದು ಆಯೋಗ ಪ್ರಕಟಿಸಿರುವ ಅಂತಿಮ ಮತದಾರರ ಪಟ್ಟಿಯಲ್ಲಿ ಯುವ ಮತದಾರರ ಸಂಖ್ಯೆಯಲ್ಲಿ ಹೆಚ್ಚಳವಾಗಿರುವುದು ದಾಖಲಾಗಿದೆ. ಅಂದರೆ 18ರಿಂದ 19ರ ವಯಸ್ಸಿನ 12.51 ಲಕ್ಷ (ಮೊದಲ ಬಾರಿಗೆ ಮತಚಲಾಯಿಸುವವರು) ಮತ್ತು 20ರಿಂದ 29 ವಯಸ್ಸಿನ 1.05 ಕೋಟಿ ಮತದಾರರಿದ್ದಾರೆ ಎಂದು ತಿಳಿಸಲಾಗಿದೆ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕೋಲ್ಕತ್ತ</strong>: ಪಶ್ಚಿಮ ಬಂಗಾಳದಲ್ಲಿ ನಡೆಸಿದ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್ಐಆರ್) ಬಳಿಕ 63.66 ಲಕ್ಷ (ಶೇ 8.3ರಷ್ಟು) ಮತದಾರರ ಹೆಸರನ್ನು ಕೈಬಿಡಲಾಗಿದ್ದು, ರಾಜ್ಯದ ಒಟ್ಟು ಮತದಾರರ ಸಂಖ್ಯೆ 7.04 ಕೋಟಿಗೆ ಇಳಿದಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ. </p>.<p>ಸುಮಾರು 60.6 ಲಕ್ಷ ಮತದಾರರಿಗೆ ಸಂಬಂಧಿಸಿದಂತೆ ನ್ಯಾಯಾಂಗ ಅಧಿಕಾರಿಗಳಿಂದ ಪರಿಶೀಲನೆ ನಡೆಯಲಿದ್ದು, ಆ ಬಳಿಕವಷ್ಟೇ ಪಟ್ಟಿಯಲ್ಲಿ ಹೆಸರು ಅಳಿಸುವ ಮತ್ತು ಸೇರಿಸುವ ಕುರಿತು ಸ್ಪಷ್ಟ ಚಿತ್ರಣ ದೊರೆಯಲಿದೆ ಎಂದು ಅದು ಹೇಳಿದೆ. </p>.<p>‘ಎಸ್ಐಆರ್ ಭಾಗವಾಗಿ ನಡೆದ ಹೆಸರುಗಳನ್ನು ತೆಗೆದುಹಾಕುವುದು ಮತ್ತು ಸೇರಿಸುವ ಪ್ರಕ್ರಿಯೆ ಬಳಿಕ ಪಶ್ಚಿಮ ಬಂಗಾಳದಲ್ಲಿ 7.04 ಕೋಟಿ ಜನರು ಮತದಾರರ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ’ ಎಂದು ಮುಖ್ಯ ಚುನಾವಣಾ ಅಧಿಕಾರಿ ಮನೋಜ್ ಕುಮಾರ್ ಅಗರ್ವಾಲ್ ಶನಿವಾರ ಸುದ್ದಿಗಾರರಿಗೆ ತಿಳಿಸಿದರು.</p>.<div><blockquote>ಎಸ್ಐಆರ್ ಹೆಸರಿನಲ್ಲಿ ಬಂಗಾಳಿ ಜನರ ವಿರುದ್ಧದ ದ್ವೇಷ ಮತ್ತು ಕಿರುಕುಳ ತಾರಕಕ್ಕೇರಿದೆ ಅರ್ಹ ಮತದಾರರ ಹೆಸರು ಅಳಿಸಿದರೆ ಕಾನೂನು ಹೋರಾಟ ನಡೆಸಲಾಗುವುದು.</blockquote><span class="attribution">– ತನ್ಮಯ್ ಘೋಷ್, ಟಿಎಂಸಿ ನಾಯಕ</span></div>.<p>ನಮೂನೆ 7ರ ಮೂಲಕ 5.46 ಲಕ್ಷಕ್ಕೂ ಹೆಚ್ಚು ಮತದಾರರ ಹೆಸರನ್ನು ಅಳಿಸಲಾಗಿದ್ದರೆ, ನಮೂನೆ 6 ಮತ್ತು 6ಎ ಪರಿಶೀಲನೆ ಮೂಲಕ 1.82 ಲಕ್ಷಕ್ಕೂ ಹೆಚ್ಚು ಮತದಾರರನ್ನು ಪಟ್ಟಿಯಲ್ಲಿ ಸೇರಿಸಲಾಗಿದೆ ಎಂದು ಅವರು ಮಾಹಿತಿ ನೀಡಿದರು. </p>.<p>ನವೆಂಬರ್ 4ರಿಂದ 116 ದಿನಗಳವರೆಗೆ ರಾಜ್ಯವ್ಯಾಪಿ ಎಸ್ಐಆರ್ ಪ್ರಕ್ರಿಯೆ ನಡೆದಿದ್ದು, ಡಿಸೆಂಬರ್ 16ರಂದು ಕರಡು ಪಟ್ಟಿ ಪ್ರಕಟಿಸಲಾಗಿತ್ತು. </p>.<p><strong>‘ತೀರ್ಪು ಬಾಕಿ’:</strong></p>.<p>ಪಟ್ಟಿಯಲ್ಲಿ ಸುಮಾರು 60.06 ಲಕ್ಷ ಮತದಾರರನ್ನು ‘ತೀರ್ಪು ಬಾಕಿ’ ಎಂದು ಗುರುತಿಸಲಾಗಿದೆ. ಈ ಮತದಾರರ ಭವಿಷ್ಯವನ್ನು ಮುಂಬರುವ ವಾರಗಳಲ್ಲಿ ನ್ಯಾಯಾಂಗ ಅಧಿಕಾರಿಗಳು ನಿರ್ಧರಿಸಲಿದ್ದಾರೆ. ಇದು ಮತದಾರರ ಪಟ್ಟಿಯಲ್ಲಿನ ಏರಿಳಿತಕ್ಕೆ ಕಾರಣವಾಗುವ ಸಾಧ್ಯತೆಯಿದೆ.</p>.<p>‘ಆಯೋಗದಿಂದ ಅನುಮೋದನೆ ಪಡೆದ ಮತದಾರರು ಪಶ್ಚಿಮ ಬಂಗಾಳದ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಹಕ್ಕು ಚಲಾಯಿಸಲು ಅವಕಾಶ ಪಡೆಯಲಿದ್ದಾರೆ. ಮಾರ್ಚ್ ಮಧ್ಯಭಾಗದಲ್ಲಿ ಆಯೋಗವು ಚುನಾವಣೆಯ ವೇಳಾಪಟ್ಟಿ ಪ್ರಕಟಿಸುವ ಸಾಧ್ಯತೆ ಇದೆ’ ಎಂದು ಮೂಲಗಳು ಹೇಳಿವೆ. </p>.<p>ರಾಜ್ಯದಲ್ಲಿ 2025ರ ಆಗಸ್ಟ್ನ ಮತದಾರರ ಪಟ್ಟಿಯಲ್ಲಿ 7.66 ಕೋಟಿ ಮತದಾರರ ಹೆಸರುಗಳಿದ್ದವು. ಆಯೋಗ ಪ್ರಕಟಿಸಿರುವ ಎಸ್ಐಆರ್ನ ಕರಡು ಪಟ್ಟಿಯಲ್ಲಿ 58 ಲಕ್ಷ ಮತದಾರರ ಹೆಸರನ್ನು ವಲಸೆ, ಸಾವು, ನಕಲು ಎಂಬ ಕಾರಣಗಳನ್ನು ನೀಡಿ ಕೈಬಿಡಲಾಗಿತ್ತು. </p>.<p><strong>ತೆರೆದುಕೊಳ್ಳದ ವೆಬ್ ಪೋರ್ಟಲ್:</strong></p>.<p>ಆಯೋಗವು ಶನಿವಾರ ಹಂತ ಹಂತವಾಗಿ ಆಫ್ಲೈನ್ ವಿಧಾನದಲ್ಲಿ ಪಟ್ಟಿ ಪ್ರಕಟಿಸಿದೆ. ಈ ಪಟ್ಟಿಯ ಪ್ರತಿಗಳನ್ನು ಜಿಲ್ಲೆಗಳ ಎಸ್ಡಿಒ ಮತ್ತು ಬಿಡಿಒ ಕಚೇರಿಗಳಲ್ಲಿ ಪ್ರಕಟಿಸಲಾಗಿದೆ. ಆದರೆ ಈ ಕುರಿತು ಕ್ರೋಡೀಕೃತ ಪಟ್ಟಿಯ ‘ಸಾಫ್ಟ್’ ಪ್ರತಿಗಳು ಲಭ್ಯವಾಗಿಲ್ಲ. ಆಯೋಗದ ವೆಬ್ಸೈಟ್, ಪೋರ್ಟಲ್, ಮೊಬೈಲ್ ಅಪ್ಲಿಕೇಷನ್ಗಳು ತೆರೆದುಕೊಳ್ಳದ ಕಾರಣ ಮಾಹಿತಿ ಪಡೆಯಲು ಮತದಾರರು, ರಾಜಕೀಯ ಪಕ್ಷಗಳ ಕಾರ್ಯಕರ್ತರು ಹೆಣಗಾಡಿದರು. </p>.<p>ಪಟ್ಟಿಯಲ್ಲಿ ತಮ್ಮ ಹೆಸರು ಇದೆಯೇ ಇಲ್ಲವೇ ಎಂಬುದನ್ನು ತಿಳಿದುಕೊಳ್ಳಲು ಹೆಚ್ಚಿನ ಸಂಖ್ಯೆಯ ಜನರು ಎಸ್ಡಿಒ ಮತ್ತು ಬಿಡಿಒ ಕಚೇರಿಗಳಿಗೆ ಭೇಟಿ ನೀಡಿದರು. ಜನದಟ್ಟಣೆ ಹೆಚ್ಚಾದ ಕಾರಣ ಹಲವೆಡೆ ಉದ್ದನೆಯ ಸಾಲುಗಳು ಕಂಡುಬಂದವು.</p>.<p>‘ತಾಂತ್ರಿಕ ಕಾರಣದಿಂದ ವೆಬ್ ಪೋರ್ಟಲ್ ನಿಷ್ಕ್ರಿಯವಾಗಿತ್ತು. ಹೀಗಾಗಿ ಮತದಾರರಲ್ಲಿ ಗೊಂದಲ ಉಂಟಾಯಿತು’ ಎಂದು ಮೂಲಗಳು ತಿಳಿಸಿವೆ. ಆದರೆ ತಾಂತ್ರಿಕ ದೋಷದ ಕುರಿತು ಆಯೋಗದಿಂದ ಯಾವುದೇ ಅಧಿಕೃತ ಹೇಳಿಕೆ ಬಂದಿಲ್ಲ.</p>.<p><strong>ನಾದಿಯಾ, ಉತ್ತರ ಕೋಲ್ಕತ್ತ ಹೂಗ್ಲಿಯಲ್ಲಿ ಭಾರಿ ಕಡಿತ</strong></p><p>ಬಾಂಗ್ಲಾದೇಶದ ಗಡಿಯಲ್ಲಿರುವ ನಾದಿಯಾ ಜಿಲ್ಲೆಯಲ್ಲಿ ಸುಮಾರು 2.73 ಲಕ್ಷ ಹೆಸರುಗಳನ್ನು ಪಟ್ಟಿಯಿಂದ ಕೈಬಿಡಲಾಗಿದೆ. ಎಸ್ಐಆರ್ ಆರಂಭಕ್ಕೂ ಮುನ್ನ ಜಿಲ್ಲೆಯಲ್ಲಿ 44.18 ಲಕ್ಷ ಇದ್ದ ಮತದಾರರ ಸಂಖ್ಯೆ ಎಸ್ಐಆರ್ನ ಕರಡು ಪಟ್ಟಿಯಲ್ಲಿ 42.02 ಲಕ್ಷಕ್ಕೆ ಕುಸಿದಿತ್ತು. ಅದೀಗ 41.45 ಲಕ್ಷಕ್ಕೆ ಇಳಿದಿದೆ. </p><p>ಉತ್ತರ ಕೋಲ್ಕತ್ತ ವಲಯದಲ್ಲಿ 4.07 ಲಕ್ಷ ಮತದಾರರ ಹೆಸರನ್ನು ಅಳಿಸಲಾಗಿದೆ. ಇವುಗಳಲ್ಲಿ 3.90 ಲಕ್ಷ ಹೆಸರುಗಳನ್ನು ಕರಡು ಹಂತದಲ್ಲಿ ಇನ್ನೂ 17000 ಹೆಸರುಗಳನ್ನು ಅಂತಿಮ ಹಂತದಲ್ಲಿ ತೆಗೆದುಹಾಕಲಾಗಿದೆ. </p><p>ಬಂಕುರಾ ಜಿಲ್ಲೆಯಲ್ಲಿ 1.18 ಲಕ್ಷ ಉತ್ತರ ಬಂಗಾಳದ ಅಲಿಪುರ್ದೂರ್ನಲ್ಲಿ 1.02 ಲಕ್ಷ ಮತದಾರರ ಹೆಸರನ್ನು ಕೈಬಿಡಲಾಗಿದೆ. ಹೂಗ್ಲಿಯ ಮತದಾರರ ಪಟ್ಟಿಯಿಂದ 3.34 ಲಕ್ಷ ಮತದಾರರನ್ನು ಕೈಬಿಡಲಾಗಿದೆ. ಇಲ್ಲಿನ 1.73 ಲಕ್ಷ ಮತದಾರರನ್ನು ‘ತೀರ್ಪು ಬಾಕಿ’ ಎಂದು ಗುರುತಿಸಲಾಗಿದೆ. </p><p>ಎಸ್ಐಆರ್ನ ಅಂತಿಮ ಪಟ್ಟಿ ಆಧರಿಸಿ ರಾಜಕೀಯ ಪಕ್ಷಗಳು ಬೂತ್ ಮಟ್ಟದಲ್ಲಿ ಪರಿಶೀಲನಾ ಕಾರ್ಯವನ್ನು ಈಗಾಗಲೇ ಆರಂಭಿಸಿವೆ. ವಿವಿಧ ಪಕ್ಷಗಳ ಕಾರ್ಯಕರ್ತರು ಪಟ್ಟಿಗಳನ್ನು ಪಡೆದು ಮತದಾರರ ಹೆಸರುಗಳ ಪರಿಶೀಲಿಸುತ್ತಿದ್ದು ಕೆಲ ಮೇಲ್ಮನವಿಗಳಿಗೂ ಸಿದ್ಧತೆ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ.</p><p><strong>ಭವಾನಿಪುರ: 47000 ಮತದಾರರು ಹೊರಕ್ಕೆ </strong></p><p>ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಪ್ರತಿನಿಧಿಸುವ ಕ್ಷೇತ್ರವಾದ ಭವಾನಿಪುರದಲ್ಲಿ ಒಟ್ಟು 47000 ಮತದಾರರ ಹೆಸರನ್ನು ತೆಗೆಯಲಾಗಿದೆ. ಅಲ್ಲದೆ 14000ಕ್ಕೂ ಹೆಚ್ಚು ಮತದಾರರ ಹೆಸರನ್ನು ‘ತೀರ್ಪು ಬಾಕಿ’ ಎಂದು ಗುರುತಿಸಲಾಗಿದೆ. </p><p>ಭವಾನಿಪುರ ಕ್ಷೇತ್ರದಲ್ಲಿ 2025ರ ನವೆಂಬರ್ 4ರಂದು 206295 ಮತದಾರರಿದ್ದರು. ಎಸ್ಐಆರ್ನ ಕರಡು ಪಟ್ಟಿ ಪ್ರಕಟವಾದಾಗ 44786 ಮತದಾರರ ಹೆಸರನ್ನು ಅಳಿಸಲಾಗಿತ್ತು. ಶನಿವಾರ ಪ್ರಕಟಗೊಂಡಿರುವ ಅಂತಿಮ ಪಟ್ಟಿಯಲ್ಲಿ ಹೆಚ್ಚುವರಿಯಾಗಿ 2324 ಹೆಸರುಗಳನ್ನು ಕೈಬಿಡಲಾಗಿದೆ. </p><p>2021ರಲ್ಲಿ ಭವಾನಿಪುರದಲ್ಲಿ ನಡೆದ ಉಪ ಚುನಾವಣೆಯಲ್ಲಿ ಮಮತಾ ಬ್ಯಾನರ್ಜಿ 58000ಕ್ಕೂ ಹೆಚ್ಚು ಮತಗಳ ಅಂತರದಿಂದ ಜಯಗಳಿಸಿದ್ದರು. ಈಗ ಈ ಕ್ಷೇತ್ರದಲ್ಲಿ ಕೈಬಿಟ್ಟಿರುವ ಮತದಾರರ ಸಂಖ್ಯೆಯೇ 47000 ದಾಟಿದೆ.</p>.<p><strong>ತಮಿಳುನಾಡು: 1.18 ಕೋಟಿ ಯುವ ಮತದಾರರು </strong></p><p>ತಮಿಳುನಾಡಿನಲ್ಲಿ ಸುಮಾರು 1.18 ಕೋಟಿ ಯುವ ಮತದಾರರಿದ್ದಾರೆ ಎಂದು ಚುನಾವಣಾ ಆಯೋಗ ತಿಳಿಸಿದೆ. </p><p>ಯುವ ಜನರನ್ನು ನೋಂದಾಯಿಸಲು 3060 ಸಹಾಯಕ ಚುನಾವಣಾ ನೋಂದಣಿ ಅಧಿಕಾರಿಗಳನ್ನು ನಿಯೋಜಿಸಲಾಗಿದೆ ಎಂದು ಆಯೋಗದ ಅಧಿಕಾರಿಗಳು ತಿಳಿಸಿದ್ದಾರೆ. </p><p> ತಮಿಳುನಾಡಿನಲ್ಲಿ ಮುಂಬರಲಿರುವ ವಿಧಾನಸಭಾ ಚುನಾವಣಾ ಸಿದ್ಧತೆಗಳ ಕುರಿತು ಫೆ. 26 ಮತ್ತು 27ರಂದು ಪರಿಶೀಲನಾ ಸಭೆ ನಡೆಯಿತು. ಅದರ ಬಳಿಕ ಆಯೋಗವು ಈ ಮಾಹಿತಿಯನ್ನು ಮಾಧ್ಯಮಗಳೊಂದಿಗೆ ಹಂಚಿಕೊಂಡಿದೆ. </p><p>ಯುವ ಮತದಾರರ ಹೆಸರು ಸೇರ್ಪಡೆಗೆ ಕಾಲೇಜುಗಳಲ್ಲಿ ಅಭಿಯಾನಗಳನ್ನು ನಡೆಸಲು ಆಯೋಗ ಈ ಅಧಿಕಾರಿಗಳಿಗೆ ತಿಳಿಸಿದೆ. </p><p>ಫೆಬ್ರುವರಿ 23ರಂದು ಆಯೋಗ ಪ್ರಕಟಿಸಿರುವ ಅಂತಿಮ ಮತದಾರರ ಪಟ್ಟಿಯಲ್ಲಿ ಯುವ ಮತದಾರರ ಸಂಖ್ಯೆಯಲ್ಲಿ ಹೆಚ್ಚಳವಾಗಿರುವುದು ದಾಖಲಾಗಿದೆ. ಅಂದರೆ 18ರಿಂದ 19ರ ವಯಸ್ಸಿನ 12.51 ಲಕ್ಷ (ಮೊದಲ ಬಾರಿಗೆ ಮತಚಲಾಯಿಸುವವರು) ಮತ್ತು 20ರಿಂದ 29 ವಯಸ್ಸಿನ 1.05 ಕೋಟಿ ಮತದಾರರಿದ್ದಾರೆ ಎಂದು ತಿಳಿಸಲಾಗಿದೆ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>