ವಿಡಿಯೊ ಸಂದೇಶವೊಂದರಲ್ಲಿ ಟ್ರಸ್ಟ್ನ ಈ ನಡೆಯನ್ನು ಪ್ರಶ್ನಿಸಿರುವ ತೃಪ್ತಿ ದೇಸಾಯಿ, ಇದು ದೇವಾಲಯದ ಮಂಡಳಿಯವರು ಭಕ್ತರಿಗೆ ಮಾಡುತ್ತಿರುವ ಅವಮಾನ ಹಾಗೂ ಅವರಿಗೆ ಸಂವಿಧಾನ ನೀಡಿರುವ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹತ್ತಿಕ್ಕುವ ಪ್ರಯತ್ನ ಎಂದು ದೂರಿದ್ದಾರೆ. ‘ಈ ನಿಯಮಗಳನ್ನು ತೆಗೆಯದಿದ್ದರೆ, ನಾನು ನನ್ನ ಇತರೆ ಹೋರಾಟಗಾರರೊಂದಿಗೆ ಶಿರಡಿಗೆ ಬಂದು, ಆ ಕೆಲಸ ಮಾಡುತ್ತೇವೆ‘ ಎಂದು ಎಚ್ಚರಿಸಿದ್ದಾರೆ.