ನವದೆಹಲಿ: ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಮಾಡುವ ಬದಲು ವಿಶ್ವ ವಿದ್ಯಾನಿಲಯವೊಂದನ್ನು ಯಾಕೆ ಸ್ಥಾಪಿಸಬಾರದು ಎಂದು ದೆಹಲಿಯ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಕೇಳಿದ್ದಾರೆ.
ಹಿಂದೂ ಮತ್ತು ಮುಸ್ಲಿಂ ಸಮುದಾಯದವರಲ್ಲಿ ಕೇಳಿ. ಈ ಎರಡೂ ಸಮುದಾಯದವರು ಒಪ್ಪುವುದಾದರೆ ಅಲ್ಲೊಂದು ವಿಶ್ವ ವಿದ್ಯಾನಿಲಯ ಸ್ಥಾಪಿಸಿ, ಹಿಂದೂ, ಮುಸ್ಲಿಂ, ಕ್ರೈಸ್ತರ, ಭಾರತೀಯರ ಮತ್ತು ವಿದೇಶಿಯರ ಮಕ್ಕಳು ಜತೆಯಾಗಿ ಕಲಿಯಲಿ. ದೇವಾಲಯ ನಿರ್ಮಿಸುವುದರಿಂದ ರಾಮರಾಜ್ಯ ನಿರ್ಮಾಣವಾಗುವುದಿಲ್ಲ, ಶಿಕ್ಷಣದಿಂದ ರಾಮರಾಜ್ಯ ನಿರ್ಮಾಣವಾಗುತ್ತದೆ ಎಂದು ಎನ್ಡಿಟಿವಿ ಜತೆ ಮಾತನಾಡಿದ ಸಿಸೋಡಿಯಾ ಹೇಳಿದ್ದಾರೆ.